ಕಾರಿಗೆ ಬೈಕ್ ಢಿಕ್ಕಿ: ಸವಾರ ಗಂಭೀರ
ಮಂಜೇಶ್ವರ, ಮೇ 10: ಲಾರಿಯೊಂದನ್ನು ಓವರ್ಟೇಕ್ ಮಾಡುತ್ತಿದ್ದ ಬೈಕೊಂದು ಕಾರಿಗೆ ಢಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಸೋಮವಾರ ಸಂಜೆ ಬಂದ್ಯೋಡು ಸಮೀಪದ ಮಳ್ಳಂಗೈಯಲ್ಲಿ ನಡೆದಿದೆ.
ಗಾಯಗೊಂಡ ಬೈಕ್ ಸವಾರನನ್ನು ಬಂದ್ಯೋಡು ಅಡ್ಕ ನಿವಾಸಿ ಬಿಲಾಲ್(25) ಎಂದು ಗುರುತಿಸಲಾಗಿದೆ.
ಗಂಭೀರ ಗಾಯಗೊಂಡ ಈತನನ್ನು ಸ್ಥಳೀಯರು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಉಪ್ಪಳ ಭಾಗದಿಂದ ಬಂದ್ಯೋಡು ಕಡೆ ಸಾಗುತ್ತಿದ್ದ ಆಲ್ಟೋ ಕಾರಿಗೆ ಎದುರಿನಿಂದ ಲಾರಿಯೊಂದನ್ನು ಹಿಂದಿಕ್ಕಿ ಅತಿ ವೇಗದಿಂದ ಬಂದ ಬೈಕ್ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
Next Story