Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮನೆಯಂಗಳದಲ್ಲಿ ಒಂದಿಷ್ಟು ನೀರಿಡೋಣ:...

ಮನೆಯಂಗಳದಲ್ಲಿ ಒಂದಿಷ್ಟು ನೀರಿಡೋಣ: ಮುಗ್ಧ ಪಕ್ಷಿಗಳ ಪ್ರಾಣ ಉಳಿಸೋಣ

-ಇಮ್ತಿಯಾಝ್ ತುಂಬೆ-ಇಮ್ತಿಯಾಝ್ ತುಂಬೆ8 May 2016 3:39 PM IST
share
ಮನೆಯಂಗಳದಲ್ಲಿ ಒಂದಿಷ್ಟು ನೀರಿಡೋಣ: ಮುಗ್ಧ ಪಕ್ಷಿಗಳ ಪ್ರಾಣ ಉಳಿಸೋಣ

ದಿನೇದಿನೇ ಹೆಚ್ಚುತ್ತಿರುವ ಬಿಸಿಲ ಝಲಕ್ಕೆ ಇಡೀ ದೇಶವೇ ಬರಗಾಲಕ್ಕೆ ತುತ್ತಾಗಿದ್ದು ನದಿ, ಕೊಳ, ಹಳ್ಳ ಸೇರಿದಂತೆ ನೀರಿನ ಮೂಲಗಳು ಸಂಪೂರ್ಣವಾಗಿ ಬತ್ತತೊಡಗಿವೆ. ಈ ನಡುವೆ ಅಂತರ್ಜಲ ಮಟ್ಟವೂ ಬಾರೀ ಕುಸಿತಕಂಡಿದ್ದು, ನೀರಿನ ಸೆಲೆಯಿಲ್ಲದೆ ಬಾವಿ, ಕೊಳವೆಬಾವಿಗಳು ಬರಿದಾಗಿವೆೆ. ಪರಿಣಾಮ ಮನುಷ್ಯರ ಮೇಲೆ ಮಾತ್ರವಲ್ಲ ಪ್ರಾಣಿ ಪಕ್ಷಿಗಳು ಮೇವು, ನೀರಿಗಾಗಿ ಹಾಹಾಕಾರ ಪಡುವಂತಾಗಿದೆ. ಪ್ರಸ್ತುತ ತಲೆದೋರಿರುವ ಬರಗಾಲದ ಈ ಸಮಯದಲ್ಲಿ ಮನುಷ್ಯನಾದರೋ ಲಭ್ಯವಿರುವ ನೀರನ್ನು ಮನೆಯಲ್ಲಿ ಶೇಖರಿಸಿ ಕುಡಿಯಲು ಹಾಗೂ ಇತರ ಬಳಕೆಗೆ ಉಪಯೋಗಿಸುತ್ತಾರೆ. ಪ್ರಯಾಣದ ವೇಳೆ ಕುಡಿಯಲು ನೀರು ದೊರೆಯಲಿದ್ದರೆ ಅಂಗಡಿಗಳಿಂದ ಹಣಕೊಟ್ಟು ಬಾಟಲಿ ನೀರನ್ನಾದರೂ ಖರೀದಿಸಿ ಕುಡಿಯುತ್ತಾರೆ. ಆದರೆ ಬಿಸಿಲ ಧಗೆಯಿಂದ ಹಳ್ಳ, ಕೊಳಗಳು ಬತ್ತಿರುವುದರಿಂದ ಕುಡಿಯಲು ನೀರು ಸಿಗದೆ ಅದೆಷ್ಟೋ ಮುಗ್ಧ ಪ್ರಾಣಿ-ಪಕ್ಷಿಗಳು ಪ್ರಾಣ ಬಿಡುತ್ತಿವೆ. ಅದರಲ್ಲೂ ಕುಡಿಯಲು ನೀರಿಲ್ಲದೆ ನಗರ, ಪಟ್ಟಣ ಪ್ರದೇಶದಲ್ಲಿ ಸಾವನ್ನಪ್ಪುವ ಪಕ್ಷಿಗಳ ಸಂಖ್ಯೆ ಅತ್ಯಧಿಕ ಎಂದು ಅಂದಾಜಿಸಲಾಗಿದೆ. ಆದ್ದರಿಂದ ಅವುಗಳ ಪ್ರಾಣ ಸಂಕಟದಲ್ಲಿ ನಾವೂ ಭಾಗಿಯಾಗಬೇಕು. ಬಾಯಾರಿಕೆಯಿಂದ ಪ್ರಾಣ ಬಿಡುವ ಪ್ರಾಣಿ ಪಕ್ಷಿಗಳಿಗೆ ಒಂದಿಷ್ಟು ನೀರು ಒದಗಿಸುವ ಮೂಲಕ ಅವುಗಳನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾಗಬೇಕು. ನಾವು ಮಾಡಬೇಕಿರುವುದು ಇಷ್ಟೇ... ಕುಡಿಯಲು ಹಾಗೂ ಇತರ ಬಳಕೆಗೆಂದು ನಾವು ಮನೆಯಲ್ಲಿ ಶೇಖರಿಸಿಟ್ಟಿರುವ ನೀರಿನಲ್ಲಿ ಬರೇ ಒಂದು ಮಗ್‌ನಷ್ಟು ನೀರನ್ನು ಒಂದು ಪಾತ್ರೆಯಲ್ಲಿ ಹಾಕಿ ಮನೆಯ ಟೇರಸ್ ಮೇಲೆ ಅಥವಾ ಅಂಗಳದಲ್ಲಿ ಇಡಬೇಕು. ಇದರಿಂದ ಬಾಯಾರಿಕೆಯ ಬಳಲುವ ಅದೆಷ್ಟೋ ಪಕ್ಷಿಗಳ ಜೀವ ಉಳಿಯಬಹುದು. ಒಂದು ಕಡೆ ನೀರಿದೆ ಎಂದಾದರೆ ಪಕ್ಷಿಗಳು ದಿನನಿತ್ಯವೂ ಅದೇ ಜಾಗಕ್ಕೆ ಬರುವುದರಲ್ಲಿ ಸಂಶಯವಿಲ್ಲ. ಕಾಗೆ ಸೇರಿದಂತೆ ದೊಡ್ಡ ಜಾತಿಯ ಪಕ್ಷಿಗಳು ನೀರಿರುವ ದೂರದ ಪ್ರದೇಶಗಳಿಗೆ ಹೋಗಿ ನೀರು ಕುಡಿಯುತ್ತದೆ. ಆದರೆ ಮನುಷ್ಯರ ಜೊತೆಯಲ್ಲೇ ಬದುಕುವ ಗುಬ್ಬಚ್ಚಿಯಂತಹ ಪುಟ್ಟಪುಟ್ಟ ಪಕ್ಷಿಗಳು ದೂರ ಹಾರಿ ಹೋಗಲಾರವು. ಗುಬ್ಬಚ್ಚಿಗಳು ಪುಟ್ಟ ಗಾತ್ರದ ಪಕ್ಷಿಯಾಗಿರುವುದರಿಂದ ಮನೆಯ ಟೇರಸ್ ಅಥವಾ ಅಂಗಳದಲ್ಲಿ ನೀರಿಡುವಾಗ ತುಂಬಾ ಆಳದ ಪಾತ್ರಗಳಲ್ಲಿ ಇಡಬೇಡಿ. ಗುಬ್ಬಚ್ಚಿಯಂತಹ ಪುಟ್ಟ ಪಕ್ಷಿಗಳ ಕಾಲುಗಳು ಮುಳುಗುವಷ್ಟು ಆಳದ ಹಾಗೂ ಅಗಳವಾದ ಪಾತ್ರೆಯಲ್ಲಿ ನೀರಿಟ್ಟರೆ ಉತ್ತಮ. ಇದರಿಂದ ಎಲ್ಲ ಪಕ್ಷಿಗಳಿಗೂ ನೀರು ಕುಡಿಯಲು ಸುಲಭವಾಗುತ್ತದೆ. ಸಾಧ್ಯವಾದರೆ ನೀರಿನ ಪಾತ್ರೆಯ ಹತ್ತಿರ ಒಂದಿಷ್ಟು ಅಕ್ಕಿ ಕಾಳುಗಳನ್ನೂ ಹಾಕಬಹುದು. ನೀವು ಹಾಕಿರುವ ಅಕ್ಕಿ ಕಾಳುಗಳನ್ನು ಹಾಕಿ, ಪಕ್ಷಿಗಳು ಬಂದು ಅವುಗಳನ್ನು ತಿಂದು ನೀರು ಕುಡಿಯುವುದನ್ನು ನೋಡುವುದರಿಂದ ಸಿಗುವ ಆನಂದವೇ ಬೇರೆ. ಮಾತ್ರವಲ್ಲದೆ ಆ ಸುಂದರ ದೃಶ್ಯವನ್ನು ನಿಮ್ಮ ಮೊಬೈಲ್ ಫೋನ್ ಕೆಮರಾದಲ್ಲಿ ಸೆರೆಹಿಡಿದು ನಿಮ್ಮ ಸ್ನೇಹಿತರು ಹಾಗೂ ಕುಟುಂಬಸ್ಥರಿಗೂ ಕಳುಹಿಸಬಹುದು. ಈ ಕ್ಷಣದಿಂದಲೇ ನೀರಿಡುವ ಮೂಲಕ ಪಕ್ಷಿಗಳ ಜೀವವನ್ನು ಉಳಿಸಲು ನಮ್ಮಿಂದಾಗುವ ಅಳಿಲು ಸೇವೆ ಸಲ್ಲಿಸೋಣ 

share
-ಇಮ್ತಿಯಾಝ್ ತುಂಬೆ
-ಇಮ್ತಿಯಾಝ್ ತುಂಬೆ
Next Story
X