ತ್ಯಾಜ್ಯ ಹೊಂಡದಲ್ಲಿ ಶವ ಪತ್ತೆ: ಕೊಲೆಶಂಕೆ
ಕಾಸರಗೋಡು,ಎ.25: ನೆಲ್ಲಿಕುಂಜೆ ಬೀಚ್ ರಸ್ತೆಯ ಖಾಸಗಿ ವ್ಯಕ್ತಿಯೋರ್ವರ ಹಿತ್ತಲಿನ ತ್ಯಾಜ್ಯ ಹೊಂಡದಲ್ಲಿ ನೆಲ್ಲಿಕುಂಜೆ ಪಿ.ಎಸ್. ಕಾಲನಿಯ ನಿವಾಸಿ ದಯಾನಂದ (49) ಎಂಬವರ ಮೃತದೇಹ ಪತ್ತೆಯಾಗಿದೆ.
ತ್ಯಾಜ್ಯ ವಸ್ತುಗಳಿಂದ ಮುಚ್ಚಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಕೊಲೆಗೈದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಕುತ್ತಿಗೆಯಲ್ಲಿ ನೈಲಾನ್ಹಗ್ಗ ಪತ್ತೆಯಾಗಿದ್ದು, ಸಮೀಪದಲ್ಲಿ ಕೆಂಪು ಕಲ್ಲಿನಿಂದ ಕಟ್ಟಿದ್ದ ಗೋಡೆ ಕುಸಿದು ಬಿದ್ದಿದೆ. ನಾಲ್ಕು ದಿನಗಳ ಹಿಂದೆ ದಯಾನಂದ್ ನಾಪತ್ತೆಯಾಗಿದ್ದು, ಸುಮಾರು ಮೂರು ದಿನಗಳ ಹಿಂದೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸಿದೆ. ಕಾಸರಗೋಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story