Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಅಡೆತಡೆಗಳ ವಿರುದ್ಧ ಓಡುತ್ತಿರುವ...

ಅಡೆತಡೆಗಳ ವಿರುದ್ಧ ಓಡುತ್ತಿರುವ ಫೆಲೆಸ್ತೀನ್ ಯುವ ಪ್ರತಿಭೆ ಇನಸ್ ನೌಫಲ್

ಗಾಝಾದ ಪ್ರಪ್ರಥಮ ಹಾಗೂ ಏಕೈಕ ಸ್ಪರ್ಧಾತ್ಮಕ ಮಹಿಳಾ ಓಟಗಾತಿ

ವಾರ್ತಾಭಾರತಿವಾರ್ತಾಭಾರತಿ8 May 2016 10:41 AM IST
share
ಅಡೆತಡೆಗಳ ವಿರುದ್ಧ ಓಡುತ್ತಿರುವ ಫೆಲೆಸ್ತೀನ್ ಯುವ ಪ್ರತಿಭೆ ಇನಸ್ ನೌಫಲ್

ತಮ್ಮ ಹೊಳೆಯುವ ಹಸಿರು ಶೂಗಳ ಲೇಸ್ ಕಟ್ಟುತ್ತಾ ಇನಸ್ ನೌಫಲ್ ನಿತ್ಯದ ಓಟದ ಅಭ್ಯಾಸಕ್ಕೆ ಸಿದ್ಧವಾಗುತ್ತಾರೆ. ಗಾಝದ ಮೊದಲ ಮತ್ತು ಏಕೈಕ ಸ್ಪರ್ಧಾತ್ಮಕ ಮಹಿಳಾ ಓಟಗಾತಿ ಇವರು. 15 ವರ್ಷದ ನೌಫಲ್ ರಸ್ತೆಗಳಲ್ಲಿ ಓಡುವಾಗ ತಲೆ ಕೆಳಗೆ ಮಾಡಿರುತ್ತಾರೆ.

ಓಟ ನನ್ನ ಜೀವನ. ನಿದ್ದೆ ಮಾಡುವ ಮೊದಲು ಮರುದಿನದ ಓಟದ ಬಗ್ಗೆಯೇ ಯೋಚಿಸುತ್ತೇನೆ ಎನ್ನುತ್ತಾರೆ ನೌಫಲ್. ನೌಫಲ್ ಕಳೆದ ವರ್ಷ ಓಟ ಆರಂಭಿಸಿದ್ದರು. ಸ್ಥಳೀಯ ತರಬೇತುದಾರ ಸಮಿ ನಟೀಲ್ ಅಲ್ ಬಲದ್ ಆಕೆಗೆ ಸಲಹೆ ನೀಡುತ್ತಾರೆ. ನೌಫಲ್ ತಂದೆ ಮಹಮೌದ್ ಮಗಳ ಹಿಂದೆಯೇ ಕಾರಿನಲ್ಲಿ ಸುಸ್ತಾಗದೆ ಹೋಗುತ್ತಾರೆ. ಅಧಿಕಾರಿಗಳು ಅಥವಾ ಸಮುದಾಯದಿಂದ ಮಗಳಿಗೆ ತೊಂದರೆಯಾದರೆ ತಕ್ಷಣವೇ ಮಧ್ಯಪ್ರವೇಶಿಸುತ್ತಾರೆ. ಕೆಲವರು ಯುವತಿಯರು ಓಡುವುದನ್ನು ವಿರೋಧಿಸಿ ಕೆಟ್ಟ ಮಾತು ಆಡುತ್ತಾರೆ. ಅದು ನನಗೆ ಬೇಸರ ತರಿಸುತ್ತದೆ. ಆದರೆ ಅದನ್ನು ನಾನು ಇನಸ್ ಮುಂದೆ ಬರಲು ಬಿಡುವುದಿಲ್ಲ. ಆಕೆಯ ಕನಸನ್ನು ಆಕೆಯಿಂದ ಕಿತ್ತುಕೊಳ್ಳಲು ನಾನು ಬಯಸುವುದಿಲ್ಲ ಎನ್ನುತ್ತಾರೆ ಮಹಮೌದ್. ಮಹಿಳೆ ಮತ್ತು ಯುವತಿಯರ ಬಗ್ಗೆ ಸಮಾಜದ ಅಭಿಪ್ರಾಯವನ್ನು ಆಕೆ ಬದಲಿಸಬೇಕು ಎನ್ನುವುದು ಅವರ ಆಶಯ.

ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪ್ಯಾಲೆಸ್ತೀನಿಗಾಗಿ ಪದಕ ಗೆಲ್ಲುವ ಕನಸು ನೌಫಲ್ ಇಟ್ಟುಕೊಂಡಿದ್ದಾರೆ. ಆದರೆ ವೃತ್ತಿಪರ ಅಥ್ಲೀಟುಗಳ ಅಭ್ಯಾಸಕ್ಕೆ ಗಾಝಾದಲ್ಲಿ ಹೆಚ್ಚು ಸೌಲಭ್ಯಗಳಿಲ್ಲ. ದಶಕದ ಒಳಗೆ ಇಸ್ರೇಲ್ ಜೊತೆಗಿನ ಮೂರು ಯುದ್ಧ ಸಣ್ಣ ಕರಾವಳಿ ಪಟ್ಟಣದಲ್ಲಿ ಬಹಳ ನಷ್ಟ ತಂದಿದೆ. ಹೀಗಾಗಿ ಕ್ರೀಡೆ ಮತ್ತು ಮನೋರಂಜನಾ ಚಟುವಟಿಕೆಗಳಿಗೆ ಕಡಿಮೆ ಅವಕಾಶವಿದೆ.

ಕಳೆದ ತಿಂಗಳು ನೌಫಲ್ ಮತ್ತೊಂದು ಹಿಂಜರಿತ ಕಂಡರು. ಗಾಝಾದ ಇತರ ಡಜನ್ ಓಟಗಾರರು ಮತ್ತು ಆಕೆಗೆ ಪ್ಯಾಲೆಸ್ತೀನ್ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಲು ಬೆತೆಲ್ಹೆಮ್ ಹೋಗಲು ಇಸ್ರೇಲ್ ಪರವಾನಗಿ ಕೊಡಲಿಲ್ಲ. ಈ ಸ್ಪರ್ಧೆಯು ಪ್ಯಾಲೆಸ್ತೀನಿಯರ ಚಲನವಲನದ ಮೇಲೆ ಇಸ್ರೇಲ್ ಹೇರಿರುವ ನಿಯಂತ್ರಣಗಳ ಮೇಲೆ ಜಗತ್ತಿನ ಬೆಳಕು ಚೆಲ್ಲುವ ಉದ್ದೇಶ ಹೊಂದಿತ್ತು.

ಕೃಪೆ:www.aljazeera.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X