ಸಿ.ಎಚ್. ಕುಂಞಂಬು ಗೆಲುವು ನಿಶ್ಚಿತ: ಎಲ್ಡಿಎಫ್
ಮಂಜೇಶ್ವರ, ಮೇ 7: ಚುನಾವಣಾ ಪ್ರಚಾರ ಕೊನೆ ಹಂತಕ್ಕೆ ಸಮೀಪಿಸುತ್ತಿದ್ದಂತೆ ಮಂಜೇಶ್ವರ ವಿಧಾನಸಬಾ ಕ್ಷೇತ್ರದಲ್ಲಿ ಎಡ ಪ್ರಜಾಪ್ರುತ್ವ ರಂಗ ಪ್ರಚಾರದಲ್ಲಿ ಸ್ಪಷ್ಟವಾಗಿ ಮೇಲುಗೈ ಸಾಧಿಸಿದೆ. 2006ರಲ್ಲಿ ಘಟಿಸಿದಂತೆ ಈ ಬಾರಿಯ ವಿಧಾನಸಬಾ ಚುನಾವಣೆಯಲ್ಲಿಯೂ ಎಡರಂಗ ಅ್ಯರ್ಥಿ ಸಿ.ಎಚ್.ಕುಂಞಂಬು ಜಯಭೇರಿ ಬಾರಿಸಲಿದ್ದಾರೆ ಎಂದು ಎಡರಂಗ ಚುನಾವಣಾ ಸಮಿತಿ ಪತ್ರಿಕಾ ಹೇಳಿಕೆ ನೀಡಿದೆ.
ತನ್ನದೇ ಸರಕಾರ ಮತ್ತು ತನ್ನದೇ ಪಕ್ಷವಾದ ಮುಸ್ಲಿಂ ಲೀಗ್ನ ಸಚಿವರುಗಳು ಅಧಿಕಾರದಲ್ಲಿದ್ದರೂ ಏನೊಂದೂ ಮಹತ್ವದ ಕೊಡುಗೆ ನೀಡದ ಯುಡಿಎಫ್ಸರಕಾರದ ವಿರುದ್ಧದ ಅಲೆ ಎಡರಂಗಕ್ಕೆ ಅನುಕೂಲವಾಗಲಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಜನ ವಿರೋಧಿ ಆರ್ಥಿಕ ನೀತಿಗಳ ವಿರುದ್ಧ ಜನತೆ ಈ ಬಾರಿ ತೀರ್ಪು ನೀಡಲಿದ್ದಾರೆ. 2006ರಲ್ಲಿ ಸಿ.ಎಚ್.ಕುಂಞಂಬು ಶಾಸಕರಾಗಿ ಆಯ್ಕೆಯಾದ ವೇಳೆ ನೀಡಿದ ಮಹತ್ವದ ಕೊಡುಗೆಗಳಿಂದ ಕೇರಳ ತುಳು ಅಕಾಡೆಮಿ, ಯಕ್ಷಗಾನ-ಮಾಪಿಳ್ಳ ಅಧ್ಯಯನ ಕೇಂದ್ರ ಇವುಗಳೆಲ್ಲ ಹಾಲಿ ಶಾಸಕರ ಕಾಲಾವಧಿಯಲ್ಲಿ ಬಿಜೆಪಿ ಒತ್ತಾಸೆಯಿಂದ ನಿರ್ಜೀವಗೊಳಿಸಲಾಯಿತು. ಉನ್ನತ ಶಿಕ್ಷಣ ಸಂಸ್ಥೆಗಳಿಂದ ಕುಂಬಳೆ ಐಎಚ್ಆರ್ಡಿ ಕಾಲೇಜು, ಸೀತಾಂಗೋಳಿ ಐಟಿಐ, ಅಭಿವೃದ್ಧಿ ಕಾಣದೆ ಸೊರಗಿತು. ಮೀಂಜ ಮಾರಿಟೈಂ ಸಂಸ್ಥೆ ಎತ್ತಂಗಡಿ ಮಾಡಲಾಯಿತು.
ಕೇರಳದಲ್ಲಿ ಈ ಬಾರಿ ಎಡರಂಗ ಅಧಿಕಾರಕ್ಕೇರಲಿದ್ದು, ಮಂಜೇಶ್ವರದಲ್ಲಿಯೂ ಎಡರಂಗ ಶಾಸಕರೇ ಗೆದ್ದು ಬರಬೇಕೆಂದು ಜನತೆ ಬಯಸುತ್ತಿದ್ದಾರೆ. ಅಲ್ಪಸಂಖ್ಯಾತ ಜನತೆ ಮಾತ್ರವಲ್ಲ ಜಾತಿ, ಮತ, ರಾಜಕೀಯ ಬೇಧ ಬಾವವಿಲ್ಲದೆ ಕ್ಷೇತ್ರದ ಜನತೆ ಬಹುಸಂಖ್ಯೆಯಲ್ಲಿ ಬೆಂಬಲಿಸಿ ಎಡರಂಗ ಗೆದ್ದು ಒಂದನೇ ಸ್ಥಾನದಲ್ಲಿ ಮುನ್ನಡೆ ಸಾಧಿಸಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.