ಮುಸ್ಲೀಮ್ ರಾಷ್ಟೀಯ ಮಂಚ್ ಮುಸ್ಲೀಮರ ಸಂಘಟನೆ ಅಲ್ಲ: ಜಾಪಾರ್ ಸಾದಿಕ್ ಪೈಝಿ
ಉಳ್ಳಾಲ : ಯುವ ಸಮುದಾಯವು ಇಂದು ದಾರಿ ತಪ್ಪುತ್ತಿದ್ದಾರೆ, ಕಳ್ಳತನ, ದರೋಡೆ,ಅತ್ಯಚಾರ ಇನ್ನೀತರ ಪ್ರಕರಣಗಳಲ್ಲಿ ಮುಸ್ಲೀಮರ ಹೆಸರು ಕೇಳಿ ಬರುತ್ತಿದೆ. ಸಮಾಜ ವಿರೋದಿ ಕೃತ್ಯಗಳಿಂದ ಅವರಿಂದ ತಡೆದು ಸಮಾಜದ ಗೌರವಯುತ ಪ್ರಜೆಗಳನ್ನಾಗಿಸಲು ಮುಸ್ಲೀಮ್ ಸಂಘಟನೆಗಳು ಮತ್ತು ಉಲಮಾಗಳು ತಯಾರಗಬೇಕಿದೆ ಎಂದು ಪಿ ಎಫ್ ಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಹೇಳಿದರು.
ಇವರು ಇತ್ತೀಚಿಗೆ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಉಳ್ಳಾಲ ವಲಯದ ವತಿಯಿಂದ ದೇರಳಕಟ್ಟೆ ಜಂಕ್ಷನ್ನಲ್ಲಿ ನಡೆದ ಏಕತಾ ಅಭಿಯಾನದ ಪ್ರಯುಕ್ತ "ಏಕತೆಯೇ ಭದ್ರತೆ" ಎಂಬ ಜನ ಜಾಗೃತಿ ಕಾರ್ಯಕ್ರಮದಲ್ಲಿ ಮಾತಾನಾಡಿದರು.
ಆರ್ ಎಸ್ ಎಸ್ ಮುಸ್ಲೀಮರನ್ನು ವಿಭಜಿಸುವ ಉದ್ದೇಶದಿಂದ ಮುಸ್ಲೀಮ್ ರಾಷ್ಟೀಯ ಮಂಚ್ ಸ್ಥಾಪಿಸಲಾಗಿದೆ, ಮುಸ್ಲೀಮ್ ರಾಷ್ಟೀಯ ಮಂಚ್ ಇದು ಮುಸ್ಲೀಮರು ಸ್ಥಾಪಿಸಿದ ಸಂಘಟನೆ ಅಲ್ಲ, ಈ ಸಂಘಟನೆಯ ಬಗ್ಗೆ ಸಮುದಾಯದಲ್ಲಿ ಜಾಗೃತಿ ಉಂಟು ಮಾಡುವ ಕೆಲಸ ಇಮಾಮ್ಸ್ ಕೌನ್ಸಿಲ್ ಮಾಡುತ್ತಿದೆ. ಮುಸ್ಲೀಮರು ಏಕತೆಯಿಂದ ಇದ್ದರೆ ಮಾತ್ರ ಮುಸ್ಲೀಮರನ್ನು ಯಾರಿಂದಲೂ ವಿಭಜಿಸಲು ಸಾಧ್ಯವಿಲ್ಲ ಎಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಜ್ಯ ಪ್ರ.ಕಾರ್ಯದರ್ಶಿ ಜಾಪರ್ ಸಾಧಿಕ್ ಪೈಝಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತಾನಾಡಿದರು. ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಸದಸ್ಯ ಯೂಸುಫ್ ಮಿಸ್ಬಾಹಿ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಪಿ ಎಫ್ ಐ ದ.ಕ ಜಿಲ್ಲಾಧ್ಯಕ್ಷ ಮೊಹಮ್ಮದ್ ಹನೀಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಬೂಬಕರ್ ಸದ್ದೀಕ್ ಸ್ವಾಗತಿಸಿದರೆ, ಹಾರೀಸ್ ಮಲಾರ್ ವಂದಿಸಿದರು. ಝಾಹೀದ್ ಮಲಾರ್ ಕಾರ್ಯಕ್ರಮ ನಿರೂಪಿಸಿದರು.