Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕೊಳ್ಳುವವರಿಗಾಗಿ ಕಾಯುತ್ತಿದೆ ಮಲ್ಯರ...

ಕೊಳ್ಳುವವರಿಗಾಗಿ ಕಾಯುತ್ತಿದೆ ಮಲ್ಯರ ಐಷಾರಾಮಿ ವಿಮಾನ!

ವಾರ್ತಾಭಾರತಿವಾರ್ತಾಭಾರತಿ15 May 2016 11:45 PM IST
share
ಕೊಳ್ಳುವವರಿಗಾಗಿ ಕಾಯುತ್ತಿದೆ ಮಲ್ಯರ ಐಷಾರಾಮಿ ವಿಮಾನ!

ಮುಂಬೈ, ಮೇ 15: ಒಂದು ಕಾಲದಲ್ಲಿ ‘ಒಳ್ಳೆ ಕಾಲದ ರಾಜ’ ಎನಿಸಿದ್ದ ವಿಜಯ ಮಲ್ಯರ ಖಾಸಗಿ ಐಷಾರಾಮಿ ವಿಮಾನವು ಹರಾಜಿಗಾಗಿ ಕಾಯುತ್ತಿದೆ. ತೆರಿಗೆ ಪ್ರಾಧಿಕಾರವು ತನ್ನ ಬಾಕಿಯನ್ನು ವಸೂಲು ಮಾಡಲು, ಮೃದುವಾದ ಸೋಫಾಗಳು, ಕುಶನ್ ಹಾಸಿಗೆಗಳು, ಬಾರ್‌ಗಳು, ಶವರ್ ಹಾಗೂ ಸ್ನಾನಗೃಹಗಳುಳ್ಳ ಜೆಟ್ ವಿಮಾನವನ್ನು ಹರಾಜು ಹಾಕಲಿದೆ.

25 ಆಸನಗಳ ಈ ವಿಮಾನದಲ್ಲಿ ದೇವಾಧಿದೇವತೆಗಳ ಚಿತ್ರಗಳನ್ನೂ ತೂಗು ಹಾಕಲಾಗಿದೆ. ಹೊರಗಡೆ ವಿಮಾನದ ಮೂತಿಯ ಮೇಲೆ ಮಲ್ಯರ ಒಬ್ಬ ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳ ಹೆಸರುಗಳನ್ನು ಬರೆಯಲಾಗಿದೆ. ಜೆಟ್‌ನ ಹೆಸರಿನಲ್ಲಿ ಅವರ ಹೆಸರಿನ ಅಧ್ಯ್ಯಕ್ಷರಗಳಾದ ‘ವಿಜೆಎಂ’ ಸೇರಿವೆ.

ಬ್ಯಾಂಕುಗಳು ಮಲ್ಯರ ಈಗ ನಿಷ್ಕ್ರಿಯಗೊಂಡಿರುವ ಕಿಂಗ್‌ಫಿಶರ್ ಏರ್‌ಲೈನ್ಸ್‌ನಿಂದ ಬಾಕಿಯಿರುವ ರೂ. 9,400 ಕೋಟಿಗೂ ಹೆಚ್ಚು ಅಸಲು-ಬಡ್ಡಿ ವಸೂಲಿಗಾಗಿ ಹೆಣಗುತ್ತಿದ್ದರೆ, ಸೇವಾ ತೆರಿಗೆ ಇಲಾಖೆಯು ತನ್ನ ರೂ. 500 ಕೋಟಿ ಬಾಕಿ ವಸೂಲಿಗಾಗಿ ಅವರ ಖಾಸಗಿ ವಿಮಾನ ಮಾರಾಟಕ್ಕೆ ಭಾರೀ ಪ್ರಯತ್ನ ನಡೆಸುತ್ತಿದೆ.

ಮೂರು ವರ್ಷಗಳಿಗೂ ಹಿಂದೆ ನೆಲ ಹಿಡಿದಿರುವ ಈ ಏರ್‌ಬಸ್ ವಿಮಾನ ಮುಂಬೈಯ ಏಕಾಂತ ನಿಲ್ದಾಣದಲ್ಲಿ ಧೂಳು ತಿನ್ನುತ್ತ ನಿಂತಿದೆ.
ಏರ್‌ಬಸ್ ಎ-319-133 ಸಿಜೆಯನ್ನು ಇದ್ದಲ್ಲಿಯೇ, ಇರುವಂತೆಯೇ ಹೇಗಿದೆಯೋ ಹಾಗೆ ಮತ್ತು ದೂರು ರಹಿತ ನೆಲೆಯಲ್ಲಿ ಹರಾಜು ಹಾಕಲಾಗುವುದು.

ವಿಮಾನದ ಹರಾಜು ಮೊದಲು ಮೇ 12-13ಕ್ಕೆ ನಿಗದಿಯಾಗಿತ್ತು. ಆದರೆ, ಕೇವಲ ಒಂದೇ ಬಿಡ್ ಬಂದ ಕಾರಣ ಅದನ್ನು ಜೂ.29-30ಕ್ಕೆ ಮುಂದೂಡಲಾಗಿದೆ. ಸರಕಾರಿ ಸ್ವಾಮ್ಯದ ಎಂಎಸ್‌ಟಿಸಿ ಲಿ. ನಡೆಸುವ ಹರಾಜಿನಲ್ಲಿ ಭಾಗವಹಿಸಲಿಚ್ಛಿಸುವವರು ರೂ. 1 ಕೋಟಿ ಮುಂಗಡ ಠೇವಣಿಯಿರಿಸಬೇಕು.

ಆದರೆ, ಮಲ್ಯರ ಇತರ ಆಸ್ತಿಗಳಾದ ಮುಂಬೈಯ ಕಿಂಗ್‌ಫಿಶರ್ ಹೌಸ್, ಕಿಂಗ್‌ಫಿಶರ್ ಲಾಂಛನ ಇತ್ಯಾದಿಗಳನ್ನು ಕೊಳ್ಳುವುದಕ್ಕೂ ಯಾರೂ ಉತ್ಸಾಹ ತೋರಿಸಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X