ಕಾರ್ಕಳ: ಬಿಸಿಲ ಧಗೆಗೆ ವ್ಯಕ್ತಿ ಮೃತ್ಯು
ಕಾರ್ಕಳ, ಮೇ 5: ಬಿಸಿಲ ತಾಪ ತಾಳಲಾರದೆ ಪಾನಮತ್ತನಾಗಿ ಬಿದ್ದಿದ್ದ ವ್ಯಕ್ತಿಯೊಬ್ಬ ಬಂಗ್ಲೆಗುಡ್ಡೆಯಲ್ಲಿ ಮೃತಪಟ್ಟಿದ್ದಾರೆ. ಮೂಲತಃ ಶಿರ್ಲಾಲಿನ ಪ್ರಸ್ತುತ ಬಂಗ್ಲೆಗುಡ್ಡೆಯಹಿಮ್ಮುಂಜೆಯಲ್ಲಿ ವಾಸವಾಗಿದ್ದ ರವೀಂದ್ರ ನಾಯಕ್ (42) ಮೃತಪಟ್ಟವರು. ಮಧ್ಯಾಹ್ನ ಅತಿಯಾಗಿ ಕುಡಿದು ಬಂಗ್ಲೆಗುಡ್ಡೆ ಗಾರ್ಡನ್ ಬಳಿ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದರು. ಆದರೆ ಯಾರೂ ಗಮನಿಸದ ಹಿನ್ನೆಲೆಯಲ್ಲಿ ಬಿಸಿಲಿನ ಹೊಡೆತಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story