Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಅಪರಿಚಿತ ಸ್ಥಳದಲ್ಲಿ ಓದಲು ಹೋಗುವಿರಾ? ...

ಅಪರಿಚಿತ ಸ್ಥಳದಲ್ಲಿ ಓದಲು ಹೋಗುವಿರಾ? ನೀವು ಕಲಿತುಕೊಳ್ಳುವ ಪಾಠ ಇಲ್ಲಿದೆ...

ವಾರ್ತಾಭಾರತಿವಾರ್ತಾಭಾರತಿ9 May 2016 4:12 PM IST
share
ಅಪರಿಚಿತ ಸ್ಥಳದಲ್ಲಿ ಓದಲು ಹೋಗುವಿರಾ?  ನೀವು ಕಲಿತುಕೊಳ್ಳುವ ಪಾಠ ಇಲ್ಲಿದೆ...

ವಿದೇಶದಲ್ಲಿ ಅಥವಾ ಅಪರಿಚಿತ ಸ್ಥಳಗಳಿಗೆ ಓದಲು ಹೋಗುವ ವಿದ್ಯಾರ್ಥಿಗಳ ಬಗ್ಗೆ ಯೋಚಿಸುವಾಗ ಅವರು ಫೇಸ್ಬುಕ್ ಪುಟಕ್ಕೆ ಹಾಕುವ ಸುಂದರ ಫೋಟೋಗಳು, ಜತೆಯಾಗಿ ಪಾರ್ಟಿ ಮಾಡಿರುವುದು, ಭಾರತೀಯ ಅಡುಗೆ ಮಾಡಿರುವುದನ್ನೇ ಕಾಣುತ್ತೇವೆ. ಆದರೆ ಈ ಎಲ್ಲಾ ವಿದ್ಯಾರ್ಥಿಗಳಿಗೂ ಅಪರಿಚಿತ ಸ್ಥಳಗಳಿಗೆ ಓದಲು ವಿಮಾನ ಅಥವಾ ರೈಲು ಏರುವ ಮುನ್ನ ನಿಲ್ದಾಣದಲ್ಲಿ ಹೆತ್ತವರನ್ನು ಬೀಳ್ಕೊಡುವಾಗ ಹೊಟ್ಟೆಯಲ್ಲಿ ನಡುಕವಾಗಿದ್ದೂ ಅಷ್ಟೇ ನಿಜ.

ತಮ್ಮ ಪರಿಚಿತ ಪರಿಸರ, ಮನೆಯನ್ನು ಬಿಟ್ಟು ದೂರ ಹೋಗುವ ಏಕಾಂಗಿ ಭಾವನೆ ಎಲ್ಲರಲ್ಲೂ ಇರುತ್ತದೆ. ಮೊದಲ ದಿನವೇ ಅವರು ತರಗತಿಯ ಫೋಟೋ ತೆಗೆಯುವುದಿಲ್ಲ. ಮೊದಲ ದಿನ ಅಪರಿಚಿತ ವಿದ್ಯಾರ್ಥಿಗಳ ನಡುವೆ ತಮ್ಮ ಅಸ್ತಿತ್ವ ಹುಡುಕುತ್ತಿರುತ್ತಾರೆ. ವಿದೇಶದ ರೀತಿ ನೀತಿ ಮತ್ತು ನಡವಳಿಕೆಗಳನ್ನು ಕಲಿತಾಗ ಆದ ತಪ್ಪುಗಳೂ ಅವರ ಫೇಸ್ಬುಕ್ ಪುಟದಲ್ಲಿರುವುದಿಲ್ಲ. ಆ ಮುಜುಗರ, ನಾಚಿಕೆ ಮತ್ತು ಭಯದ ಕ್ಷಣಗಳು ಕೇವಲ ಅವರ ಮನಸ್ಸಿನಲ್ಲಿ ಅವಿತಿರುತ್ತದೆ.

ಕಲಿಯುವುದೇನು?

►ಏಕಾಂಗಿಯಾಗಿ ರೆಸ್ಟೊರೆಂಟುಗಳಲ್ಲಿ ಊಟ ಮಾಡುವುದು. ಸಿನೆಮಾಗಳನ್ನು ಏಕಾಂಗಿಯಾಗಿ ನೋಡುವುದು. ಇತರರ ಮೇಲೆ ಅವಲಂಭಿಸದೆ ಜೀವನ ಮಾಡುವುದನ್ನು ಕಲಿಯುವುದು.

►ಭಾರತೀಯ ಅಡುಗೆ ಮಾಡಿ ಚಿತ್ರವನ್ನು ಪೋಸ್ಟ್ ಮಾಡಿರುತ್ತಾರೆ. ಆದರೆ ಅದಕ್ಕೆ ಮೊದಲು ಎಷ್ಟು ಬಾರಿ ಅಡುಗೆಯ ಪ್ರಯತ್ನದಲ್ಲಿ ವಿಫಲರಾಗಿರುತ್ತಾರೆ ಎನ್ನುವ ಲೆಕ್ಕ ಅವರ ಬಳಿಯೇ ಇರುವುದಿಲ್ಲ.

►ತರಗತಿಯಿಂದ ಮನೆಗೆ ಬಂದು ಬ್ಯಾಗ್ ಎಸೆದು ತಮ್ಮ ಅಂದಿನ ರೋಮಾಂಚಕ ಅನುಭವ ಹೇಳಲೆಂದು ತಡಕಾಡಿದರೆ ಅಮ್ಮಂದಿರು ಪಕ್ಕದಲ್ಲಿರುವುದಿಲ್ಲ. ಹೀಗಾಗಿ ಅಂತಹ ಭಾವನೆಗಳನ್ನು ಮನದಲ್ಲೇ ಹತ್ತಿಕ್ಕಲು ಕಲಿಯುತ್ತಾರೆ.

►ತಮ್ಮ ಸುತ್ತಲಿರುವವರೆಲ್ಲರೂ ಮನದ ಮಾತು ಹೇಳಲು ಸ್ನೇಹಿತರು, ಸಹೋದರರ ಬಳಿಗೆ ಹೋದರೆ ತಾವು ಮಾತ್ರ ಕಂಪ್ಯೂಟರ್ ಮುಂದೆ ಕೂರಬೇಕಾಗುತ್ತದೆ. ಇದು ಹೊಸ ಲೋಕ ತೆರೆದಿಡುತ್ತದೆ.

► ಹೇರ್ ಬ್ರಷ್ ಇಡುವ ಸ್ಥಳದಲ್ಲಿ ಪೆಪ್ಪರ್ ಸ್ಪ್ರೇ ಇಟ್ಟುಕೊಂಡು ರಸ್ತೆಗಳಲ್ಲಿ ನಡೆದಾಡುವುದನ್ನು ಅಭ್ಯಾಸ ಮಾಡುತ್ತಾರೆ.

► ಜನಾಂಗೀಯ ಧ್ವೇಷದ ಮಾತುಗಳು, ವಿಚಿತ್ರ ದೃಷ್ಟಿ ಎಲ್ಲವನ್ನೂ ಸಹಿಸಿಕೊಂಡು ಅವರೊಳಗೆ ಒಂದಾಗಲು ಪ್ರಯತ್ನಿಸಿರುತ್ತಾರೆ. ಇದು ಹೊಸ ವ್ಯಕ್ತಿಗಳನ್ನು ಮತ್ತು ಪರಿಸರವನ್ನು ತಮ್ಮದಾಗಿ ಒಪ್ಪಿಕೊಳ್ಳುವುದನ್ನು ಕಲಿಸುತ್ತದೆ.

► ಏಕಾಂಗಿ ಬಾಡಿಗೆ ಮನೆಯಲ್ಲಿ ಒಬ್ಬರೇ ಇರುವುದು ಅಭ್ಯಾಸವಿಲ್ಲದೆ ಬಾಗಿಲಿಗೆ ಎರಡೆರಡು ಬೀಗ ಜಡಿಯಬೇಕಾಗುತ್ತದೆ.

► ಸ್ವತಃ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಹಣ ಉಳಿಸುವುದು ಅಭ್ಯಾಸವಾಗುತ್ತದೆ.

► ನಿಧಾನವಾಗಿ ಜವಾಬ್ದಾರಿಗಳನ್ನು ತಿಳಿದುಕೊಂಡು, ಜಗತ್ತನ್ನು ಅರ್ಥ ಮಾಡಿಕೊಂಡು ಮುನ್ನಡೆಯುವುದನ್ನು ಕಲಿಯುತ್ತಾರೆ.

ಕೃಪೆ: www.storypick.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X