ಭಟ್ಕಳ ಮುಸ್ಲಿಮ್ ಯುತ್ ಫೆಡರೇಷನ್ ಬಿಸಿಎಲ್ 3 ಕ್ರಿಕೆಟ್ ಟಿ20ಗೆ ಚಾಲನೆ
ಭಟ್ಕಳ, ಎ. 30: ಇಲ್ಲಿನ ಮುಸ್ಲಿಮ್ ಯುತ್ ಫೆಡರೇಷನ್ ಆಯೋಜಿಸಿರುವ ಬಿ.ಸಿ.ಎಲ್ 3 ಟಿ-20 ಕ್ರಿಕೆಟ್ ಪಂದ್ಯಾವಳಿಗೆ ಇಲ್ಲಿನ ಕೋಲಾ ಕ್ರಿಡಾಂಗಣದಲ್ಲಿ ಶುಕ್ರವಾರ ಸಂಭ್ರಮದೊಂದಿಗೆ ಆಕರ್ಷಕ ಚಾಲನೆಗೊಂಡಿತು.
ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಭಟ್ಕಳ ವಲಯ ಅರಣ್ಯಅಧಿಕಾರಿ ಪಿ.ಸಿ.ರವೀಂದ್ರ, ಭಟ್ಕಳದಲ್ಲಿ ಅಚ್ಚುಕಟ್ಟಾಗಿ ಇಂತಹ ಪಂದ್ಯಾವಳಿ ನಡೆಯುತ್ತಿರುವುದು ಸಂತೋಷದ ವಿಷಯವಾಗಿದೆ. ಇಲ್ಲಿ ಕ್ರಿಡಾಂಗಣಕ್ಕಾಗಿ ಅರಣ್ಯ ಅಧಿಕಾರಿಗಳಿಗೆ ಸಾರ್ವಜನಿಕರಿಂದ ಪ್ರಸ್ತಾವನೆಗಳು ಬಂದಿದ್ದು ಅದನ್ನು ಪರಿಶೀಲಿಸಿ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಹೇಳಿದರು.
ಅಂಜುಮನ್ ಬಿಬಿಎ ಮತ್ತು ಬಿಸಿಎ ಕಾಲೇಜು ಬೋರ್ಡ್ ಕಾರ್ಯದರ್ಶಿ ಅಫ್ತಾಬ್ ಖಮ್ರಿ ಮಾತನಾಡಿ, ಭಟ್ಕಳದ ಯುವಕರಲ್ಲಿ ಉತ್ತಮವಾದ ಪ್ರತಿಭೆಗಳಿದ್ದು ಇದನ್ನುತಮ್ಮ ವೃತ್ತಿಯನ್ನಾಗಿ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಕ್ರೀಡೆಯೊಂದಿಗೆ ಅಭ್ಯಾಸದ ಕಡೆಗೂ ಗಮನ ಇರಲಿ ಎಂಬ ಎಚ್ಚರಿಕೆಯ ಮಾತುಗಳನ್ನಾಡಿದ ಅವರು ನಮ್ಮ ಯುವಕರು ತಮ್ಮಲ್ಲಿ ಕ್ರಿಡಾ ಪ್ರತಿಭೆಇದೆಎಂದು ಹೇಳಿಕೊಂಡು ಅಮೂಲ್ಯ ಸಮಯವನ್ನೆಲ್ಲ ಕೇವಲ ಆಟಕ್ಕಾಗಿ ಮೀಸಲಿಡುವುದು ಸರಿಯಲ್ಲ ನಮ್ಮಜೀವನದಲ್ಲಿ ಉತ್ತಮ ಗುರಿಯೊಂದಿಗೆ ಮುನ್ನೆಡೆಯಬೇಕೆಂದು ಅವರು ಯುವಕರಿಗೆ ಸಲಹೆ ನೀಡಿದರು.
ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಪ್ರಧಾನ ಕಾರ್ಯದರ್ಶಿ ಮುಹಿದ್ದೀನ್ ಅಲ್ತಾಫ್ ಖರೂರಿ ಮಾತನಾಡಿ, ಸ್ಥಳೀಯವಾಗಿ ಇಲ್ಲಿನ ಯುವ ಪ್ರತಿಭೆಗಳಿಗೆ ಸಿಗುವಂತಹ ಅವಕಾಶಗಳನ್ನು ಬಳಸಿಕೊಂಡು ಮುಂದೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾಗುವಂತ ಸಂದರ್ಭಗಳನ್ನು ಬಳಸಿಕೊಳ್ಳಬೇಕು, ತಾಲೂಕು ಕ್ರಿಡಾಂಗಣದಲ್ಲಿ ಇಂತಹ ಪಂದ್ಯಾವಳಿಯನ್ನು ಆಯೋಜಿಸುವುದು ಕಷ್ಟಕರವಾಗಿದ್ದು ಇದಕ್ಕಾಗಿ ಅರಣ್ಯಇಲಾಖೆಯು ಮನಸ್ಸುಮಾಡಿದರೆ ಸುಸಜ್ಜಿತ ಮೈದಾನ ಮಾಡಬಹುದಾಗಿದೆ ಎಂದರು. ಫೆಡರೇಷನ್ ಅಧ್ಯಕ್ಷ ಇಮ್ತಿಯಾ ರ್ಉದ್ಯಾವರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಘಟನಾ ಕಾರ್ಯದರ್ಶಿ ನಸೀಫಾ ಖಲಿಫಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಂದ್ಯಾಟಗಳು ಶನಿವಾರದಿಂದ ಆರಂಭಗೊಳ್ಳಲಿದ್ದು ಒಟ್ಟು 12 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿವೆ. ಹಾಫಿ ರ್ಅಮೀನ್ ಝುಹೈಬ್ರ ಕುರ್ಆನ್ ಪಠಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ನವಾಯತ್ ಕವಿ ಸೈಯ್ಯದ್ ಸಮಿವುಲ್ಲಾ ಬರ್ಮಾವರ್ ಸಂಘಟನಾ ಗೀತೆಯನ್ನು ಹಾಡಿದರು. ಅಬ್ದುಸ್ಸಮಿ ಮೆಡಿಕಲ್ ಪ್ರಸ್ತಾವಿಕವಾಗಿ ಮಾತನಾಡಿದರು. ಮುಬಷ್ಶಿರ್ ಹುಸೇನ್ ಹಲ್ಲಾರೆ ಕಾರ್ಯಕ್ರಮ ನಿರೂಪಿಸಿದರು.