Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ವಿಜಯನಾಥ್ ಶೆಣೈ ಅವರ ಮನುಷ್ಯ ವಿರೋಧಿ...

ವಿಜಯನಾಥ್ ಶೆಣೈ ಅವರ ಮನುಷ್ಯ ವಿರೋಧಿ ಕಂಬಗಳು!

-ಶಿವು ತೀರ್ಥಹಳ್ಳಿ-ಶಿವು ತೀರ್ಥಹಳ್ಳಿ15 May 2016 11:50 PM IST
share

ಮಾನ್ಯರೆ,
ಹಸ್ತಶಿಲ್ಪ ಮೂಲಕ ಇಂದು ರಾಜ್ಯಮಟ್ಟದಲ್ಲಿ ಗುರುತಿಸಲ್ಪಟ್ಟಿರುವ, ಹಸ್ತಶಿಲ್ಪ ಹೆರಿಟೇಜ್ ವಿಲೇಜ್ ಸಂಸ್ಥಾಪಕ ವಿಜಯನಾಥ್ ಶೆಣೈ ಅವರು ಇದೀಗ ದುಬಾರಿ ಶುಲ್ಕದ ಜೊತೆಗೆ ಅವುಗಳನ್ನು ವೀಕ್ಷಣೆಗೆ ಇಟ್ಟಿದ್ದಾರೆ. ಈ ಭವ್ಯ ಮನೆಗಳ ಹಿಂದಿರುವ ಶೆಣೈ ಅವರ ಸಾಧನೆ, ಶ್ರಮ ಇವುಗಳು ಮೆಚ್ಚುವಂತಹದು. ಆದರೆ ಶನಿವಾರ ಬೆಂಗಳೂರಿನಲ್ಲಿ ನಡೆದ ಜಾನಪದ ಪರಿಷತ್ ಕಾರ್ಯಕ್ರಮವೊಂದಲ್ಲಿ ಮಾತನಾಡುತ್ತಾ, ಭು ಸುಧಾರಣೆಯ ಪರಿಣಾಮ ಅವಿಭಕ್ತ ಕುಟುಂಬಗಳು ವಿಂಗಡಣೆಗೊಂಡು, ಜಾನಪದ ಸಂಪತ್ತು ಸಹ ಅಳಿವಿನಂಚಿಗೆ ಬಂದವು. ದೊಡ್ಡ ಮನೆಗಳು ನಾಶವಾಗಿ ಸಣ್ಣ ಸಣ್ಣ ಮನೆಗಳಾದವು. ಇದರಿಂದ ಜಾನಪದ ಸಂಪತ್ತು ನಾಶವಾದವು ಎಂದು ಹೇಳಿಕೆ ನೀಡಿದ್ದಾರೆ. ಗೋಕುಲಾಷ್ಟಮಿಗೂ ಇಮಾಂಸಾಬಿಗೂ ಸಂಬಂಧವನ್ನು ಜೋಡಿಸಲು ಅವರು ಯತ್ನಿಸಿದ್ದಾರೆ. ಇದು ನಿಜಕ್ಕೂ ಪ್ರಶ್ನಾರ್ಹವಾಗಿದೆ.

ಭೂಸುಧಾರಣಾ ಕಾಯ್ದೆಯಿಂದಾಗಿ ಭೂಮಿಯಿಲ್ಲದೆ ಇನ್ನೊಬ್ಬರ ಭೂಮಿಯಲ್ಲಿ ದುಡಿಯುತ್ತಿದ್ದ ಸಾವಿರಾರು ಜನರು ಭೂಮಿಯ ಹಕ್ಕನ್ನು ಪಡೆದರು. ಇಲ್ಲಿ ಯಾರೂ ವಿಜಯನಾಥ್ ಶೆಣೈ ಅವರ ಬಳಗದ ಮನೆಯಲ್ಲಿ ಪಾಲು ಕೇಳಲಿಲ್ಲ. ತಾವು ದುಡಿಯುತ್ತಿದ್ದ ಭೂಮಿಯನ್ನು ತಮ್ಮದಾಗಿಸಿಕೊಂಡರು. ಅದು ಅವರ ಹಕ್ಕಾಗಿತ್ತು. ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವಲ್ಲಿ ಭೂಸುಧಾರಣಾ ಕಾಯ್ದೆ ನೀಡಿರುವ ಕೊಡುಗೆ ಬಹುದೊಡ್ಡದು. ಅವಿಭಕ್ತ ಮನೆಗಳು ನಾಶವಾಗಲು ಭೂಸುಧಾರಣೆ ಕಾಯ್ದೆ ಕಾರಣ ಎನ್ನುವುದು ಅವರ ಒಳಗಿನ ಬೇರೆ ಅಸಮಾಧಾನದ ಕಾರಣದಿಂದ ಹುಟ್ಟಿಕೊಂಡಿರುವುದು ಆಗಿರಬಹುದು. ಅನೇಕ ಬೃಹತ್ ಮನೆಗಳ ಸದಸ್ಯರು ವಿದೇಶಗಳಿಗೆ ತೆರಳಿದ್ದು, ಅಮೆರಿಕದ ಐಟಿ ಬಿಟಿ ಕಂಪೆನಿಗಳಲ್ಲಿ ಡಾಲರ್ ಎಣಿಸತೊಡಗಿದ್ದು ಕೂಡ ಅವಿಭಕ್ತ ಮನೆಗಳು ಬೇರೆ ಬೇರೆಯಾಗಲು ಕಾರಣವಾಗಿವೆ. ನಗರೀಕರಣ ಬೆಳೆದಂತೆ, ಗ್ರಾಮೀಣ ಯುವಕರು ನಗರಗಳ ಮೇಲೆ ಆಸಕ್ತಿ ತಳೆದಂತೆ ಮನೆಗಳೂ ಸಣ್ಣದಾಗುತ್ತಾ ಹೋದವು. ಇದು ಸ್ವತಃ ಅವರದೇ ಸ್ವಯಂ ಆಯ್ಕೆಯಾಗಿದೆ. ಆದರೆ ವಿಜಯನಾಥ್ ಶೆಣೈ ಅವರು, ಭೂಮಿಯಿಲ್ಲದೆ ಜೀತದಾಳುಗಳಂತೆ ದುಡಿಯುತ್ತಿದ್ದ ಕೆಳವರ್ಗದ ಜನರ ಮೇಲೆ, ಮನೆ ಒಡೆದ ಆರೋಪ ಮಾಡುತ್ತಿದ್ದಾರೆ. ಸಂಸ್ಕೃತಿ ಎಂದರೆ ಭೂಮಾಲಕತನ, ಜಮೀನ್ದಾರಿಕೆ, ಜೀತ ಪದ್ಧತಿ, ಜಾತಿ ಪದ್ಧತಿ ಎಂದೇ ಅವರು ಇನ್ನೂ ನಂಬಿದಂತಿದೆ. ಭೂಸುಧಾರಣೆ ಕಾಯ್ದೆಯ ಸಾಮಾಜಿಕ ನ್ಯಾಯಕ್ಕೆ ಅಡ್ಡಿ ಬರುವ ವಿಜಯನಾಥ್ ಶೆಣೈ ಅವರ ಮನೆಯ ಕಂಬಗಳು, ಗೋಡೆಗಳು ಇದ್ದರೂ ಒಂದೇ, ಇರದಿದ್ದರೂ ಒಂದೇ. ಅವುಗಳು ಮನುಷ್ಯ ಸಂವೇದನೆಗಳಿಲ್ಲದ ಜಡ ಕಂಬಗಳು, ಗೋಡೆಗಳು. ಅವುಗಳಿಂದ ಈ ಸಮಾಜ, ನಾವು ಪಡೆದುಕೊಳ್ಳುವುದು ಏನೂ ಇಲ್ಲ. ಅವರ ಹೆರಿಟೇಜ್ ವಿಲೇಜ್ ಈ ನಾಡಿನ ಭವ್ಯ ಹಸ್ತ ಶಿಲ್ಪಗಳ ಸಂಗ್ರಹಾಲಯವಾಗಲಿ ಹೊರತು, ಜಾತಿ, ಅಸಮಾನತೆ, ಜೀತ, ಜಮೀನ್ದಾರಿಕೆಗಳ ವಿಲೇಜ್ ಆಗದಿರಲಿ.

share
-ಶಿವು ತೀರ್ಥಹಳ್ಳಿ
-ಶಿವು ತೀರ್ಥಹಳ್ಳಿ
Next Story
X