Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪನಾಮಾ ಇನ್ನಷ್ಟು ಮಾಹಿತಿ ಹೊರಕ್ಕೆ; 2...

ಪನಾಮಾ ಇನ್ನಷ್ಟು ಮಾಹಿತಿ ಹೊರಕ್ಕೆ; 2 ಸಾವಿರ ಭಾರತೀಯರ ವಿವರ ಬಹಿರಂಗ

ವಾರ್ತಾಭಾರತಿವಾರ್ತಾಭಾರತಿ10 May 2016 11:51 PM IST
share
ಪನಾಮಾ ಇನ್ನಷ್ಟು ಮಾಹಿತಿ ಹೊರಕ್ಕೆ; 2 ಸಾವಿರ ಭಾರತೀಯರ ವಿವರ ಬಹಿರಂಗ

ಹೊಸದಿಲ್ಲಿ, ಮೇ 10: ವಿವಿಧ ತೆರಿಗೆ ಸ್ವರ್ಗ ದೇಶಗಳಲ್ಲಿ ಸಾಗರೋತ್ತರ ಹೂಡಿಕೆ ಮಾಡಿರುವ ಕಂಪೆನಿಗಳ ವಿವರವಾದ ಮಾಹಿತಿಯನ್ನು ಐಸಿಐಜೆ ಭಾರೀ ಪ್ರಮಾಣದ ‘ಪನಾಮಾ ಪೇಪರ್ಸ್’ ಮೂಲಕ ಬಹಿರಂಗಪಡಿಸಿದೆ. ಅವುಗಳಲ್ಲಿ ಭಾರತದ 2 ಸಾವಿರದಷ್ಟು ವ್ಯಕ್ತಿಗಳಿಗೆ, ಸಂಸ್ಥೆಗಳಿಗೆ ಹಾಗೂ ವಿಳಾಸಗಳಿಗೆ ಸಂಬಂಧ ಹೊಂದಿರುವ ಸಾವಿರಾರು ದಾಖಲೆಗಳು ಸೇರಿವೆ.

ನೆವಾಡದಿಂದ ಬ್ಯಾಂಕಾಕ್ ತನಕ ಹಾಗೂ ಬ್ರಿಟಿಷ್ ವರ್ಜಿನ್ ಐಲ್ಯಾಂಡ್‌ಗಳಲ್ಲಿ 21 ನ್ಯಾಯಾಂಗ ವ್ಯಾಪ್ತಿಗಳಲ್ಲಿ ಸೃಷ್ಟಿಸಲಾಗಿರುವ ಸುಮಾರು 2.14ಲಕ್ಷ ಸಾಗರೋತ್ತರ ಸಂಸ್ಥೆಗಳ ಗುಟ್ಟನ್ನು ಬಯಲುಗೊಳಿಸುವ, ಹುಡುಕಬಲ್ಲಂತಹ ಮಾಹಿತಿ ಮೂಲವನ್ನು ತನಿಖಾ ಪತ್ರಕರ್ತರ ಅಂತಾರಾಷ್ಟ್ರೀಯ ಒಕ್ಕೂಟವು (ಐಸಿಐಜೆ) ಸೋಮವಾರ ಬಹಿರಂಗಪಡಿಸಿದೆ.

ಪನಾಮಾ ಪೇಪರ್ಸ್ ತನಿಖೆಯ ಭಾಗವಾಗಿರುವ ಈ ಮಾಹಿತಿಯು, ಸಾಗರೋತ್ತರ ಸಂಸ್ಥೆಗಳು ಹಾಗೂ ಅವುಗಳ ಹಿಂದಿರುವ ವ್ಯಕ್ತಿಗಳ ಕುರಿತು ಇದುವರೆಗೆ ಬಹಿರಂಗಗೊಳಿಸಲಾಗಿರುವ ಮಾಹಿತಿಗಳಲ್ಲೇ ಅತಿ ವಿಸ್ತೃತವಾದುದಾಗಿದೆ. ಇದು, ಲಭ್ಯವಾದಾಗ ಆ ಅಪಾರದರ್ಶಕ ರಚನೆಗಳ ವಾಸ್ತವ ಮಾಲಕರ ಹೆಸರುಗಳನ್ನೂ ಒಳಗೊಂಡಿದೆಯೆಂದು ಒಕ್ಕೂಟವು ತನ್ನ ಇತ್ತೀಚಿನ ಸಂದೇಶದಲ್ಲಿ ತಿಳಿಸಿದೆ.

ಭಾರತಕ್ಕೆ ಸಂಬಂಧಿಸಿದ ಈ ಮಾಹಿತಿ ಮೂಲದ ಒಟ್ಟ್ಟಾರೆ ಪರಿಶೀಲನೆಯು ಸುಮಾರು 22 ಸಾಗರೋತ್ತರ ಸಂಸ್ಥೆಗಳು, 1,046 ಮಂದಿ ಅಧಿಕಾರಿಗಳು ಹಾಗೂ ವ್ಯಕ್ತಿಗಳ ಸಂಬಂಧ, 42 ಮಧ್ಯವರ್ತಿ ಸಂಸ್ಥೆಗಳು ಹಾಗೂ ದೇಶದೊಳಗಿನ ಸುಮಾರು 828 ವಿಳಾಸಗಳನ್ನೊಳಗೊಂಡಿದೆ. ಇವುಗಳು ದಿಲ್ಲಿ, ಮುಂಬೈ, ಕೋಲ್ಕತಾ ಹಾಗೂ ಚೆನ್ನೈಯಂತಹ ಮಹಾನಗರಗಳಿಂದ ತೊಡಗಿ ಹರ್ಯಾಣದ ಸಿರ್ಸಾ ಬಿಹಾರದ ಮುಝಫ್ಫರ್‌ಪುರ, ಮಧ್ಯಪ್ರದೇಶದ ಮಂದಾಸ್‌ರ್‌ಗಳಂತಹ ಹಳ್ಳಿಗಾಡು ಪ್ರದೇಶಗಳವರೆಗಿನ ಹಾಗೂ ಭೋಪಾಲಗಳಂತಹ ಹಿಂದುಳಿದ ಹಾಗೂ ಐಶಾರಾಮಿ ಸ್ಥಳಗಳ ವಿಳಾಸಗಳಾಗಿವೆ.

ಸಂಘಟನೆಯ ಜಾಲ ತಾಣದಲ್ಲಿ ನೀಡಲಾಗಿರುವ ಹೆಸರು ಮತ್ತು ವಿಳಾಸಗಳು ಭಾರತೀಯ ಹೆಸರುಗಳು ಹಾಗೂ ವಿಳಾಸಗಳು, ಅವರ ಹೂಡಿಕೆ ಕಂಪೆನಿಗಳ ಗುರುತು ಮಾತ್ರವಲ್ಲದೆ, ಕೆಲವು ಪ್ರಕರಣಗಳಲ್ಲಿ ಸಂಸ್ಥೆಗಳನ್ನು ಆರಂಭಿಸಲಾಗಿರುವ ದಿನಾಂಕಗಳನ್ನೂ ನಮೂದಿಸಿದೆ.

ಐಸಿಐಜೆ ಈಗ ಬಹಿರಂಗಪಡಿಸಿರುವ ಹೊಸ ಮಾಹಿತಿಯು ಮೊಸ್ಸಾಕ್ ಫೊನ್ಸೆಕಾದಿಂದ ಸೋರಿಕೆಯಾಗಿರುವ 1.15 ಕೋಟಿ ದಾಖಲೆಗಳ ರಾಶಿಯ ಒಂದು ಭಾಗವಷ್ಟೇ ಆಗಿದೆಯೆಂದು ಗುಂಪು ತಿಳಿಸಿದೆ. ಮೊಸ್ಸಾಕ್ ಫೊನ್ಸೆಕಾ ಪತ್ತೆ ಹಚ್ಚಲು ಅಸಾಧ್ಯವಾದ ಕಂಪೆನಿಗಳು, ಟ್ರಸ್ಟ್‌ಗಳು ಹಾಗೂ ಪ್ರತಿಷ್ಠಾನಗಳು ವಿಶ್ವದ ಅಗ್ರ ಸೃಷ್ಟಿಕರ್ತರಲ್ಲಿ ಒಂದಾಗಿದೆ.

ಸೋರಿಕೆಯಾದ ಮಾಹಿತಿಯು 1977ರಿಂದ 2015ರ ಅಂತದವರೆಗಿನ ಸುಮಾರು 40 ವರ್ಷಗಳದಾಗಿದೆಯೆಂದು ಸಂಘಟನೆ ಹೇಳಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X