Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ದೇಶದಲ್ಲಿ ಚಿಟ್‌ಫಂಡ್ ಮೋಸ ಎಷ್ಟು...

ದೇಶದಲ್ಲಿ ಚಿಟ್‌ಫಂಡ್ ಮೋಸ ಎಷ್ಟು ಗೋತ್ತೇ? ಸಿಬಿಐ ಪ್ರಕಾರ 80,000ಕೋ. ರೂ.!

ವಾರ್ತಾಭಾರತಿವಾರ್ತಾಭಾರತಿ25 April 2016 12:06 PM IST
share
ದೇಶದಲ್ಲಿ ಚಿಟ್‌ಫಂಡ್ ಮೋಸ ಎಷ್ಟು ಗೋತ್ತೇ? ಸಿಬಿಐ ಪ್ರಕಾರ 80,000ಕೋ. ರೂ.!

ಹೊಸದಿಲ್ಲಿ, ಎಪ್ರಿಲ್ 25: ಚಿಟ್‌ಫಂಡ್ ಕಂಪೆನಿಗಳು ಜನರ ಎಷ್ಟು ಹಣವನ್ನು ಮುಕ್ಕಿವೆ ಎಂಬ ವಿಷಯ ತಿಳಿದರೆ ನೀವೂ ಆಶ್ಚರ್ಯಪಡುವಿರಿ. ಸಿಬಿಐ ಪ್ರಕಾರ ಇಂತಹ ಕಂಪೆನಿಗಳು ಠೇವಣಿದಾರರಿಗೆ ಕನಿಷ್ಠ 80,000 ಕೋಟಿ ರೂಪಾಯಿ ಪಂಗನಾಮ ಹಾಕಿವೆ. ಈ ಅಂಕಿ ಸಂಖ್ಯೆ ತನಿಖಿತ ಅಪರಾಧಿ ಪ್ರಕರಣಗಳದ್ದು ಮತ್ತು ಈ ಅಂಕಿ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಕೆಲವರು ತಾವು ಮೋಸಹೋದರೆ ಕೇಸುದಾಖಲಿಸಲು ಹೋಗುವುದಿಲ್ಲ.

ದೇಶಾದ್ಯಂತ ನಡೆಯುತ್ತಿರುವ ಇಂತಹ ಕಂಪೆನಿಗಳು ಆಕರ್ಷಕ ಬಡ್ಡಿ ಪಾವತಿ ಘೋಷಿಸಿ ಹಣಹೂಡಿಕೆ ನಡೆಸಲು ಬಲೆ ಹರಡುತ್ತವೆ. ಮತ್ತೆ ಮೋಸಮಾಡುತ್ತವೆ. ಮೂಲಗಳು ತಿಳಿಸಿದ ಪ್ರಕಾರ ಪಶ್ಚಿಮ ಬಂಗಾಳ, ಅಸ್ಸಾಮ್,ಒಡಿಸ್ಸಾ, ಮತ್ತು ತ್ರಿಪುರಗಳಲ್ಲಿ ಚಿಟ್‌ಫಂಡ್ ಕಂಪೆನಿಗಳು ಸಣ್ಣ ಠೇವಣಿದಾರರಿಗೆ ಸುಮಾರು 30,000ಕೋಟಿ ರೂಪಾಯಿ ಒಟ್ಟುಗೂಡಿಸಿತು. ಪಂಜಾಬ್ ಮತ್ತು ಇತರ ಭಾರತೀಯ ರಾಜ್ಯಗಳಲ್ಲಿ ಪ್ಲಸ್ ಸಮೂಹವು ಠೇವಣಿದಾರರಿಗೆ 51,000 ಕೋಟಿ ರೂಪಾಯಿಯ ಪಂಗನಾಮ ಹಾಕಿದೆ. ಇವು ಈ ಹಣವನ್ನು ಮಾಧ್ಯಮ ಸಂಸ್ಥೆಗಳನ್ನು ತೆರೆಯಲು, ಹೊಟೇಲ್ ಮತ್ತು ಇತರ ವ್ಯವಹಾರಗಳಿಗೆ ಬಳಸಿದೆ. ಠೇವಣಿದಾರರಿಗೆ ಲಾಭವನ್ನು ನೀಡಲಿಲ್ಲ.

ಮೂಲಗಳ ಪ್ರಕಾರ 80,000 ಕೋಟಿ ರೂಪಾಯಿ ಮೋಸ ತನಿಖೆಯ ಆಧಾರದಲ್ಲಿ ಹೇಳಲಾಗಿದೆ. ಠೇವಣಿದಾರರಿಂದ ಸಂಗ್ರಹಿಸಿದ ಹಣದ ಕುರಿತು ಈಗಲೂ ತನಿಖೆ ನಡೆಯುತ್ತಿದೆ. ನಾಲ್ಕು ರಾಜ್ಯಗಳಲ್ಲಿ 253 ಪ್ರಾಥಮಿಕ ತನಿಖೆ ಆಧಾರದಲ್ಲಿ ಸಿಬಿಐ 76 ಪ್ರಕರಣಗಳನ್ನು ದಾಖಲಿಸಿದೆ. ಸಂಸ್ಥೆಗಳ ಹಗರಣ ವಿಚಾರದಲ್ಲಿ 31 ಆರೋಪ ಪಟ್ಟಿಯನ್ನು ದಾಖಲಿಸಿದೆ ಎಂದು ವರದಿಗಳು ತಿಳಿಸಿವೆ.

ರೋಜ್ ವ್ಯಾಲಿ ಸಮೂಹ ವಿರುದ್ಧ ಮೂರು ವಂಚನೆ ಪ್ರಕರಣ, ಶಾರದಾ ಸಮೂಹದ ವಿರುದ್ಧ ಏಳು ವಂಚನೆ ಪ್ರಕರಣ ದಾಖಲಿಸಿದೆ. ಈ ರೀತಿ ಅನೇಕ ಕಂಪೆನಿಗಳು ಚಿಟ್‌ಫಂಡ್ ಮೋಸ ನಡೆಸುತ್ತಿವೆ. ಕಳೆದ ಇಪ್ಪತ್ತು ವರ್ಷಗಳಿಂದ ವ್ಯವಹಾರ ನಡೆಸುತ್ತಿದ್ದ ಪರ್ಲ್ಸ್ ಸಮೂಹ ಕೂಡಾ ಠೇವಣಿದಾರರನ್ನು ವಂಚಿಸಿದೆ. ಹೀಗೆಲ್ಲ ಇದ್ದರೂ ಈ ಹಗರಣದ ತನಿಖೆ ಸಿಬಿಐಗೆ ಅಷ್ಟು ಸುಲಭವಾಗಿಲ್ಲ. ಯಾಕೆಂದರೆ ಕೇಂದ್ರ ಸಚಿವರು, ಪ್ರಾದೇಶಿಕ ಸಚಿವರೋ, ಒಬ್ಬಸಂಸದನೋ ರಾಜಕಾರಣಿಯೋ ಮಾಜಿ ಪತ್ರಕರ್ತನೋ ಇಂತಹ ಕಂಪೆನಿಯ ಸಂಚಾಲಕರಲ್ಲಿ ಸೇರಿರುತ್ತಾರೆ ಎಂದು ವರದಿಗಳು ತಿಳಿಸಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X