ಇಂದು ‘ಕುರ್ಆನ್ ಸಂದೇಶ’ ಸಮಾವೇಶ
ಮಂಗಳೂರು, ಮೇ 5: ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ ಮಂಗಳೂರು ಇದರ ವತಿಯಿಂದ ‘ಕುರ್ಆನ್ ಸಂದೇಶ’ ಸಮಾವೇಶವು ಮೇ 6ರ ಸಂಜೆ 4:30ರಿಂದ 9:30ರ ತನಕ ನಗರದ ಪುರಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಕುರ್ಆನ್ ಕನ್ನಡ ಭಾಷಾಂತರ ಬಿಡುಗಡೆ ಸಮಾರಂಭ ನಡೆಯಲಿದೆ. ‘ಕುರ್ಆನ್ ಅದ್ಭುತಗಳ ಅದ್ಭುತ’ ಎಂಬ ವಿಷಯದಲ್ಲಿ ವೌಲವಿ ಅಹ್ಮದ್ ಅನಸ್ ಮಲಯಾಳಂನಲ್ಲಿ ಮತ್ತು ‘ಕುರ್ಆನ್ ಮನುಕುಲಕ್ಕೆ ಅವತೀರ್ಣವಾದ’ ಅಂತಿಮ ಗ್ರಂಥ ವಿಷಯದಲ್ಲಿ ಟೊರೆಂಟೋ ಕೆನಡಾದ ಶೇಖ್ ಅಬೂ ಉಮರ್ ಅಬ್ದುಲ್ ಅಝೀಝ್ ಇಂಗ್ಲಿಷ್ನಲ್ಲೂ ಪ್ರವಚನ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story