ಬಂಟ್ವಾಳ ತಾಲೂಕು ಜಮಾಅತ್ ಮಟ್ಟದ ಸಮಾಜ ಸೇವಕರ ಸ್ನೇಹ ಸಮ್ಮಿಲನ
ಮಂಗಳೂರು, ಮೇ 11, ಬಂಟ್ವಾಳ ತಾಲೂಕಿನ ಎಲ್ಲ ಮಸೀದಿಗೊಳಪಟ್ಟ ಜಮಾಅತ್ಗಳಲ್ಲಿ ಸೇವೆಗೈಯುತ್ತಿರುವ ಸಮಾಜ ಸೇವಕರ ಸ್ನೇಹ ಸಮ್ಮಿಲನವು ಮೇ 13ರಂದು ಸಂಜೆ 4ಕ್ಕೆ ಬಿ.ಸಿ.ರೋಡ್ನ ರಿಕ್ಷಾ ಭವನದಲ್ಲಿ ನಡೆಯಲಿದೆ. ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿವೇತನ, ಸರಕಾರದ ಸವಲತ್ತುಗಳು, ಮಾದರಿ ಜಮಾಅತ್ ಮೊದಲಾದ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಿ.ಅಬ್ದುಲ್ ಹಮೀದ್ ಕಣ್ಣೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗಾಗಿ 0824-4267883, 9972283365 ಸಂಪರ್ಕಿಸಬಹುದು.
Next Story