Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಐದು ವರ್ಷಗಳ ಬಳಿಕ ಒಸಾಮ ಬಿನ್ ಲಾದನ್...

ಐದು ವರ್ಷಗಳ ಬಳಿಕ ಒಸಾಮ ಬಿನ್ ಲಾದನ್ ಹತ್ಯಾ ದಾಳಿಯ ‘ನೇರ ಪ್ರಸಾರ’ ಮಾಡಿದ ಸಿ ಐ ಎ !

ವಾರ್ತಾಭಾರತಿವಾರ್ತಾಭಾರತಿ2 May 2016 1:04 PM IST
share
ಐದು ವರ್ಷಗಳ ಬಳಿಕ ಒಸಾಮ ಬಿನ್ ಲಾದನ್ ಹತ್ಯಾ ದಾಳಿಯ ‘ನೇರ ಪ್ರಸಾರ’ ಮಾಡಿದ ಸಿ ಐ ಎ !

ವಾಷಿಂಗ್ಟನ್, ಮೇ 2: ವಿಶ್ವ ವಾಣಿಜ್ಯ ಕೇಂದ್ರದ ಮೇಲಿನ ದಾಳಿಯ ರೂವಾರಿ ಒಸಾಮ ಬಿನ್ ಲಾಡೆನ್ ಹತ್ಯೆಯಾಗಿ ಐದು ವರ್ಷಗಳ ನಂತರ ಸಿ ಐ ಎ ಈ ದಾಳಿಯ ‘ನೇರ ಟ್ವೀಟ್’ ಮಾಡಿದೆ. ಪಾಕಿಸ್ತಾನದಲ್ಲಿ ಅಲ್-ಖೈದಾ ಸ್ಥಾಪಕನಿದ್ದ ಮನೆಯ ಕಂಪೌಂಡಿನಲ್ಲಿ ಅಮೆರಿಕಾದ ವಿಶೇಷ ಪಡೆಗಳು ನಡೆಸಿದ ಕಾರ್ಯಾಚರಣೆಯನ್ನು ನಿಮಿಷ ನಿಮಿಷ ಮಾಹಿತಿಯನ್ನು ಈ ಟ್ವೀಟುಗಳು ನೀಡಿವೆ.

ಯುಬಿಎಲ್ ಎಂಬ ಹ್ಯಾಶ್ ಟ್ಯಾಗ್ ದೊಂದಿಗೆ ಟ್ವೀಟ್ ಮಾಡಿದ ಸಿ ಐ ಎ ಮೇ 2011ರ ದಾಳಿಯು ನಿಜವಾಗಿಯೂ ನಡೆಯುತ್ತಿದೆಯೇನೋ ಎಂಬಂತೆ ಸರಣಿ ಟ್ವೀಟ್ ಮಾಡಿ ಸಾಕಷ್ಟು ಕುತೂಹಲ ಮೂಡಿಸಿದೆ.

‘‘ಅಬ್ಬೊಟ್ಟಬಾದ್ ನಲ್ಲಿ ನಡೆದ ಒಸಾಮಾ ಬಿನ್ ಲಾಡೆನ್ ಕಾರ್ಯಾಚರಣೆಯ 5ನೇ ವಾರ್ಷಿಕ ಮಹೋತ್ಸವದ ಸಂದರ್ಭ ನಾವು ಆ ದಾಳಿ ಇಂದೇ ನಡೆಯುತ್ತಿದೆಯೇನೋ ಎಂಬಂತೆ ಟ್ವೀಟ್ ಮಾಡುತ್ತಿದ್ದೇವೆ ಯುಬಿಎಲ್ ರೇಡ್’’ @ ಸಿಐಎ ಎಂದು ಸಂಸ್ಥೆ ಸಾಮಾಜಿಕ ತಾಣದಲ್ಲಿ ಹೇಳಿಕೊಂಡಿತ್ತು.
 

ಅಮೆರಿಕಾ ಅಧ್ಯಕ್ಷ ಒಬಾಮಾ ಹಾಗೂ ದೇಶದ ಇತರ ಉನ್ನತ ಅಧಿಕಾರಿಗಳು ವೈಟ್ ಹೌಸ್ ನಲ್ಲಿ ಘಟನಾವಳಿಗಳನ್ನು ಪರದೆಯ ಮೇಲೆ ವೀಕ್ಷಿಸುತ್ತಿರುವ ಖ್ಯಾತ ಛಾಯಾಚಿತ್ರವೂ ಈ ಟ್ವೀಟ್ ಗಳಲ್ಲಿ ಒಳಗೊಂಡಿತ್ತು.

  ಕೆಲವೊಂದು ಟ್ವೀಟುಗಳು ಹೀಗಿದ್ದವು : ‘‘1.51 ಪಿಎಂ ಇಡಿಟಿ -ಅಫ್ಘಾನಿಸ್ತಾನದಿಂದ ಹೊರಟ ಹೆಲಿಕಾಪ್ಟರುಗಳು ಅಬ್ಬೊಟ್ಟಾಬಾದ್, ಪಾಕಿಸ್ತಾನದಲ್ಲಿರುವ ಕಂಪೌಂಡೊಂದರತ್ತ ಹಾರಿದವು ಯುಬಿಎಲ್ ರೇಡ್."
 

3.30 ಪಿಎಂ. ಇಡಿಟಿ : ಎರಡು ಹೆಲಿಕಾಪ್ಟರುಗಳು ಪಾಕಿಸ್ತಾನದ ಅಬ್ಬೊಟ್ಟಾಬಾದ್‌ನಲ್ಲಿರುವ ಕಂಪೌಂಡಿನಲ್ಲಿ ಇಳಿಯಿತು. ಒಂದು ಪತನವಾಯಿತು. ಆದರೆ ದಾಳಿ ಯಾವುದೇ ವಿಳಂಬ ಯಾ ಗಾಯಗಳಿಲ್ಲದೆ ಮುಂದುವರಿಯಿತು ಯುಬಿಎಲ್ ರೇಡ್.’’
 

‘‘3.39 ಪಿಎಂ ಇಡಿಟಿ - ಒಸಾಮ ಬಿನ್ ಲಾಡೆನ್ ಮೂರನೇ ಮಹಡಿಯಲ್ಲಿ ಪತ್ತೆ, ಆತನ ಹತ್ಯೆ ಯುಬಿಎಲ್ ರೇಡ್.’’

  ಈ ‘ನೇರ ಟ್ವೀಟುಗಳ’ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸಿ ಐ ಎ ಮುಖ್ಯಸ್ಥ ಜಾನ್ ಬ್ರೆನ್ನನ್, ಬಿನ್ ಲಾಡೆನ್ ನಂತೆಯೇ ಡಾಯಿಶ್ ಮುಖ್ಯಸ್ಥನನ್ನು ಮುಗಿಸುವುದೂ ‘ದೊಡ್ಡ ಪ್ರಭಾವ’ ಬೀರಲಿದೆ ಎಂದು ಹೇಳಿದರು.
‘‘ನಾವು ಅಲ್ ಖೈದಾದ ದೊಡ್ಡ ಭಾಗವನ್ನು ನಾಶ ಪಡಿಸಿದ್ದೇವೆಯಾದರೂ ಅದನ್ನು ಸಂಪೂರ್ಣವಾಗಿ ವಿನಾಶ ಮಾಡಿಲ್ಲ. ನಮ್ಮ ಕಾರ್ಯದ ಮೇಲೆ ನಮ್ಮ ಸಂಪೂರ್ಣ ಗಮನವಿರಬೇಕು,’’ಎಂದವರು ನುಡಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X