ಪುತ್ತೂರು: ಜೆಸಿಬಿ ಚಕ್ರ ಹರಿದು ಓರ್ವನಿಗೆ ಗಾಯ
ಪುತ್ತೂರು: ಕಾರ್ಮಿಕರೊಬ್ಬರ ಕೈಮೇಲೆ ಜೆಸಿಬಿ ಚಕ್ರ ಹರಿದು ಗಂಭೀರ ಗಾಯಗೊಂಡ ಘಟನೆ ಬುಧವಾರ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಎಂಬಲ್ಲಿ ನಡೆದಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಜೆಸಿಬಿ ಸಹಾಯಕ ತಮಿಳುನಾಡು ಮೂಲದ ಆಕಾಶ್ (21) ಗಾಯಗೊಂಡ ವ್ಯಕ್ತಿ. ನೆಟ್ಟಣಿಗೆ ಮುಡ್ನೂರಿನ ಏರುಹಾದಿಯಲ್ಲಿ ಜೆಸಿಬಿ ಸಾಗುತ್ತಿದ್ದ ಸಂದರ್ಭದಲ್ಲಿ ಚಕ್ರದಡಿಗೆ ಮರದ ತುಂಡು ಇರಿಸುವ ವೇಳೆಯಲ್ಲಿ ಘಟನೆ ಸಂಭವಿಸಿದೆ. ಚಾಲಕ ಪ್ರಭು ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story