ಕರ್ಣಾಟಕ ಬ್ಯಾಂಕ್ಗೆ ಎಂಎಸ್ಎಂಇ ಶ್ರೇಷ್ಠತಾ ಪ್ರಶಸ್ತಿ
ಮಂಗಳೂರು, ಮೇ 6: ಕಿರು-ಸಣ್ಣ-ಮಧ್ಯಮ ಉದ್ಯಮಗಳ (ಎಂಎಸ್ಎಂಇ) ಸಶಕ್ತೀಕರಣ ಸಾಧನೆಗೆ ಕೈಗಾರಿಕೆ-ವ್ಯಾಪಾರ- ಸೇವೆಗಳ ಒಕ್ಕೂಟವು ಕರ್ಣಾಟಕ ಬ್ಯಾಂಕ್ಗೆ ಶ್ರೇಷ್ಠತಾ ಪ್ರಶಸ್ತಿಯನ್ನು ನೀಡಿದೆ.
ಹೊಸದಿಲ್ಲಿಯಲ್ಲಿ ಮಂಗಳವಾರ ನಡೆದ ಪ್ರಶಸ್ತಿಯನ್ನು ಎಂಎಸ್ಎಂಇ ಸಬಲೀಕರಣ ಕುರಿತ ಉತ್ಕೃಷ್ಠ ಪ್ರಶಸ್ತಿ ಪ್ರದಾನ ಹಾಗೂ ರಾಷ್ಟ್ರೀಯ ಸಮಾವೇಶದಲ್ಲಿ ಕೇಂದ್ರ ಸಚಿವ ಕಲ್ರಾಜ್ ಮಿಶ್ರಾರಿಂದ ಕರ್ಣಾಟಕ ಬ್ಯಾಂಕ್ನ ಪ್ರಧಾನ ವ್ಯವಸ್ಥಾಪಕ ಸುಭಾಶ್ಚಂದ್ರ ಪುರಾಣಿಕ್ ಹಾಗೂ ದಿಲ್ಲಿ ವಲಯ ಡಿಜಿಎಂ ರಂಗನಾಥ್ ಸ್ವೀಕರಿಸಿದರು. ಈ ಹಿನ್ನೆಲೆಯಲ್ಲಿ ಕಾರ್ಪ್ ಬ್ಯಾಂಕ್ ಈ ಕ್ಷೇತ್ರಕ್ಕೆ ಆದ್ಯತೆ ನೀಡುತ್ತಿದೆ ಎಂದು ಬ್ಯಾಂಕ್ನ ಪ್ರಕಟನೆ ತಿಳಿಸಿದೆ.
Next Story