ಕೋಟ, ಎ.27: ಮದ್ಯ ಸೇವಿಸುವ ಚಟವನ್ನು ಹೊಂದಿದ್ದ ಮಣೂರು ಪಡುಕೆರೆಯ ಚಂದ್ರಶೇಖರ ಶೆಟ್ಟಿ (62) ಎಂಬವರು ಎ.26 ರಂದು ರಾತ್ರಿ ವೇಳೆ ಕುಡಿದ ಅಮಲಿನಲ್ಲಿ ತೆಕ್ಕಟ್ಟೆಯ ಶ್ರೀ ಗಣೇಶ ಕ್ಲೋತ್ ಸ್ಟೋರ್ ಎದುರು ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.