Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಹಸಿದಿದ್ದು, ಹಣವಿಲ್ಲದವರಿಗೆ ಪ್ರಕಾಶ್‌ರ...

ಹಸಿದಿದ್ದು, ಹಣವಿಲ್ಲದವರಿಗೆ ಪ್ರಕಾಶ್‌ರ ಹೊಟೇಲಲ್ಲಿ ಉಚಿತ ಊಟ!

ವಾರ್ತಾಭಾರತಿವಾರ್ತಾಭಾರತಿ23 April 2016 10:51 AM IST
share
ಹಸಿದಿದ್ದು, ಹಣವಿಲ್ಲದವರಿಗೆ ಪ್ರಕಾಶ್‌ರ ಹೊಟೇಲಲ್ಲಿ ಉಚಿತ ಊಟ!

ನಾವೆಲ್ಲೂ ಹೊಟೇಲಿಗೆ ಹೋಗುವುದು ಹಸಿದ ಹೊಟ್ಟೆಯನ್ನು ತಣ್ಣಗಾಗಿಸಲು. ಆದರೆ ಹೊಟೇಲ್ ಹೊರಗೆ ಹಸಿವಿನಿಂದ ಆಹಾರಕ್ಕಾಗಿ ಬೇಡುತ್ತಾ ಕುಳಿತಿರುವವರನ್ನು ಬಹುತೇಕ ಅಲಕ್ಷಿಸುತ್ತೇವೆ. ಇಂಡಿಯನ್ ಫ್ಯೂಷನ್ ಹೊಟೇಲಿನ ಮಾಲೀಕ ಪ್ರಕಾಶ್ ಛಿಬ್ಬರ್ ಅಂತಹವರ ಸಾಲಿಗೆ ಸೇರಿದ ವ್ಯಕ್ತಿ ಖಂಡಿತಾ ಅಲ್ಲ.

ಅರ್ಲೆರ್ಟಾದ ಎಡ್ಮಂಟನ್‌ನಲ್ಲಿರುವ ಕೆನಡಿಯನ್ ರೆಸ್ಟೊರೆಂಟ್ ಇಂಡಿಯನ್ ಫ್ಯೂಷನ್ ತಮ್ಮ ಹಿಂಬದಿ ಬಾಗಿಲಿನಲ್ಲಿ ಬೋರ್ಡನ್ನು ಹಾಕಿ ಆಹಾರ ಬೇಕಾದವರು ಯಾರು ಬೇಕಾದರೂ ಬರಬಹುದು ಎಂದು ಬರೆದಿದ್ದಾರೆ. ರೆಸ್ಟೊರೆಂಟ್ ಒಳಗೆ ಬಂದು ಅವರು ಉಚಿತ ಊಟವನ್ನು ಪಡೆಯಬಹುದು. ಇವರು ಸಸ್ಯಾಹಾರ ಮತ್ತು ಮಾಂಸಾಹಾರವನ್ನು ಪ್ರತ್ಯೇಕವಾಗಿ ಇಡುವ ಜೊತೆಗೆ ಆಹಾರ ಅಲರ್ಜಿಗಳ ಬಗ್ಗೆಯೂ ಗಮನಹರಿಸಿ ತಿನಿಸು ಸಿದ್ಧಪಡಿಸುತ್ತಾರೆ. ನಾನು ಹಿಂದೆ ಸಾಕಷ್ಟು ಹಸಿವೆಯನ್ನು ಕಂಡಿದ್ದೇನೆ. ಹೀಗಾಗಿ ಆಹಾರ ಇಲ್ಲದಿರುವ ನೋವು ಬಲ್ಲೆ ಎನ್ನುತ್ತಾರೆ ಪ್ರಕಾಶ್.

 2009ರಿಂದ ಪ್ರಕಾಶ್ ಈ ರೆಸ್ಟೊರಂಟನ್ನು ನಡೆಸುತ್ತಿದ್ದು, ಕಳೆದ ಎರಡು ವರ್ಷಗಳಿಂದ ಉಚಿತ ಊಟ ಕೊಡುತ್ತಿದ್ದಾರೆ. ಆದರೆ ಬೋರ್ಡನ್ನು ಕೇವಲ ಆರು ತಿಂಗಳ ಹಿಂದೆಯಷ್ಟೇ ಹಾಕಲಾಗಿದೆ. ನಾನು ಎಷ್ಟು ಮಂದಿಗೆ ಹೋಗಿ ನಿನಗೆ ಹಸಿವಿದೆಯಾ ಎಂದು ಕೇಳಲು ಸಾಧ್ಯ? ಅದು ಸಾಧ್ಯವಿಲ್ಲ. ಹೀಗಾಗಿ ಒಂದು ಬೋರ್ಡನ್ನು ಏಕೆ ಹಾಕಬಾರದು ಎಂದುಕೊಂಡೆ. ಹಸಿವಿದ್ದವರು ಆಗ ಬರಬಹುದು ಎನ್ನುತ್ತಾರೆ.

ಈ ಬೋರ್ಡಿಗೆ ಬರುವ ಪ್ರತಿಕ್ರಿಯೆ ವಿಭಿನ್ನವಾಗಿರುತ್ತದೆ. ಕೆಲವೊಮ್ಮೆ ಅವರು 3-10 ಮಂದಿಗೆ ಉಚಿತ ಊಟ ಕೊಡುತ್ತಾರೆ. ಕೆಲವೊಮ್ಮೆ ಯಾರೂ ಬರುವುದೇ ಇಲ್ಲ. ಆದರೆ ಎಡ್ಮಂಟನ್ ಲೋಕಲ್ ಡಾನಿಯೆಲ್ಲ ಟಿಂಟಿನಗ್ಲಿಯ ಈ ಬೋರ್ಡನ್ನು ಕಂಡು ಅದನ್ನು ಅಂತರ್ಜಾಲ ತಾಣ ಇಮ್ಗರ್‌ನಲ್ಲಿ ಪೋಸ್ಟ್ ಮಾಡಿದ ಕಾರಣ ಲಕ್ಷಾಂತರ ಮಂದಿಗೆ ವಿಷಯ ಗೊತ್ತಾಗಿದೆ. ನಾನು ಎಲ್ಲಿ ಮೊದಲೆಂದೂ ಆಹಾರ ಸೇವಿಸಿಲ್ಲ. ಆದರೆ ಈ ಬೋರ್ಡನ್ನು ಕಂಡ ಮೇಲೆ ಆದಷ್ಟು ಅಲ್ಲೇ ತಿನ್ನಬೇಕು ಮತ್ತು ಅವರಿಗೆ ಬೆಂಬಲ ಕೊಡಲು ಬಯಸಿದ್ದೇನೆ. ಇದು ಅದ್ಭುತ ಕಲ್ಪನೆ ಎಂದು ಅವರು ಪೋಸ್ಟಲ್ಲಿ ಬರೆದಿದ್ದರು.

1992ರಲ್ಲಿ ದೊಡ್ಡ ಅಪಘಾತವೊಂದರಿಂದ ಎರಡೂವರೆ ವರ್ಷ ಮಲಗಿದ್ದಲ್ಲೇ ಇದ್ದ ಪ್ರಕಾಶ್ ಹಣದ ಕೊರತೆಯಿಂದ ಸ್ನೇಹಿತರಿಂದ ಸಾಲ ಪಡೆಯಬೇಕಾಗಿ ಬಂದಿತ್ತು. ನನಗೆ ಒಂಭತ್ತು ಮಲ್ಟಿಪಲ್ ಫ್ಯಾಕ್ಚರ್ ಆಗಿತ್ತು. ಐದು ಸ್ಟೀಲ್ ರಾಡ್‌ಗಳನ್ನು ನನ್ನ ದೇಹದಲ್ಲಿ ಇಟ್ಟು ಮೂಳೆಗಳಿಗೆ ಬಲ ನೀಡಲಾಗಿದೆ. ಒಂದು ದಿನ ನನ್ನ ಬಳಿ ಮತ್ತು ಪತ್ನಿಯ ಬಳಿ ತಿನ್ನಲು ಏನೂ ಇರಲಿಲ್ಲ. ಹಣವೂ ಇರಲಿಲ್ಲ. ಹಣದ ಸಹಾಯ ಕೇಳಲು ನಾಚಿಕೆಯಾಗಿತ್ತು. ಹೀಗಾಗಿ ನಾನು ಮತ್ತು ಪತ್ನಿ ಊಟದ ಸಮಯದಲ್ಲಿ ಸ್ನೇಹಿತರ ಮನೆಗೆ ಭೇಟಿ ಕೊಡಲು ತೀರ್ಮಾನಿಸಿದೆವು ಎಂದು ನೆನಪಿಸಿಕೊಳ್ಳುತ್ತಾರೆ ಪ್ರಕಾಶ್. ಹೀಗೆ ದಂಪತಿ ಎರಡು ಭಿನ್ನ ಸ್ನೇಹಿತರ ಮನೆಗೆ ಹೋಗಿ ರಾತ್ರಿಯೂಟ ಮಾಡಿದ್ದರು. ಹೊಸ ಜೀವನವನ್ನು ಅರಸಿ 2005ರಲ್ಲಿ ಕೆನಡಾಗೆ ವಲಸೆ ಹೋದರು. ನಾಲ್ಕು ವರ್ಷದ ನಂತರ ಅವರು ಇಂಡಿಯನ್ ಫ್ಯೂಷನ್ ತೆರೆಯಲು ಸಾಧ್ಯವಾಯಿತು. ಹಸಿವೆಯಲ್ಲಿದ್ದವರಿಗೆ ಆಹಾರ ಒದಗಿಸುವಾಗ ಅವರಿಗೆ ಎಂದೂ ಹಣದ ಚಿಂತೆ ಬದಲಿಲ್ಲ. ಮುಂದಿನ ಬಾಗಿಲು ನನ್ನ ಬಿಲ್ಲುಗಳನ್ನು ಪಾವತಿಸಲು. ಹಿಂದಿನ ಬಾಗಿಲು ನನ್ನ ಖಾಸಗಿ ವಿಷಯ ಎಂದು ನಾನು ಯಾವಾಗಲೂ ತಮಾಷೆಯಾಡುತ್ತೇನೆ. ಎನ್ನುತ್ತಾರೆ ಪ್ರಕಾಶ್.

ಕೃಪೆ: www.scoopwhoop.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X