Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಇದು ಚಿನ್ನಕ್ಕಿಂತ 30 ಪಟ್ಟು ಹೆಚ್ಚು...

ಇದು ಚಿನ್ನಕ್ಕಿಂತ 30 ಪಟ್ಟು ಹೆಚ್ಚು ದುಬಾರಿ ಟೀ!

ವಾರ್ತಾಭಾರತಿವಾರ್ತಾಭಾರತಿ2 May 2016 10:17 AM IST
share
ಇದು ಚಿನ್ನಕ್ಕಿಂತ 30 ಪಟ್ಟು ಹೆಚ್ಚು ದುಬಾರಿ ಟೀ!

2002ರಲ್ಲಿ ಚೀನಾದ ಪುರಾತನ ದಾ ಹೋಂಗ್ ಪಾವೋ ಚಹಾದ 20 ಗ್ರಾಂ ಗಳಿಗೆ ಶ್ರೀಮಂತನೊಬ್ಬ 1,80,000 ಯುವಾನ್ ಅಂದರೆ 28,000 ಡಾಲರ್ ಕೊಟ್ಟು ಖರೀದಿಸಿದ. 1500 ವರ್ಷಗಳಿಂದ ಚಹಾ ಕುಡಿಯುವುದು ಒಂದು ಕಲೆಯಾಗಿರುವ ಸಂಸ್ಕೃತಿಯಲ್ಲೂ ಇದು ಅಭೂತಪೂರ್ವ. ಮೂಲ ದಾ ಹೋಂಗ್ ಪಾವೋ ಚಹಾ ಚಿನ್ನದ ತೂಕದಲ್ಲಿ ಸಿಗುವುದು ಮಾತ್ರವಲ್ಲ, ಚಿನ್ನಕ್ಕಿಂತ 30 ಪಟ್ಟು ಅಧಿಕ ಬೆಲೆ ಬಾಳುತ್ತದೆ. ಸುಮಾರು ಗ್ರಾಂ ಒಂದಕ್ಕೆ 1,400 ಡಾಲರ್ ಬೆಲೆ ಬಾಳುತ್ತದೆ. ಕುಡಿಕೆ ಬೇಕೆಂದರೆ 10,000 ಡಾಲರ್. ಜಗತ್ತಿನಲ್ಲೇ ಇದು ಅತೀ ದುಬಾರಿ ಚಹಾ.

ವೂಯಿಶಾನ್ ಪ್ರಾಂತವು ಶತಮಾನಗಳಿಂದ ಚಹಾಗೆ ಪ್ರಸಿದ್ಧಿ ಪಡೆದಿದೆ. ಇಲ್ಲೇ ದಾ ಹೋಂಗ್ ಪಾವೋ ಚಹಾ ಬೆಳೆಯುವುದು. ಪ್ರಕೃತಿಯ ರಮಣೀಯ ತಪ್ಪಲಲ್ಲಿರುವ ಈ ಪ್ರಾಂತದಲ್ಲಿ ಚಹಾ ರುಚಿ ನೋಡುವ ವೇದಿಕೆಯೂ ಇದೆ. ವೂಶಿಯಾನ್‌ಗೆ ಪ್ರಯಾಣ ಬೆಳೆಸಿದರೆ ದಾ ಹೋಗ್ ಪಾವೋ ಚಹಾ ಅಚ್ಚರಿಯೆನ್ನುವಷ್ಟು ಅಗ್ಗದಲ್ಲಿ ಸಿಗುತ್ತದೆ. ಆದರೆ ಹಳೆಯದಾದ ಪುರಾತನ ಚಹಾ ಎಲೆಗಳು ದುಬಾರಿ ಇರುತ್ತವೆ. ಸಾಮಾನ್ಯ ಗುಣಮಟ್ಟದ ದಾ ಹೋಂಗ್ ಪಾವೋ ಚಹಾ ವುಯಿಶಾನ್ ಪ್ರಾಂತದಲ್ಲಿ ಕಿಲೋಗೆ 100 ಡಾಲರಿಗೆ ಸಿಗುತ್ತದೆ. ಆದರೆ ನೈಜ ದಾ ಹೋಂಗ್ ಪಾವೋ ಒಂದೇ ಗುಂಪಿನ ತಾಯಿ ಮರಗಳಿಂದ ಪಡೆಯಲಾಗುತ್ತದೆ. ಈ ಮೂಲ ಮರಗಳು ಅಪರೂಪದ ಚಹಾವನ್ನು ಕೊಡುತ್ತವೆ. ಮೂಲ ಚಹಾ ಮರಗಳು ಅತೀ ಅಪರೂಪವಾಗಿರುವ ಕಾರಣದಿಂದಲೇ ಅವುಗಳ ಬೆಲೆಯೂ ದುಬಾರಿ. ಪಾರಂಪರಿಕ ಚಹಾ ಎಲೆಗಳು ಇನ್ನೂ ಹೆಚ್ಚು ಬೆಲೆ ಬಾಳುತ್ತವೆ. ಚೀನಾದ ಚಹಾ ಎಲೆಗಳನ್ನು ಸಂಗ್ರಹಿಸುವ ಹುಚ್ಚಿರುವ ಶ್ರೀಮಂತರಿಗಾಗಿಯೇ ದಲ್ಲಾಳಿಗಳು ಇಂತಹ ಪಾರಂಪರಿಕ ದಾ ಹೋಂಗ್ ಪಾವೋ ಎಲೆಗಳನ್ನು ಹುಡುಕಿ ತೆಗೆಯುತ್ತಾರೆ. ಮಾರಲು ಬಯಸುವವರು ಮತ್ತು ಖರೀದಿಸಲು ಬಯಸುವವರನ್ನು ಈ ಮಧ್ಯವರ್ತಿಗಳು ಜೋಡಿಸುತ್ತಾರೆ.

ವಾಸ್ತವದಲ್ಲಿ ಚೀನೀಯರಿಗೆ ಮಾತ್ರ ದಾ ಹೋಂಗ್ ಪಾವೋ ಇಷ್ಟು ಅಮೂಲ್ಯ. 1849ರಲ್ಲಿ ಬ್ರಿಟಿಷ್ ಸಸ್ಯತಜ್ಞ ರಾಬರ್ಟ್ ಫೋರ್ಚೂನ್ ವುಶಿಯಾನ್ ಪರ್ವತ ಶ್ರೇಣಿಗೆ ರಹಸ್ಯವಾಗಿ ಬಂದಿದ್ದ. ಬ್ರಿಟಿಷರು ಆಗಲೂ ಮತ್ತು ಈಗಲೂ ಚಹಾ ಪ್ರೇಮಿಗಳು. ಚೀನಾದಿಂದಲೇ ಬ್ರಿಟಿಷರು ರೇಷ್ಮೆ ಮತ್ತು ಪಾರ್ಸಲಿನ್ ಜೊತೆಗೆ ಚಹಾ ಪಡೆಯುತ್ತಿದ್ದರು. ಆದರೆ ಬ್ರಿಟಿಷರು ಚೀನಾದಿಂದ ಆಮದು ಮಾಡಿಕೊಳ್ಳುವುದು ಕಡಿಮೆ ಮಾಡಿ ಭಾರತದಲ್ಲಿಯೇ ಚಹಾ ಬೆಳೆಯಲು ಆರಂಭಿಸಿ ಈ ಪ್ರಾಂತದ ವ್ಯಾಪಾರಕ್ಕೆ ಧಕ್ಕೆ ತಂದಿದ್ದರು. ಆದರೆ ಚೀನಾದ ದಾ ಹೋಂಗ್ ಪಾವೋ ಚಹಾವನ್ನು ಬೇರೆ ಪ್ರಾಂತದಲ್ಲಿ ಬೆಳೆಯಲು ಬ್ರಿಟಿಷರಿಗೂ ಸಾಧ್ಯವಾಗಲಿಲ್ಲ. ಫಾರ್ಚೂನ್ ರಹಸ್ಯವಾಗಿ ಚೀನಾಗೆ ಹೋಗಿದ್ದೇ ಅಲ್ಲಿನ ಅತ್ಯುತ್ತಮ ಚಹಾ ದಾ ಹೋಂಗ್ ಪಾವೋ ಗರಿಮೆಯನ್ನು ಕೆಳಗಿಳಿಸಲು. ಅದನ್ನು ಹೇಗೆ ಬೆಳೆಯುತ್ತಾರೆ ಎನ್ನುವುದನ್ನು ಕಲಿತು ನಕಲು ಮಾಡಲು. ಚಹಾ ತೋಟಗಳು ಚೀನಾದಲ್ಲಿ ಇಂದಿಗೂ ಮತ್ತು ಅಂದಿಗೂ ಪರ್ವತ ಶ್ರೇಣಿಯುದ್ದಕ್ಕೂ ಬೆಳೆಯಲಾಗುತ್ತಿದೆ.

ದಾ ಹೋಂಗ್ ಪಾವೋ ತಪ್ಪಲಿನ ಥಿಯಾನ್‌ಕ್ಸಿನ್ ಯೋಂಗಲ್ ದೇಗುಲದ ಬಳಿ ನೆಲೆಸಿದ ಫಾರ್ಚೂನ್ ಅತ್ಯುತ್ತಮ ಚಹಾ ಹೇಗೆ ತಯಾರಿಸಲಾಗುತ್ತದೆ ಎಂದು ಗಮನಿಸಿದರು. ಸಸ್ಯತಜ್ಞ ಚಹಾದ ಬೀಜಗಳು, ಗಿಡಗಳು ಮತ್ತು ಬೆಳೆಯುವ ರಹಸ್ಯವನ್ನು ಪಡೆದುಕೊಂಡರು. ಭಾರತಕ್ಕೆ ತಲುಪಿದಾಗ ಆ ಬೀಜಗಳನ್ನು ಭಾರತೀಯ ಚಹಾದ ಜೊತೆಗೆ ಸೇರಿಸಲಾಯಿತು. ಹೀಗೆ ವಾರ್ಷಿಕವಾಗಿ ಲಕ್ಷಾಂತರ ಲಾಭ ತರುವ ಉದ್ಯಮ ಬೆಳೆಯಿತು.

ಥಿಯಾನ್‌ಕ್ಸಿನ್ ಯೋಂಗಲ್ ದೇಗುಲವನ್ನು ಕ್ರಿಸ್ತ ಪೂರ್ವ 827ರಲ್ಲಿ ಸ್ಥಾಪಿಸಲಾಗಿತ್ತು. 1958ರಲ್ಲಿ ಮಾವೋ ಕಾಲದಲ್ಲಿ ಬೌದ್ಧ ಸನ್ಯಾಸಿಗಳನ್ನು ಹೊರದೂಡಲಾಯಿತು. ಜೊತೆಗೇ ಚಹಾ ತಯಾರಿಸುವ ಜ್ಞಾನವೂ ಹೊರಟು ಹೋಯಿತು. ಸುಜೌನಿಂದ ಝೆ 1990ರಲ್ಲಿ ಇಲ್ಲಿಗೆ ಬಂದಾಗ ಯಾರೂ ಇರಲಿಲ್ಲ. ಅವರೇ ಈಗ ಕೆಲವು ಅನುಯಾಯಿಗಳ ಜೊತೆಗೂಡಿ ಚಹಾ ಬೆಳೆಯಲು ಆರಂಭಿಸಿದ್ದಾರೆ. ಮೂಲ ದಾ ಹೋಂಗ್ ಪಾವೋ ಮರಗಳು ದೇವಾಲಯದ ಭೂಮಿಯಲ್ಲಿತ್ತು. ಝೆ ಅವನ್ನು ಸರ್ಕಾರಕ್ಕೆ ನಿಭಾಯಿಸಲು ಬಿಟ್ಟಿದ್ದಾರೆ.

ಬೆಳೆದ ಕೆಲವು ನೂರು ಗ್ರಾಂ ಚಹಾ ಕೂಡ ಸರ್ಕಾರಕ್ಕೆ ಹೋಗುತ್ತದೆ. ಇತ್ತೀಚೆಗಿನವರೆಗೂ ಸಶಸ್ತ್ರ ಸೇನೆಯ ಕಾವಲೂ ಇಲ್ಲಿತ್ತು. ಆದರೆ ಈ ಮುದಿ ಗಿಡಗಳು ಇನ್ನು ಚಿಗುರುವ ನಿರೀಕ್ಷೆ ಇಡುವುದೂ ಕಷ್ಟ. ಆದರೆ ಇನ್ನೇನು ಮೇ ಆರಂಭವಾಗುತ್ತಲೇ ಚಹಾ ಬೆಳೆಯಲು ಆರಂಭಿಸಲಾಗುತ್ತದೆ. ಆದರೆ ದಾ ಹೋಂಗ್ ಪಾವೋದಲ್ಲಿ 2005ರಲ್ಲಿ ಕೊನೆಯ ಬಾರಿ ಚಹಾ ಎಲೆ ಕೀಳಲಾಗಿತ್ತು. ನಂತರ ಅದರಲ್ಲಿ ಮತ್ತೊಮ್ಮೆ ಚಹಾ ಆಗುವ ನಿರೀಕ್ಷೆಯಿಲ್ಲ. ಹೀಗಾಗಿ ಈ ಹಿಂದೆ ಕಿತ್ತ ಚಹಾ ಎಲೆಗಳನ್ನೇ ಒಣಗಿಸಿ ಸಂಗ್ರಹಿಸಿಡಲಾಗುತ್ತದೆ. ವಜ್ರಗಳಂತೆ ಮಾರಲಾಗುತ್ತದೆ.

ಕೃಪೆ: www.bbc.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X