ಆರೋಗ್ಯ, ಮಾನಸಿಕ ಹಾಗೂ ದೈಹಿಕ ಕ್ಷಮತೆಗೆ ಕ್ರೀಡೆ ಅಗತ್ಯ: ಫಾ. ವಿನ್ಸೆಂಟ್ ಮೊಂತೆರೊ
ಕಿನ್ನಿಗೊಳಿ, ಎ.22: ಆರೋಗ್ಯ, ಮಾನಸಿಕ ಹಾಗೂ ದೈಹಿಕ ಕ್ಷಮತೆಗೆ ಕ್ರೀಡೆ ಅಗತ್ಯ ಎಂದು ಕಿನ್ನಿಗೋಳಿ ಚರ್ಚ್ನಧರ್ಮಗುರು ಫಾ. ವಿನ್ಸೆಂಟ್ ಮೊಂತೆರೊ ಹೇಳಿದರು.
ಕಿನ್ನಿಗೋಳಿ ಐ.ಸಿ.ವೈ. ಎಮ್ ಆಶ್ರಯದಲ್ಲಿ ಕಿನ್ನಿಗೋಳಿ ಲಿಟ್ಲ್ ಫ್ಲವರ್ ಶಾಲಾ ಮೈದಾನದಲ್ಲಿ ನಡೆದ ಉಭಯ ಜಿಲ್ಲೆಗಳ ಅಂತರ್ ಚರ್ಚ್ಗಳ ಪುಟ್ಬಾಲ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.
ಬಜಪೆ ಪಿ. ಯು . ಕಾಲೇಜಿನ ಪ್ರಿನ್ಸಿಪಾಲ್ ಬ್ರದರ್ ಹೆಕ್ಟರ್ ಪಿಂಟೋ, ಕಿನ್ನಿಗೋಳಿ ಮೇರಿವೆಲ್ ಕಾನ್ವಂಟ್ ಮುಖ್ಯಸ್ಥೆ ಭಗಿನಿ ವಿತಾಲಿಸ, ಐ.ಸಿ. ವೈ. ಎಮ್ನ ಅನಿತಾ ಡಿಸೋಜ, ಜೋಯಲ್ ನೊರೋನ್ಹ, ಅನಿಲ್ರಾವ್ ಮೆಲಿಷಾ ಡಿಸೋಜ, ಡೆಲ್ವಿನ್ ಗೋವಿಸ್, ಮರಿಸ್ಸಾ ಡಿಸೋಜ ಉಪಸ್ಥಿತರಿದ್ದರು
Next Story