ಕುಂದಾಪುರ, ಎ.27: ತಲ್ಲೂರು ಮಾರನಮನೆ ಎಂಬಲ್ಲಿ ಎ.26ರಂದು ಅಂದರ್ ಬಾಹರ್ ಜೂಜು ಆಡುತ್ತಿದ್ದ ವಿಶ್ವನಾಥ ಪೂಜಾರಿ ಎಂಬಾತನನ್ನು ಪೊಲೀಸರು ಬಂಧಿಸಿ 2,730 ರೂ. ನಗದು ವಶಪಡಿಸಿಕೊಂಡಿದ್ದಾರೆ.
ಚಂದ್ರ ಪೂಜಾರಿ, ರಾಘವೇಂದ್ರ ಪೂಜಾರಿ, ಸುಧಾಕರ ದೇವಾಡಿಗ ಮತ್ತಿಬ್ಬರು ಓಡಿ ಪರಾರಿಯಾಗಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.