ವಿಜಯ ಮಲ್ಯ ಉಚ್ಚಾಟನೆಗೆ ಶಿಫಾರಸು

ಹೊಸದಿಲ್ಲಿ, ಮೇ 4: ವಿಜಯ ಮಲ್ಯರನ್ನು ರಾಜ್ಯ ಸಭೆಯಿಂದ ತಕ್ಷಣವೇ ಉಚ್ಚಾಟಿಸುವಂತೆ ಮೇಲ್ಮನೆಯ ನೈತಿಕ ಸಮಿತಿಯು ಬುಧವಾರ ಶಿಫಾರಸು ಮಾಡಿದೆ. ಆ ಮೂಲಕ ಪ್ರಬಲ ಸಂದೇಶವೊಂದನ್ನು ಕಳುಹಿಸುವ ಆಶಾಭಾವವನ್ನು ಅದು ವ್ಯಕ್ತಪಡಿಸಿದೆ.
ಸಾಲ ಬಾಕಿದಾರ ಮಲ್ಯರ ನಡವಳಿಕೆಯು ರಾಜ್ಯಸಭಾ ಸದಸ್ಯನೊಬ್ಬನಿಗೆ ಹೇಳಿದುದಲ್ಲ ವೆಂದು ಸಮಿತಿಯ ಸದಸ್ಯರು ಅಭಿಪ್ರಾಯಿಸಿದ್ದಾರೆ.
ಅಂತಹ ಕಠಿಣ ಕ್ರಮ ಕೈಗೊಳ್ಳುವುದರಿಂದ ಈ ಮಹಾನ್ ಸಂಸ್ಥೆಯ ಘನತೆ ಹಾಗೂ ಗೌರವವನ್ನು ಎತ್ತಿ ಹಿಡಿಯಲು, ತಪ್ಪಿತಸ್ಥ ಸದಸ್ಯರ ವಿರುದ್ಧ ಅಗತ್ಯವಾದಾಗ ಅಂತಹ ಕ್ರಮ ಕೈಗೊಳ್ಳುವುದಕ್ಕೆ ಸಂಸತ್ತು ಬದ್ಧವೆಂಬ ಸಂದೇಶ ಸಾರ್ವಜನಿಕರಿಗೆ ತಲುಪುತ್ತದೆಯೆಂದು, ಅಧ್ಯಕ್ಷ ಕರಣ್ ಸಿಂಗ್ ರಾಜ್ಯಸಭೆಯಲ್ಲಿ ಮಂಡಿಸಿದ ತನ್ನ 10ನೆ ವರದಿಯಲ್ಲಿ ನೈತಿಕ ಸಮಿತಿಯು ಹೇಳಿದೆ.
Next Story





