ಆಟೊರಿಕ್ಷಾ ಸಂಚಾರ ಪರಿಮಿತಿ 15 ಕಿ.ಮೀ. ವರೆಗೆ ವಿಸ್ತರಣೆ
ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ನಿರ್ಧಾರ

ಮಡಿಕೇರಿ, ಮೇ 12: ಜಿಲ್ಲೆಯಲ್ಲಿ ಸಂಚರಿಸುವ ಆಟೊರಿಕ್ಷಾಗಳ ಪರಿಮಿತಿಯನ್ನು 15 ಕಿ.ಮೀ.ಗೆ ವಿಸ್ತರಿಸಲು ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅನೀಸ್ ಅಹ್ಮದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಚರ್ಚಿಸಲಾಯಿತು.
ಜಿಲ್ಲೆಯಲ್ಲಿ ಈಗಾಗಲೇ ಆಟೊರಿಕ್ಷಾಗಳ ಪರಿಮಿತಿ ವ್ಯಾಪ್ತಿಯನ್ನು ಕುಶಾಲನಗರಕ್ಕೆ 15 ಕಿ.ಮೀ. ಹಾಗೂ ಜಿಲ್ಲೆಯ ಇತರೆ ಪ್ರದೇಶಗಳಲ್ಲಿ 10 ಕಿ.ಮೀ. ಎಂದು ನಿಗದಿ ಮಾಡಲಾಗಿತ್ತು. ಇದೀಗ ಆಟೊರಿಕ್ಷಾ ಹಾಗೂ ಮಾಲಕರ ಸಂಘದ ಕೋರಿಕೆ ಮೇರೆಗೆ 15 ಕಿ.ಮೀ.ವರೆಗೆ ಆಟೊರಿಕ್ಷಾ ಪರಿಮಿತಿ ಯನ್ನು ವಿಸ್ತರಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ ಆಟೊರಿಕ್ಷಾ ಮಾಲಕರ ಸಂಘದ ಅಧ್ಯಕ್ಷ ಮೇದಪ್ಪ ಮಾತನಾಡಿ, ಆಟೊರಿಕ್ಷಾಗಳು ಎಲ್ಲಾ ಪ್ರದೇಶಗಳಲ್ಲಿ 20 ಕಿ.ಮೀ. ವ್ಯಾಪ್ತಿಯ ಪರಿಮಿತಿಯನ್ನು ನೀಡುವಂತೆ ಸಭೆಯಲ್ಲಿ ಒತ್ತಾಯಿಸಿದರು. ಇದಕ್ಕೆ ಸಂಬಂಧಿಸಿದಂತೆ ಖಾಸಗಿ ಬಸ್ಸುಗಳ ಮಾಲಕರು ಹಾಗೂ ಸಂಘದ ಪದಾಧಿಕಾರಿಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಜಿಲ್ಲೆಯ ಆಟೋರಿಕ್ಷಾಗಳ ಪರಿಮಿತಿ ಹೆಚ್ಚಿಸಿದ್ದಲ್ಲಿ ಖಾಸಗಿ ಬಸ್ಸುಗಳಿಗೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತದೆ ಮತ್ತು ಬಸ್ ಸೌಕರ್ಯವಿಲ್ಲದಿದ್ದ ಸಂದರ್ಭಗಳಲ್ಲಿ ಪ್ರಯಾಣಿಕರನ್ನು ಪರಿಮಿತಿ ಮೀರಿ ಆಟೊರಿಕ್ಷಾಗಳಲ್ಲಿ ಕರೆದುಕೊಂಡು ಹೋಗುತ್ತಾರೆ. ಇದರಿಂದ ಖಾಸಗಿ ಬಸ್ಗಳಿಗೆ ಪ್ರಯಾಣಿಕರಿಲ್ಲದೆ ತೊಂದರೆಯಾಗುತ್ತದೆ ಎಂದು ಖಾಸಗಿ ಬಸ್ ಮಾಲಕರ ಸಂಘದ ಅಧ್ಯಕ್ಷ ಹೋಸೂರು ರಮೇಶ್ ಜೋಯಪ್ಪ ಹಾಗೂ ಪದಾಧಿಕಾರಿ ಪುಟ್ಟಸ್ವಾಮಿ ಅಭಿಪ್ರಾಯಪಟ್ಟರು.ಈ ಸಂದರ್ಭ ಆಟೊರಿಕ್ಷಾ ಮಾಲಕರ ಸಂಘದ ಅಧ್ಯಕ್ಷರು ಮಾತನಾಡಿ, ಬಸ್ ಸೌಕರ್ಯವಿಲ್ಲದ ಸಂದರ್ಭಗಳಲ್ಲಿ ಕೆಲವು ಆಟೊರಿಕ್ಷಾಗಳು ಪ್ರಯಾಣಿಕರು ಪರಿಮಿತಿ ಸಂಚರಿ ಸುವ ಆಕ್ಷೇಪ ಸಾಮಾನ್ಯವಾಗಿದೆ. ಆಟೊರಿಕ್ಷಾ ಅಥವಾ ಬಸ್ನಲ್ಲಿ ಪ್ರಯಾಣ ಪ್ರಯಾಣಿಕರ ವಿವೇಚನೆಗೆ ಬಿಟ್ಟಿದ್ದು ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಸೋಮವಾರ ಪೇಟೆಯಿಂದ ಮಡಿಕೇರಿಗೆ ಬೆಳಗ್ಗೆ 8:30 ಮತ್ತು ಸಂಜೆ 4 ಗಂಟೆಗೆ ಬಸ್ ಸೌಕರ್ಯಗಳ ಬಗ್ಗೆ ಸಾರ್ವಜನಿಕರಿಂದ ಮನವಿ ಸ್ವೀಕರಿಸಿದ ಡಿಸಿ ಅನೀಸ್, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಮಡಿಕೇರಿಯಿಂದ ಕು ಶಾಲ ನಗರಕ್ಕೆ ಮತ್ತು ವಾಪಸ್ ಸಂಚರಿಸುವ ಬಸ್ಸುಗಳನ್ನು ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಕುಶಾಲನಗರ ಪಾಲಿಟೆಕ್ನಿಕ್ ಎದುರಿಗಿನ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸುವಲ್ಲಿ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅನೀಸ್ ನಿರ್ದೇಶನ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಪ್ರಾದೇಶಿಕ ಸಾರಿಗೆ ಕಾರ್ಯದರ್ಶಿ ರಾಮಕೃಷ್ಣ ಅಯ್ಯಂಗಾರ್, ಪ್ರಾದೇಶಿಕ ಸಾರಿಗೆ ಇಲಾಖೆಯ ವ್ಯವಸ್ಥಾಪಕರಾದ ಶಿವಣ್ಣ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.
ಮಾರ್ಗ ಸರ್ವೇಗೆ ಸೂಚನೆ : ಜಿಲ್ಲೆಯ ಪ್ರವಾಸಿ ತಾಣಗಳಾದ ಭಾಗ ಮಂಡಲ, ತಲಕಾವೇರಿ, ಅಬ್ಬಿಪಾಲ್ಸ್ ಬಸ್ ಸೌಕರ್ಯ ಮತ್ತು ಮಡಿಕೇರಿಯಿಂದ ಅಬ್ಬಿಪಾಲ್ಸ್ ಮಾರ್ಗವಾಗಿ ನಗರ ಸಂಚಾರ ರಹದಾರಿ ಆರಂಭಿಸುವಂತೆ ಪ್ರವಾ
ೋದ್ಯಮ ಇಲಾಖೆಯಿಂದ ತಿಳಿಸಲಾಗಿದೆ. ಈ ಬಗ್ಗೆ ಕೆಎಸ್ಸಾರ್ಟಿಸಿ ಅಧಿಕಾರಿಗಳು ರಹದಾರಿ ಅನ್ವಯ ಬಸ್ ವ್ಯವಸ್ಥೆಯನ್ನು ಪ್ರಾರಂಭಿಸುವಂತಾಗಬೇಕು. ಈ ಬಗ್ಗೆ ಸರ್ವೇಯನ್ನು ಮಾಡಿ ಅಗತ್ಯ ಸಿದ್ಧತೆಯನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.







