ಸೂಟರ್ಪೇಟೆ: ಮಳೆಗಾಗಿ ವಿಶೇಷ ಪ್ರಾರ್ಥನೆ
ಮಂಗಳೂರು, ಮೇ 15: ಸೂಟರ್ಪೇಟೆಯ ಶ್ರೀ ಕೋರ್ದಬ್ಬು ದೇವಸ್ಥಾನದಲ್ಲಿ ಮಳೆಗಾಗಿ ಶನಿವಾರ ವಿಶೇಷ ಪೂಜೆ, ಪ್ರಾರ್ಥನೆ ನಡೆಯಿತು. ಜಲಕ್ಷಾಮ ನಿವಾರಣೆಗಾಗಿ ನಡೆದ ಸಂಕ್ರಮಣ ಪೂಜೆಯ ಸಂದರ್ಭದಲ್ಲಿ ಶ್ರೀಕ್ಷೇತ್ರದ ಗುರಿಕಾರ ಎಸ್.ರಾಘವೇಂದ್ರ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಗೌರವ ಸಲಹೆಗಾರ ಕೆ.ಪಾಂಡುರಂಗ, ಅರ್ಚಕರಾದ ಗಣೇಶ್, ಜಯ, ಪ್ರಧಾನ ಕಾರ್ಯದರ್ಶಿ ಎಸ್.ಜಗದೀಶ್ಚಂದ್ರ, ಖಜಾಂಚಿ ಎಸ್.ನವೀನ್ ಹಾಗೂ ಗ್ರಾಮ ಸದಸ್ಯರು ಉಪಸ್ಥಿತರಿದ್ದರು.
Next Story