ಬ್ಯಾಂಕರ್ಸ್ ಕ್ಲಬ್ನ ಅಧ್ಯಕ್ಷರಾಗಿ ಜಯ ಕುಮಾರ್ ಗಾರ್ಗ್ ಅಧಿಕಾರ ಸ್ವೀಕಾರ
ಮಂಗಳೂರು, ಮೇ 3: ಕಾರ್ಪೊರೇಶನ್ಬ್ಯಾಂಕ್ನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯ ಕುಮಾರ್ ಗಾರ್ಗ್ ಮಂಗಳೂರು ಬ್ಯಾಂಕರ್ಸ್ ಕ್ಲಬ್ನ ಅಧ್ಯಕ್ಷರಾಗಿ ಇತ್ತೀಚೆಗೆ ಮಂಗಳೂರಿನಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಸಂದರ್ಭ ಕಾರ್ಪ್ಬ್ಯಾಂಕ್ನ ಕಾರ್ಯನಿರ್ವಹಕ ನಿರ್ದೇಶಕ ಸುನೀಲ್ ಮೆಹ್ತಾ, ಕರ್ಣಾಟಕ ಬ್ಯಾಂಕ್ನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿ ರ್ವಾಹಣಾಧಿಕಾರಿ ಮತ್ತು ಬ್ಯಾಂಕರ್ಸ್ ಕ್ಲಬ್ನ ಅಧ್ಯಕ್ಷ ಪಿ.ಜಯರಾಮ ಭಟ್, ಕ್ಲಬ್ನ ಉಪಾಧ್ಯಕ್ಷ, ಕಾರ್ಪ್ ಬ್ಯಾಂಕ್ನ ಸಿಜಿಎಂ ಎಂ.ಎಸ್. ಮಹಾಬಲೇಶ್ವರ ಹಾಗೂ ಕಾರ್ಪ್ ಬ್ಯಾಂಕ್ನ ಜಿ.ಎಂ. ಅಬ್ರಹಾಂ ಕುರಿಯನ್, ಗಿರಿಧರ ಶೆಣೈ, ಕರ್ಣಾಟಕ ಬ್ಯಾಂಕ್ನ ಎಜಿಎಂ ರೇಣುಕ ಎನ್. ಬಂಗೇರಾ ಮೊದಲಾದವರು ಉಪಸ್ಥಿತರಿದ್ದರು.
Next Story