Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮರಣದಂಡನೆ ಘೋಷಿಸಲ್ಪಟ್ಟ ಪ್ರತಿ...

ಮರಣದಂಡನೆ ಘೋಷಿಸಲ್ಪಟ್ಟ ಪ್ರತಿ ಮೂವರಲ್ಲೊಬ್ಬ ಬಿಡುಗಡೆಗೊಂಡಿದ್ದಾನೆ

ಅಧ್ಯಯನ ವರದಿ ಬಹಿರಂಗ

ವಾರ್ತಾಭಾರತಿವಾರ್ತಾಭಾರತಿ7 May 2016 11:41 PM IST
share

ಹೊಸದಿಲ್ಲಿ, ಮೇ 7: ವಿಚಾರಣಾ ನ್ಯಾಯಾಲಯಗಳು ಘೋಷಿಸುವ ಪ್ರತಿ 100 ಮರಣದಂಡನೆಗಳಲ್ಲಿ 5ಕ್ಕಿಂತಲೂ ಕಡಿಮೆ ಪ್ರಕರಣಗಳನ್ನಷ್ಟೇ ಉನ್ನತ ನ್ಯಾಯಾಲಯಗಳು ಎತ್ತಿ ಹಿಡಿಯುತ್ತವೆ. ಉಳಿದ ಸುಮಾರು ಶೇ.30ರಷ್ಟು ಕೈದಿಗಳು ಖುಲಾಸೆಗೊಳ್ಳುತ್ತಾರೆ. ಉಳಿದವರ ಶಿಕ್ಷೆಯನ್ನು ಕಡಿಮೆಗೊಳಿಸಲಾಗುತ್ತದೆ. ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಹೊಟ್ಟೆಯೊಳಗೆ ಸಿಲುಕಿ, ಮರಣ ದಂಡನೆಗೆ ಗುರಿಯಾದವರಿಗೆಲ್ಲ ಏನಾಗುತ್ತದೆ? ಸ್ವಾತಂತ್ರಾನಂತರ ಎಷ್ಟು ಜನರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆಯೆಂದು ದಾಖಲೆ ಯಾವುದೇ ಸಚಿವಾಲಯ ಅಥವಾ ಸಂಸ್ಥೆಯಲ್ಲಿಲ್ಲ.

 ಮರಣದಂಡನೆ ವಿಧಿಸಲ್ಪಟ್ಟವರ ಬಗ್ಗೆ ದಿಲ್ಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯ ನಡೆಸಿರುವ ‘ಮರಣ ದಂಡನೆ ಯೋಜನೆ’ ಕುರಿತ ಅಧ್ಯಯನ ವರದಿಯು ಈ ಅಂಕಿ ಅಂಶಗಳನ್ನು ಬಹಿರಂಗಪಡಿಸಿದೆ. ಗಲ್ಲುಶಿಕ್ಷೆಗೆೆ ಗುರಿಯಾದವರ ಜೀವನವನ್ನು ನಿಕಟವಾಗಿ ಕಂಡ ಮಾಹಿತಿಯನ್ನು ಸಂಗ್ರಹಿಸಿದೆ ಹಾಗೂ ನೂರಾರು ಮರಣ ದಂಡನೆ ಕೈದಿಗಳನ್ನು ಮತ್ತವರ ಕುಟುಂಬಗಳನ್ನು ಅಧ್ಯಯನ ತಂಡ ಸಂದರ್ಶಿಸಿದೆ.

ಯೋಜನೆಯು, ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಚಿತ್ತ ಚಾಂಚಲ್ಯ, ಕೈದಿಗಳ ಪರಿಸ್ಥಿತಿ ಹಾಗೂ ಒಂದು ಸಂಸ್ಥೆಯಾಗಿ ಪೊಲೀಸ್‌ನ ಬರ್ಬರತೆಗಳನ್ನು ಪರಿಶೀಲಿಸಿದೆ. ತಪ್ಪೊಪ್ಪಿಗೆ ಪಡೆಯಲು ಕೈದಿಗಳಿಗೆ ಚಿತ್ರಹಿಂಸೆ ಹಾಗೂ ಕುಟುಂಬಗಳಿಗೆ ಬೆದರಿಕೆ ಮಾಮೂಲಾಗಿರುತ್ತದೆ. ಆದರೆ, ತಾವು ಬದುಕಬೇಕೇ ಅಥವಾ ಸಾಯಬೇಕೇ ಎಂಬುದನ್ನು ಅತಿ ದೀರ್ಘ ಕಾಯುವಿಕೆಯು ಕೈದಿಗಳನ್ನು ಹೇಗೆ ಸರ್ವನಾಶಗೊಳಿಸುತ್ತದೆಂಬುದು ಇಲ್ಲ ಪ್ರಶ್ನೆಯಾಗಿರುತ್ತದೆ. ಈ ಅನಿಶ್ಚತತೆಯು ಇತರ ಯಾವುದೇ ರೀತಿಯ ಶಿಕ್ಷೆಗೂ ಹೋಲಿಕೆಯಿಲ್ಲದುದಾಗಿದೆ ಎಂದು ಸುರೇಂದ್ರ ನಾಥ್ ಹೇಳುತ್ತಾರೆ.

 ಮೊದಲ ವಿಚಾರಣಾ ನ್ಯಾಯಾಲಯದ ಶಿಕ್ಷೆ ಘೋಷಣೆಯಿಂದ ಹಿಡಿದು ಕೊನೆಯ ಮೇಲ್ಮನವಿಯವರೆಗೆ ಸಾವಿಗಾಗಿ ಕಾಯುವುದು ಒಂದು ಪ್ರತ್ಯೇಕ ಚಿತ್ರಹಿಂಸೆಯಾಗಿದೆ. ಮರಣದಂಡನೆ ಜಾರಿಗೆ ಅಸಾಮಾನ್ಯ ವಿಳಂಬವು ಶಿಕ್ಷೆಯನ್ನು ತಗ್ಗಿಸಿಲು ನೆಲೆಯಾಗುತ್ತದೆಯೇ ಎಂಬ ಕುರಿತು 1980ರಿಂದೀಚೆಗೆ ಸತತ ಕಾನೂನು ಹೋರಾಟಗಳು ನಡೆಯುತ್ತ ಬಂದಿವೆ. ದಯಾ ಅರ್ಜಿಯನ್ನು ಸಲ್ಲಿಸಿದವರು ಆಶೆ ಹಾಗೂ ಭೀತಿಯ ಇಕ್ಕಳದಲ್ಲಿ ನಲುಗುತ್ತಿರುತ್ತಾರೆ. ತಮ್ಮ ಭವಿಷ್ಯದ ಬಗ್ಗೆ ಅತಂತ್ರದಲ್ಲಿಯೇ ದಿನಗಳೆಯುತ್ತಾರೆಂದು ವರದಿ ಹೇಳಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X