Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮಧ್ಯವರ್ತಿಯನ್ನು ದುಬೈಯಲ್ಲಿ...

ಮಧ್ಯವರ್ತಿಯನ್ನು ದುಬೈಯಲ್ಲಿ ಭೇಟಿಯಾಗಿದ್ದ ಕಾಂಗ್ರೆಸ್ ನಾಯಕ: ಬಿಜೆಪಿ ಸಂಸದ ತ್ಯಾಗಿ ಆರೋಪ

ಆಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣ

ವಾರ್ತಾಭಾರತಿವಾರ್ತಾಭಾರತಿ7 May 2016 11:39 PM IST
share

ಹೊಸದಿಲ್ಲಿ, ಮೇ 7: ಇಟಲಿಯ ತನಿಖೆದಾರರು 2013ರ ಫೆ.12ರಂದು ಫಿನ್‌ಮೆಕಾನಿಕಾದ ಆಗಿನ ಅಧ್ಯಕ್ಷ ಗಿಸೆವ್ ಓರ್ಸಿಯನ್ನು ಬಂಧಿಸಿದ ಬಳಿಕ ಯುಪಿಎ ಸರಕಾರ ಕಂಗಾಲಾಗಿತ್ತು. ಕೇವಲ ಮೂರೇ ತಾಸುಗಳಲ್ಲಿ ಅದು ಆಗಸ್ಟಾ ವೆಸ್ಟ್‌ಲ್ಯಾಂಡ್ ಕಡತಗಳನ್ನು ತನಿಖೆಗಾಗಿ ಸಿಬಿಐಗೆ ಕಳುಹಿಸಿತ್ತೆಂದು ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಶುಕ್ರವಾರ ಲೋಕಸಭೆಗೆ ತಿಳಿಸಿದ್ದಾರೆ. ಇಟಲಿಯು 2011ರಲ್ಲಿ ತನಿಖೆ ಆರಂಭಿಸಿದ್ದರೂ, ಕಾಂಗ್ರೆಸ್ ಸರಕಾರವು ಹೆಲಿಕಾಪ್ಟರ್ ಖರೀದಿ ವ್ಯವಹಾರವನ್ನು ಮುಂದುವರಿಸಿತ್ತು. ಮೂರು ಹೆಲಿಕಾಪ್ಟರ್‌ಗಳು ಪೂರೈಕೆಯಾಗಿದ್ದವು. ಯುಪಿಎ ಸರಕಾರದ ಕ್ರಮವು ಕಡ್ಡಾಯವಾಗಿ ಫಿನ್‌ಮೆಕಾನಿಕಾ ಅಧಿಕಾರಿಗಳ ಬಂಧನದಿಂದ ಪ್ರೇರಿತವಾದುದಗಿತ್ತು. ಅದು ಯಾವುದೇ ಪ್ರಗತಿಪರ ಕ್ರಮ ಕೈಗೊಳ್ಳಲಿಲ್ಲವೆಂದು ಅವರು ಹೇಳಿದರು. ಪಾರಿಕ್ಕರ್, ಮಾಜಿ ರಕ್ಷಣಾ ಸಚಿವ ಎ.ಕೆ.ಆ್ಯಂಟನಿಯವರ ಮೇಲೆ ಸಹಾನುಭೂತಿ ತೋರಿಸಲು ಯತ್ನಿಸಿ, ಅವರನ್ನು ‘ಬೇಚಾರಾ (ಬಡಪಾಯಿ)’ ಎಂದು ಕರೆದರು.

ಬಡಪಾಯಿ ಆ್ಯಂಟನಿ ಸಾಹೇಬರ ಕೈಗಳನ್ನು ಕಟ್ಟಿಹಾಕಲಾಗಿತ್ತು. ಪ್ರಕರಣದ ಸಂಬಂಧ ಇಟಲಿಯಲ್ಲಿ ಬಂಧನವೊಂದು ನಡೆದೊಡನೆಯೇ ಆ್ಯಂಟನಿ ಅಕ್ಷರಶಃ ಕಂಗಾಲಾಗಿದ್ದರು. ಏಕೆಂದರೆ, ಆ್ಯಂಟನಿ ತನ್ನ ವರ್ಚಸನ್ನು ರಕ್ಷಿಸ ಬಯಸಿದ್ದರು. ಎರಡು ಅಥವಾ ಮೂರು ತಾಸುಗಳೊಳಗೆ ಅವರು ಕಡತಗಳಿಗೆ ಚಲನೆ ನೀಡಿದರು. ದಾಖಲೆಗಳನ್ನು ಮುಕ್ತಗೊಳಿಸಿದರು ಹಾಗೂ ಸಿಬಿಐ ತನಿಖೆಗೆ ಆದೇಶಿಸಿದರೆಂದು ಅವರು ಹೇಳಿದರು.

ಆಗಸ್ಟಾ ವೆಸ್ಟ್‌ಲ್ಯಾಂಡ್ ರೂ.3,600 ಕೋಟಿಗಳ ವ್ಯವಹಾರವನ್ನು ಪಡೆಯಲು ಯುಪಿಎ ಸರಕಾರ ‘ಎಲ್ಲವನ್ನೂ ಮಾಡಿತ್ತೆಂದು’ ಪಾರಿಕ್ಕರ್ ಆರೋಪಿಸಿದರು.

ಸಿಬಿಐ ಪ್ರಕರಣವನ್ನು ಅಡಿಗೆ ಹಾಕಿ ಕುಳಿತಿತ್ತು. 2014ರ ಜನವರಿಯವರೆಗೆ ಅದು ಏನನ್ನೂ ಮಾಡಿಲಿಲ್ಲ. ಸಿಬಿಐ ಹಾಗೂ ಜಾರಿನಿರ್ದೇನಾಲಯ (ಇ.ಡಿ) ಸರಿಯಾಗಿ ಕೆಲಸ ಮಾಡುವಂತೆ ತಾನೀಗ ಖಚಿತಪಡಿಸಲಿದ್ದೇನೆಂದು ಅವರು ತಿಳಿಸಿದರು.

ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಇತ್ತೀಚೆಗೆ ಆಗಸ್ಟಾ ವೆಸ್ಟ್‌ಲ್ಯಾಂಡ್‌ನ ಮಧ್ಯವರ್ತಿ ಕ್ರಿಶ್ಚನ್ ಮೈಕಲ್‌ನನ್ನು ದುಬೈಯಲ್ಲಿ ಭೇಟಿಯಾಗಿದ್ದರೆಂದು ಈ ಮೊದಲು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಆರೋಪಿಸಿದ್ದರು. ಆಗಸ್ಟಾ ವೆಸ್ಟ್‌ಲ್ಯಾಂಡ್ ವ್ಯವಹಾರದ ಕುರಿತಾದ ಇಟಲಿ ನ್ಯಾಯಾಲಯದ ತೀರ್ಪಿನಲ್ಲಿ ಸೋನಿಯಾ ಗಾಂಧಿಯವರ ಹೆಸರು 4ಬಾರಿ ಉಲ್ಲೇಖವಾಗಿದೆ ಎನ್ನುವ ಮೂಲಕ ಅವರು ಕಾಂಗ್ರೆಸ್ ಅಧ್ಯಕ್ಷೆಯ ಮೇಲೆ ತೀವ್ರ ದಾಳಿ ನಡೆಸಿದ್ದರು.

ಇದೇ ವೇಳೆ, ಶುಕ್ರವಾರ ಇ.ಡಿ. ನಡೆಸಿದ ವಿಚಾರಣೆಯ ವೇಳೆ ಐಎಎಫ್‌ನ ಮಾಜಿ ದಂಡನಾಯಕ ಎಸ್.ಪಿ.ತ್ಯಾಗಿ, ಯಾವನೇ ಮಧ್ಯವರ್ತಿಯೊಂದಿಗೆ ಕಾನೂನು ಬಾಹಿರ ವ್ಯವಹಾರವನ್ನು ತಾನು ನಡೆಸಿಲ್ಲವೆಂದು ಪ್ರತಿಪಾದಿಸಿದ್ದರು. ಇನ್ನೊಂದೆಡೆ, ಅವರ ಸೋದರ ಸಂಬಂಧಿ ಸಂಜೀವ ತ್ಯಾಗಿ, ತಾನು ಐರೋಪ್ಯ ಮಧ್ಯವರ್ತಿಗಳಾದ ಕಾರ್ಲೊ ಗೆರೊಸಾ ಹಾಗೂ ಗೀಡೊ ಹಶ್ಕ್‌ರೊಂದಿಗೆ ಹಣಕಾಸು ವ್ಯವಹಾರ ನಡೆಸಿದ್ದೇನೆಂದು ಸಿಬಿಐಯ ಮುಂದೆ ಹೇಳಿದ್ದಾರೆ. ಸಂಜೀವ ತ್ಯಾಗಿ ಹಾಗೂ ಇನ್ನೊಬ್ಬ ಆರೋಪಿ ಗೌತಂ ಖೇತಾನ್, ಶುಕ್ರವಾರದ ವಿಚಾರಣೆಯ ವೇಳೆ ಅನೇಕ ವಿಷಯಗಳ ಬಗ್ಗೆ ನುಣುಚಿಕೊಂಡರು ಹಾಗೂ ಮಾಹಿತಿಯನ್ನು ಅಡಗಿಸಲು ಯತ್ನಿಸಿದರೆಂದು ಸಿಬಿಐ ಮೂಲಗಳು ತಿಳಿಸಿವೆ.

ಎಸ್.ಪಿ. ತ್ಯಾಗಿಯವರೊಂದಿಗೆ ಆಸ್ತಿ ವ್ಯವಹಾರ ನಡೆಸಿರುವುದನ್ನು ಸಂಜೀವ್ ಒಪ್ಪಿಕೊಂಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X