ಮಂಗಳೂರು ನಗರದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ
ಹದಗೆಡುತ್ತಿದೆ ಟ್ರಾಫಿಕ್ ಪೊಲೀಸರ ಆರೋಗ್ಯಮಂಗಳೂರು, ಮೇ 10: ಆರ್ಥಿಕ ಚಟುವಟಿಕೆಯ ಲವಾಗಿ ವೇಗವಾಗಿ ಬೆಳೆಯುತ್ತಿರುವ ಮಂಗಳೂರು ನಗರದಲ್ಲಿ ಜನಸಂಖ್ಯೆ ಮತ್ತು ವಾಹನಗಳ ಸಂಖ್ಯೆಯೂ ಹೆಚ್ಚಾಗಿವೆ. ವಾಹನಗಳು ಉಗುಳುವ ವಿಷಕಾರಿ ಹೊಗೆಯ ಜೊತೆಗೆ ಹೆಚ್ಚುತ್ತಿರುವ ಧೂಳಿನಿಂದ ಕರ್ತವ್ಯದಲ್ಲಿರುವ ಟ್ರಾಫಿಕ್ ಪೊಲೀಸರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ ಎಂಬ ವಿಚಾರ ನಗರದ ಆ್ಯಂಟಿ ಪೊಲ್ಯೂಶನ್ ಡ್ರೆವ್ (ಎಪಿಡಿ) ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಕಂಡುಬಂದಿದೆ. ನಗರ ಪ್ರದೇಶದಲ್ಲಿ ವಾಹನಗಳಿಂದ ಉತ್ಪತ್ತಿ ಯಾಗುವ ಮಲಿನವು ಪರಿಸರ ಮಾಲಿನ್ಯಕ್ಕೆ ಒಂದು ಮುಖ್ಯ ಕಾರಣ. ವಾಹನಗಳು ಉಗು ಳುವ ವಿಷಕಾರಿ ಅನಿಲಗಳಾದ ಸಲರ್, ನೈಟ್ರೋಜನ್ ಆಕ್ಸೆಡ್ ಮತ್ತು ಕಾರ್ಬನ್ ಮೋನೊ ಆಕ್ಸೆಡ್ ಮಾನವ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವುದು ಅಧ್ಯಯನದಲ್ಲಿ ಬಹಿರಂಗಗೊಂಡಿದೆ.ಪಿಡಿ ಸಂಸ್ಥೆ ನಡೆಸಿದ ಅಧ್ಯಯನ ವರದಿ ಪ್ರಕಾರ ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರಿ ಪೊಲೀಸರು ಮತ್ತು ಟ್ರಾಫಿಕ್ ವಿಭಾಗದಲ್ಲಿ ಕೆಲಸ ಮಾಡುವವರು ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿರುತ್ತಾರೆ. ಐದು ವರ್ಷಕ್ಕಿಂತ ಕಡಿಮೆ ಅವ ಸಂಚಾರಿ ಸೇವೆಯಲ್ಲಿ ಇರುವ ಪೊಲೀಸರಲ್ಲಿ ಶೇ.22.3ರಷ್ಟು ಶ್ವಾಸಕೋಶದ ತೊಂದರೆ ಇರುವುದು ಕಂಡುಬಂದಿದೆ. ಮಂಗಳೂರಿನ ಯೆನೆಪೊಯ ಮೆಡಿಕಲ್ ಕಾಲೇಜಿನ ರೆಸ್ಪಿರೇಟರಿ ಮೆಡಿಸಿನ್ ವಿಭಾಗದ ಸಹಯೋಗದೊಂದಿಗೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಸಹಕಾರದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿರುವ ಆ್ಯಂಟಿ ಪೊಲ್ಯೂಶನ್ ಡ್ರೆವ್ ಸಂಸ್ಥೆಯು ಈ ಅಧ್ಯಯನವನ್ನು ಕೈಗೊಂಡಿತ್ತು. ಮಂಗಳೂರು ನಗರ ಸಂಚಾರಿ ಪೊಲೀಸ್ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಉದಯ ನಾಯಕ್ ಆರೋಗ್ಯ ತಪಾಸಣೆಯಲ್ಲಿ ಭಾಗವಹಿಸಿದ್ದಲ್ಲದೆ ಸಂಚಾರ ವಿಭಾಗದ ಹಲವಾರು ಅಕಾರಿಗಳು ಮತ್ತು ಸಿಬ್ಬಂದಿ ಈ ಅಧ್ಯಯನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಸಹಕರಿಸಿದ್ದರು. ಈ ಅಧ್ಯಯನದ ಲಿತಾಂಶವನ್ನು ಮಂಗಳೂರು ಪೊಲೀಸರ ಗಮನಕ್ಕೆ ತಂದು ಮಾಲಿನ್ಯ ನಿಯಂತ್ರಿಸಲು ಮಾಡಬಹುದಾದ ಕೆಲಸಗಳಲ್ಲಿ ಕೈಜೋಡಿಸುವುದು ಸಂಸ್ಥೆಯ ಗುರಿಯಾಗಿತ್ತು. ವಾಯುಮಾಲಿನ್ಯವನ್ನು ತಡೆಯುವ ಮೂಲಕ ಸಂಚಾರಿ ಪೊಲೀಸರಲ್ಲಿ ಶ್ವಾಸಕೋಶದ ತೊಂದರೆಯಿಂದ ಬಳಲುವವರ ಸಂಖ್ಯೆಯನ್ನು ನಿಯಂತ್ರಿಸಬಹುದು ಎಂದು ಆ್ಯಂಟಿ ಪೊಲ್ಯೂಶನ್ ಡ್ರೆವ್ನ ಸ್ಥಾಪಕ ಅಬ್ದುಲ್ಲ ಎ.ರಹ್ಮಾನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.