Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ♦ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ...

♦ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಪರಸ್ಪರರ ರಹಸ್ಯಗಳು ತಿಳಿದಿವೆ.

ವಾರ್ತಾಭಾರತಿವಾರ್ತಾಭಾರತಿ15 May 2016 11:41 PM IST
share

♦ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಪರಸ್ಪರರ ರಹಸ್ಯಗಳು ತಿಳಿದಿವೆ.

-ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ
 ಈ ರಹಸ್ಯವನ್ನು ನಿಮಗೆ ತಿಳಿಸಿದವರು ಯಾರು?

---------------------
  ♦ ವಿವೇಕ, ಬುದ್ಧಿವಂತಿಕೆ ಮತ್ತು ಕ್ರಿಯಾಶೀಲತೆಯನ್ನು ಹೊಂದಿರುವ ಯುವಜನರು ಪ್ರತಿಭೆಗಳ ಗಣಿಯಾಗುತ್ತಾರೆ.

-ನಾಗತಿಹಳ್ಳಿ ಚಂದ್ರಶೇಖರ್, ಸಾಹಿತಿ

 ನಿಮ್ಮ ಇತ್ತೀಚಿನ ಸಿನೆಮಾಗಳು ವಿಫಲವಾಗುತ್ತಿರುವುದು ನೋಡಿದರೆ, ವಿವೇಕ, ಬುದ್ಧಿವಂತಿಕೆ, ಕ್ರಿಯಾಶೀಲತೆ ಇಲ್ಲದ ವೃದ್ಧರ ನೆನಪಾಗುತ್ತದೆ.

---------------------

♦ ರಾಜ್ಯದಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡಿದ ತಕ್ಷಣ ದಲಿತರ ಉದ್ಧಾರವಾಗುವುದಿಲ್ಲ.

-ಸತೀಶ್ ಜಾರಕಿಹೊಳಿ, ಸಚಿವ

ದಲಿತ ಮುಖ್ಯಮಂತ್ರಿಯ ಉದ್ಧಾರವಾದರೂ ಆದೀತಲ್ಲವೆ?

---------------------

♦  ಪಶ್ಚಿಮಬಂಗಾಳ ಮತ್ತು ಕೇರಳ ಭಾರತದಲ್ಲಿದೆಯೇ ಎಂಬ ಬಗ್ಗೆ ಸಂಶಯ ಉಂಟಾಗುತ್ತಿದೆ.

-ನರೇಂದ್ರ ಮೋದಿ, ಪ್ರಧಾನಿ

ತಾವು ವಿದೇಶದಲ್ಲೇ ಸುತ್ತಾಡುತ್ತಿದ್ದರೆ ದೇಶದ ಕುರಿತು ಇಂತಹದೆಲ್ಲ ಅನುಮಾನ ಸಹಜ.

---------------------

♦  ದಲಿತ ಮುಖ್ಯಮಂತ್ರಿಯಾಗಬೇಕು ಎನ್ನುವ ಆಸೆ ನನಗೂ ಇದೆ.

-ಶ್ರೀನಿವಾಸ ಪ್ರಸಾದ್, ಸಚಿವ

ಆಸೆಯೇ ದುಃಖಕ್ಕೆ ಮೂಲ ಎಂದು ಬುದ್ಧ ಬೋಧಿಸಿದ್ದನ್ನು ತಾವು ಮರೆಯದಿರಿ.

---------------------

♦  ಬರ ಹಿನ್ನೆಲೆಯಲ್ಲಿ ಗೋವುಗಳನ್ನು ಕಸಾಯಿಖಾನೆಗೆ ಮಾರದಿರಿ.

-ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ

 ತಮಗೆ ಕೊಟ್ಟರೆ, ತಾವು ಅದನ್ನು ವಿದೇಶಕ್ಕೆ ರಫ್ತು ಮಾಡುವ ಯೋಜನೆ ಹಾಕಿಕೊಂಡಿದ್ದೀರೇನೋ?

---------------------

♦ ಭಾರತವೇ ನನ್ನ ಮನೆ.

-ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ

ಜೀವನವನ್ನು ವಿದೇಶದಲ್ಲೇ ಕಳೆಯುತ್ತಿರುವ ಪ್ರಧಾನಿಗೆ ಇದು ಅರ್ಥವಾಗುವುದು ಕಷ್ಟ.

---------------------

♦   ಬಿಜೆಪಿಯವರಂತೆ ವರ್ಷಕ್ಕೊಮ್ಮೆ ಮುಖ್ಯಮಂತ್ರಿಯನ್ನು ಬದಲಿಸುವ ಪದ್ಧತಿ ಕಾಂಗ್ರೆಸ್‌ನಲ್ಲಿಲ್ಲ.

-ಬಿ.ಕೆ. ಹರಿಪ್ರಸಾದ್, ಕಾಂಗ್ರೆಸ್ ನಾಯಕ

ಮುಂದಿನ ಐದು ವರ್ಷದಲ್ಲಿ ಜನರೇ ಬದಲಿಸುತ್ತಾರೆ ಬಿಡಿ.

---------------------

♦   ಸಿದ್ದರಾಮಯ್ಯ ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ.

-ಕೆ.ಎಸ್. ಈಶ್ವರಪ್ಪ, ವಿ.ಪ.ವಿ. ನಾಯಕ

 ನೀವಿನ್ನೂ ಬೀದಿಯಲ್ಲಿ ಸ್ವತಂತ್ರವಾಗಿ ಓಡಾಡುತ್ತಿರುವುದು ನೋಡಿದರೆ ನಿಮ್ಮ ಮಾತು ನಿಜ ಅನ್ನಿಸುತ್ತದೆ.

---------------------

♦  ಮೋದಿಯ ಶೈಕ್ಷಣಿಕ ಅರ್ಹತೆ ವಿವಾದದ ವಿಷಯವೇ ಅಲ್ಲ.

-ನಿತೀಶ್‌ಕುಮಾರ್, ಬಿಹಾರ ಮುಖ್ಯಮಂತ್ರಿ

ತಮ್ಮ ಶೈಕ್ಷಣಿಕ ಅರ್ಹತೆಯ ಬಗ್ಗೆ ಅನುಮಾನ ಹುಟ್ಟುತ್ತಿದೆ.

---------------------

♦  ಸಚಿವ ಸಂಪುಟ ಪುನಾರಚನೆ ವೇಳೆ ನಮ್ಮನ್ನು ಕೈಬಿಟ್ಟರೂ ಸಂತೋಷ, ಬಿಡದಿದ್ದರೂ ಸಂತೋಷ.

-ಅಂಬರೀಷ್, ಸಚಿವ

  ನಿಮ್ಮ ಸಂತೋಷಕ್ಕಿಂತ ಜನರ ಸಂತೋಷ ಮುಖ್ಯ. ಕೈ ಬಿಡುತ್ತಾರೆ ಬಿಡಿ.

---------------------

♦  ಜನರು ಗೋವುಗಳನ್ನು ಕದ್ದು, ತುಂಡುಮಾಡಿ ಅಮೆರಿಕಕ್ಕೆ ಮಾರಾಟ ಮಾಡುತ್ತಿದ್ದಾರೆ.

-ಮುಲಾಯಂ ಸಿಂಗ್ ಯಾದವ್, ಎಸ್ಪಿ ಮುಖ್ಯಸ್ಥ

 ನಿಮ್ಮ ರಾಜ್ಯದಲ್ಲಿ ಮನುಷ್ಯರನ್ನೇ ಕೊಂದು ತುಂಡು ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಏನು ಹೇಳುತ್ತೀರಿ?

---------------------

♦ ನಿತೀಶ್‌ಗೆ ಪ್ರಧಾನಿ ಹುದ್ದೆಗೆ ಬೇಕಾದ ಅರ್ಹತೆ ಇಲ್ಲ.

-ಮುಹಮ್ಮದ್ ತಸ್ಲೀಮುದ್ದೀನ್, ಆರ್‌ಜೆಡಿ ಮುಖಂಡ

ಜನರ ವಿಶ್ವಾಸಾರ್ಹತೆ ಮುಖ್ಯ. ಸದ್ಯಕ್ಕೆ ಅದು ಇದೆ ಅನ್ನಿಸುತ್ತದೆ.

---------------------

♦ ಸಿದ್ದರಾಮಯ್ಯ ಸರಕಾರದ 3 ವರ್ಷದ ಅವಧಿಯಲ್ಲಿ ಯಾರೂ ಹಣ ಎಣಿಸುವ ಮಷಿನ್‌ಗಳನ್ನು ಇಟ್ಟುಕೊಂಡಿಲ್ಲ.

-ವಿ.ಎಸ್. ಉಗ್ರಪ್ಪ, ವಿ.ಪ. ಸದಸ್ಯ

ಹಣ ಮುದ್ರಿಸುವ ಮಷಿನ್ ಬಗ್ಗೆ ಜನರು ಆಡಿಕೊಳ್ಳುತ್ತಿದ್ದಾರೆ.

--------------------

♦  ಉತ್ತರಾಖಂಡದಲ್ಲಿ ಪ್ರಜಾಪ್ರಭುತ್ವ ಗೆದ್ದಿದೆ.

-ರಾಹುಲ್‌ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ

 ಕಾಂಗ್ರೆಸ್ ಕೇಂದ್ರದಲ್ಲಿ ಗೆಲ್ಲುವುದು ಯಾವಾಗ?

---------------------

♦  ರೈತರಿಗಾಗಿ ಕೇಂದ್ರ ಕೈಗೊಂಡ ಯಾವುದೇ ಯೋಜನೆ ತೃಪ್ತಿಕೊಟ್ಟಿಲ್ಲ.

-ದೇವೇಗೌಡ, ಮಾಜಿ ಪ್ರಧಾನಿ

  ಕುಮಾರಸ್ವಾಮಿಗಾಗಿ ಕೇಂದ್ರದಲ್ಲಿ ಒಂದು ಖಾತೆ ನೀಡಿದರೆ ನಿಮಗೆ ತೃಪ್ತಿಯಾದೀತೆ?

---------------------

♦   ಜಗದೀಶ್ ಶೆಟ್ಟರ್ ಬಿಡುಗಡೆ ಮಾಡಿರುವ ಆರೋಪ ಪಟ್ಟಿಯಲ್ಲಿ ಉಪ್ಪೂ ಇಲ್ಲ, ಹುಳಿಯೂ ಇಲ್ಲ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

  ಬರೇ ಖಾರ ಮಾತ್ರ ಅಂತೀರಾ?

---------------------

♦ ಭಗವಂತನನ್ನು ಪೂಜಿಸುವ ಪ್ರಕಾರಗಳು ಬಹಳಷ್ಟಿವೆ.

-ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ

 ಅಸ್ಪಶ್ಯತೆ ಆ ಪ್ರಕಾರಗಳಲ್ಲಿ ಒಂದೇ?

---------------------

♦  ಸಿದ್ದರಾಮಯ್ಯ ಸರಕಾರದ ಆಡಳಿತ ಚಕ್ರ ನೆಲದಲ್ಲಿ ಸಂಪೂರ್ಣ ಹೂತು ಹೋಗಿದೆ.

-ಜಗದೀಶ್ ಶೆಟ್ಟರ್, ವಿಪಕ್ಷ ನಾಯಕ

ಅದು ಹಳೆಯ ಜನತಾದಳದ ಚಕ್ರವಂತೆ. ಚಿಂತೆ ಬೇಡ.

---------------------

♦ ಗಂಗೆಯಿಂದ ಕಾವೇರಿವರೆಗೆ ಎಲ್ಲ ನದಿಗಳನ್ನು ಜೋಡಿಸುವುದು ಅಸಾಧ್ಯ

-ಮುರಳಿ ಮನೋಹರ ಜೋಷಿ, ಬಿಜೆಪಿ ನಾಯಕ

  ಸದ್ಯಕ್ಕೆ ಅವುಗಳನ್ನು ಬತ್ತಿಸುವ ಯೋಜನೆ ಮುಂದುವರಿದಿದೆ.

---------------------

♦  ಹಣವಿಲ್ಲದೆ ನಾನು ದಿವಾಳಿಯಾಗಿದ್ದೇನೆ.

-ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

 ಅಂದರೆ, ಎಲ್ಲವನ್ನೂ ಅಪ್ಪ ಬಚ್ಚಿಟ್ಟುಕೊಂಡಿದ್ದಾರೆ ಎಂಬ ಆರೋಪವೇ?

---------------------

♦  ನಮ್ಮದು ಜೈಲು-ಬೇಲು ಸರಕಾರವಲ್ಲ.

-ಡಾ. ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

 ರೈತರು, ದಲಿತರನ್ನು ಬೇಲು ಕೊಡದೆ ಜೈಲಿಗೆ ತಳ್ಳುವ ಸರಕಾರವೇ?

share
ವಾರ್ತಾಭಾರತಿ
ವಾರ್ತಾಭಾರತಿ
Next Story
X