Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ವಿನಾಶದಂಚಿನಲ್ಲಿರುವ ಸಿಂಗಳಿಕ

ವಿನಾಶದಂಚಿನಲ್ಲಿರುವ ಸಿಂಗಳಿಕ

ನಿಚ್ಚಳ ಸಂಖ್ಯೆ ಪತ್ತೆಗೆ ಸಮೀಕ್ಷೆ

ವಾರ್ತಾಭಾರತಿವಾರ್ತಾಭಾರತಿ30 April 2016 10:07 PM IST
share
ವಿನಾಶದಂಚಿನಲ್ಲಿರುವ ಸಿಂಗಳಿಕ

ಕಾರವಾರ,ಎ.30: ಜಗತ್ತಿನಾದ್ಯಂತ ವಿನಾಶದ ಅಂಚಿನಲ್ಲಿರುವ 25 ಪ್ರಮುಖ ಪ್ರಾಣಿ ಸಂಕುಲಗಳಲ್ಲಿ ಸಿಂಗಳಿಕ ಕೂಡ ಒಂದಾಗಿದೆ. ಜಿಲ್ಲೆಯ ಪಶ್ಚಿಮ ಘಟ್ಟದ ಅಂಚಿನಲ್ಲಿರುವ ಶಿರಸಿ, ಗೇರುಸೊಪ್ಪ ಹಾಗೂ ಹೊನ್ನಾವರ ಭಾಗಗಳಲ್ಲಿ ಸಿಂಹದ ರೀತಿಯ ಬಾಲವುಳ್ಳ ಕೋತಿಗಳು (ಸಿಂಗಳಿಕಗಳು) ಇತ್ತೀಚೆಗೆ ಒಂದೆರಡು ಗುಂಪುಗಳಲ್ಲಿ ಕಂಡು ಬಂದಿದ್ದು, ಅವುಗಳ ನಿಚ್ಚಳ ಸಂಖ್ಯೆ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಶಿರಸಿ ಅರಣ್ಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಜಗತ್ತಿನಲ್ಲಿ 2012 ರಲ್ಲಿ ಸಮೀಕ್ಷೆ ನಡೆಸಿದಾಗ 25 ಪ್ರಾಣಿ ಸಂಕುಲಗಳು ವಿನಾಶದ ಅಂಚಿನಲ್ಲಿರುವುದರ ಬಗ್ಗೆ ಯುನೆಸ್ಕೊ ವತಿಯಿಂದ ಯಾದಿ ಬಿಡುಗಡೆಗೊಳಿಸಲಾಗಿತ್ತು. ಆ ಯಾದಿಯಲ್ಲಿ ಪ್ರಮುಖವಾಗಿ ಸಿಂಹದ ರೀತಿಯ ಬಾಲವುಳ್ಳ ಕೋತಿಗಳು (ಸಿಂಗಳಿಕ )ಪ್ರಾಣಿಯನ್ನು ಗುರುತಿಸಲಾಗಿತ್ತು. ಅದಕ್ಕೂ ಮುನ್ನ ಕೇರಳದಲ್ಲಿ ಕೋತಿ ಸಂಕುಲಕ್ಕೆ ಸೇರಿದ ಸಿಂಗಳಿಕದ ರಕ್ಷಣೆಗೋಸ್ಕರ 1980 ರಲ್ಲಿ ಸೇವ್ ಸೈಲೆಂಟ್ ವ್ಯಾಲಿ ಮೂವ್‌ಮೆಂಟ್ ಹೆಸರಿನಲ್ಲಿ ಆಂದೋಲನ ನಡೆಸಲಾಗಿತ್ತು. ಪಶ್ಚಿಮ ಘಟ್ಟದ ಸೆರಗಿನಲ್ಲಿರುವ ಕೇರಳದ ಈ ಭಾಗ ಹಾಗೂ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಗೇರುಸೊಪ್ಪ, ಹೊನ್ನಾವರ ಭಾಗಗಳಲ್ಲಿ ಬಿಟ್ಟರೆ, ದೇಶದ ಬೇರೆಡೆ ಈ ಪ್ರಾಣಿಗಳು ಕಾಣಲು ಸಿಗುವುದು ಅಪರೂಪವಾಗಿದೆ. ಜಿಲ್ಲೆಯ ಅರಣ್ಯ ಪ್ರವಾಸೋದ್ಯಮದಲ್ಲಿ ಐದು ಪ್ರಮುಖ ಪ್ರಾಣಿ ಪ್ರಭೇದಗಳಲ್ಲಿ ಹಾರ್ನ್‌ಬಿಲ್, ಬ್ಲ್ಯಾಕ್ ಪೆಂಥರ್, ಕಿಂಗ್ ಕೋಬ್ರಾ, ಸ್ಟಾರ್ ಚುಕ್ಕಿಯ ಆಮೆಗಳ ಜೊತೆಗೆ ಸಿಂಹದ ರೀತಿಯ ಬಾಲವುಳ್ಳ ಕೋತಿಗಳು (ಸಿಂಗಳಿಕ) ಕೂಡ ಸ್ಥಾನವನ್ನು ಪಡೆದುಕೊಂಡಿವೆೆ. ಅಘನಾಶಿನಿ ನದಿ ಪಾತ್ರದ ಕಣಿವೆಗಳಲ್ಲಿ ಹೆಚ್ಚಾಗಿ ಕಂಡು ಬರುವ ಈ ಪ್ರಾಣಿಗಳು,ಕೆಲವು ಜನರು ಆಹಾರಕ್ಕಾಗಿ ಭೆೇಟೆಯಾಡುವುದರಿಂದ ಮತ್ತು ಕಾಡಿನಲ್ಲಿ ಮನುಷ್ಯರ ಓಡಾಟ ಹೆಚ್ಚಾಗಿರುವುದು ಹಾಗೂ ಕಾಡಿನ ನಾಶದಿಂದ ಅವುಗಳ ಸಂಖ್ಯೆಯಲ್ಲಿ ವಿಪರೀತವಾಗಿ ಇಳಿಕೆ ಕಂಡು ಬಂದಿದೆ. ಹೀಗೆಯೇ ಮುಂದುವರಿದರೆ ಮುಂದೆ ಕೆಲವೇ ವರ್ಷಗಳಲ್ಲಿ ಈ ಪ್ರಾಣಿ ಸಂಕುಲ ಲುಪ್ತವಾಗಲಿದೆ ಎಂದು ವಿಜ್ಞಾನಿಗಳು ಎಚ್ಚರಿಕೆಯ ಸಂದೇಶದ ಜೊತೆಗೆ ವರದಿಯನ್ನು ಕೂಡ ಸರಕಾರಕ್ಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇವುಗಳ ಸಂರಕ್ಷಣೆಗೆ ಸರಕಾರ ಮುತುವರ್ಜಿ ವಹಿಸಿ 2012 ರಲ್ಲಿಯೇ ಪಶ್ಚಿಮ ಘಟ್ಟದ ಅಂದಾಜು 299.52 ಚದರ ಕಿ.ಮೀ. ಭಾಗವನ್ನು ರಕ್ಷಿತಾರಣ್ಯವೆಂದು ಘೋಷಿಸಿತು.ಅಲ್ಲದೇ ಈ ಭಾಗವನ್ನು ಕತ್ತಲೆ ಕಾನು ಎಂದು ಕರೆಯಲಾಗಿದ್ದು, ಈ ಭಾಗದಲ್ಲಿ ಮನುಷ್ಯರ ಓಡಾಟ, ಬೆೆೇಟೆಯಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಇದಕ್ಕೆ ಪ್ರಮುಖವಾಗಿ 2007 ರಲ್ಲಿ ಅಂದಿನ ಜಿ ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ್ ಮೋಹನ್‌ರಾಜ್ ಅವ, ನೆರವಿನಲ್ಲಿ ತಮಿಳುನಾಡಿನ ಸಲೀಮ್ ಅಲಿ ಕೇಂದ್ರದ ಪಕ್ಷಿ ಹಾಗೂ ಪರಿಸರ ಶಾಸ್ತ್ರ ವಿಭಾಗದ ವಿಜ್ಞಾನಿ ಡಾ.ಹೊನ್ನವಳ್ಳಿಕುಮಾರ್ ಈ ಬಗ್ಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿಂಹದ ರೀತಿಯ ಬಾಲವುಳ್ಳ ಕೋತಿಗಳ (ಸಿಂಗಳಿಕದ) ಬಗ್ಗೆ ಅಧ್ಯಯನ ನಡೆಸಿ, ಇದರ ಸಂರಕ್ಷಣೆಗೆ ಸರಕಾರಕ್ಕೆ ವಿಸ್ತೃತವಾದ ವರದಿ ನೀಡಿದ್ದರು ಎಂದು ಮಾಹಿತಿ ನೀಡಿದರು. ಹೀಗಾಗಿ ಅವರ ವರದಿ ಆಧಾರದಲ್ಲಿ ಅರಣ್ಯ ರಕ್ಷಣೆಯ ಜೊತೆಗೆ ರಕ್ಷಿತಾರಣ್ಯದಲ್ಲಿ ಪ್ರಸ್ತುತ ಅವುಗಳ ನಿಖರವಾದ ಸಂಖ್ಯೆ ತಿಳಿಯಲು ಮರುಸಮೀಕ್ಷೆ ನಡೆಸುವಂತೆ ಸರಕಾರ ಆದೇಶ ನೀಡಿದೆ. ಹಾಗಾಗಿ ಅರಣ್ಯ ಇಲಾಖೆ ಮರುಸಮೀಕ್ಷೆಗೆ ತಯಾರಿ ನಡೆಸಿದೆ. ಆದ್ದರಿಂದ ಅರಣ್ಯ ಸಂರಕ್ಷಣೆಯ ಜೊತೆ ಜೊತೆಗೆನೇ ವಿನಾಶದ ಅಂಚಿನಲ್ಲಿರುವ ಈ ಪ್ರಾಣಿ ಸಂಕುಲದ ಸಂರಕ್ಷಣೆಯ ಜವಾಬ್ದಾರಿ ಅರಣ್ಯ ಇಲಾಖೆಯ ಮೇಲಿದೆ.

ಸಿಂಹದ ರೀತಿಯ ಬಾಲವುಳ್ಳ ಕೋತಿ (ಸಿಂಗಳಿಕ) ಪ್ರಾಣಿ ಸಂತತಿಯ ವಿನಾಶಕ್ಕೆ ಕಾರಣ ತಿಳಿಯುವುದಲ್ಲದೇ, ಕಾಡಿನಲ್ಲಿ ಅವುಗಳ ಚಟುವಟಿಕೆ ಹಾಗೂ ನಿಖರವಾದ ಸಂಖ್ಯೆ ಕಂಡು ಹಿಡಿಯುವುದೇ ಸಮೀಕ್ಷೆಯ ಮುಖ್ಯ ಉದ್ದೇಶವಾಗಿದೆ. ಹಿಂದಿನ ಸಮೀಕ್ಷೆಯಲ್ಲಿ 30 ಇದ್ದ ಇವುಗಳ ಸಂಖ್ಯೆ,ಸದ್ಯ 60 ಕ್ಕೂ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X