ಉಚಿತ ವೈದ್ಯಕೀಯ -ನೇತ್ರ ತಪಾಸಣಾ ಶಿಬಿರ
ಉಡುಪಿ, ಮೇ 15: ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ಉಡುಪಿ ಆದರ್ಶ ಆಸ್ಪತ್ರೆ ಹಾಗೂ ಪ್ರಸಾದ್ ನೇತ್ರಾಲಯದ ಸಹಯೋಗದೊಂದಿಗೆ ವೈದ್ಯಕೀಯ ಮತ್ತು ನೇತ್ರ ತಪಾಸಣಾ ಹಾಗೂ ಶಸ ತಪಾಸಣಾ ಶಿಬಿರವನ್ನು ರವಿವಾರ ರಾಜಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯ 86ನೆ ಜನ್ಮಾನಕ್ಷತ್ರದ ಪ್ರಯುಕ್ತ ಆಯೋಜಿಸಲಾದ ಈ ಶಿಬಿರವನ್ನು ಪೇಜಾವರ ಶ್ರೀ ಉದ್ಘ್ಘಾಟಿಸಿದರು. ಈ ಸಂದರ್ಭದಲ್ಲಿ ಆದರ್ಶ ಆಸ್ಪತ್ರೆಯ ಹಿರಿಯ ವೈದ್ಯ ಡಾ.ರಾಜನ್, ಪ್ರಸಾದ್ ನೇತ್ರಾಲಯದ ಡಾ.ಕೃಷ್ಣ ಪ್ರಸಾದ್ ಉಪಸ್ಥಿತರಿದ್ದರು.
Next Story