ನೂತನ ಎಂಟಿಎಸ್ ಶೋರೂಂ ‘ಈಜಿನೆಟ್ ಕಮ್ಯುನಿಕೇಶನ್’ ಉದ್ಘಾಟನೆ
ಮಂಗಳೂರು, ಎ.28;ಎಂ.ಟಿ.ಎಸ್ ನ ನೂತನ ರಿಟೈಲ್ ಶೋರೂಂ ‘ಈಜಿನೆಟ್ ಕಮ್ಯುನಿಕೇಶನ್’ನನ್ನು ಇಂದು ನಗರದ ಕಂಕನಾಡಿ ಬೈಪಾಸ್ ರೋಡ್ನ ವಿಶ್ವಾಸ್ ಕ್ರೌನ್ ಬಿಲ್ಡಿಂಗ್ನಲ್ಲಿ ಮಂಗಳೂರು ನಗರ ಸಂಚಾರ ಉಪ ವಿಭಾಗದ ಎಸಿಪಿ ಉದಯ ಎಂ ನಾಯಕ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮೊಬೈಲ್ ಗಳನ್ನು ಉತ್ತಮ ಕೆಲಸ ಹೆಚ್ಚೆಚ್ಚು ಉಪಯೋಗವಾಗಬೇಕು. ಕೆಟ್ಟ ಕೆಲಸಕ್ಕೆ ಮೊಬೈಲ್ ಉಪಯೋಗವಾದಂತೆ ತಡೆಯಬೇಕು ಮತ್ತು ಕೆಟ್ಟ ಚಟುವಟಿಕೆಗಳಿಗೆ ಮೊಬೈಲ್ ಉಪಯೋಗ ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಿ ಸಮಾಜಕ್ಕೆ ,ದೇಶಕ್ಕೆ ಒಳ್ಳೆಯದಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಎಂಟಿಎಸ್ ಆರ್ಓಕೆ ನಾರ್ತ್ ಸೇಲ್ಸ್ ಹೆಡ್ ವಿನೋದ್ ಕೀರ್ತಿ ಅವರು ಎಂಟಿಎಸ್ ವೈಪೈ ಸೇವೆ ನೀಡುವ ಅತ್ಯುತ್ತಮ ಸಂಸ್ತೆಯಾಗಿದೆ. ಕಂಪ್ಯೂಟರ್ ಇಲ್ಲದೆ ಪ್ಲಗ್ನ ಮೂಲಕ ವೈಫೈ ಸೇವೆ ನೀಡಲು ಎಂಟಿಎಸ್ನಿಂದ ಸಾಧ್ಯವಿದೆ. ವೈಫೈ ಜೊತೆಗೆ ಗ್ರಾಹಕರಿಗೆ ಅತ್ಯಾಕರ್ಷಕ ಕೊಡುಗೆಗಳು ನೀಡಲಾಗುತ್ತಿದೆ ಎಂದು ಹೇಳಿದರು. ಕಾಪ್ರಿಗುಡ್ಡೆ ಜುಮಾ ಮಸೀದಿಯ ಖತೀಬ್ ಮುಹಮ್ಮದ್ ಮುಸ್ತಾಕ್ ಮುಸ್ಲಿಯಾರ್ ದುಅ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಈಜಿನೆಟ್ ಕಮ್ಯುನಿಕೇಶನ್ನ ಮಾಲಕ ಮಝರುದ್ದಿನ್ ಎಂ.ಹೆಚ್ , ಎಂಟಿಎಸ್ ಮಂಗಳೂರು ರೆನಲ್ ಹೆಡ್ ಫಝಲ್, ಒನ್ಸಿಟಿ ಯೆಲ್ಲೋ ಪೇಜ್ ಮ್ಯಾನೆಜಿಂಗ್ ಡೈರೆಕ್ಟರ್ ಎಲ್.ಕೆ.ಮೋನು ಬೋರ್ಕಳ, ವಿಶ್ವಾಸ್ಬಾವ ಬಿಲ್ಡರ್ಸ್ ಮ್ಯಾನೆಜಿಂಗ್ ಡೈರೆಕ್ಟರ್ ಅಬ್ದುರ್ರವೂಫ್ ಪುತ್ತಿಗೆ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ಎಂಟಿಎಸ್ ಯೋಜನೆಗಳ ಬಗ್ಗೆ ಪ್ರಚಾರಾರ್ಥ ಜಾಥ ನೂತನ ಶೋರೂಂ ನಿಂದ ನಂದಿಗುಡ್ಡೆಯವರೆಗೆ ನಡೆಯಿತು.