ಕಟ್ಟಡ ಕಾರ್ಮಿಕರಿಗೆ ಉಚಿತ ವೈದ್ಯಕೀಯ ಶಿಬಿರ
ಮಂಗಳೂರು, ಮೇ 15: ಮಾಲಕರು ಕಾಳಜಿ ವಹಿಸಿದರೆ ಕಾರ್ಮಿಕರು ನೆಮ್ಮದಿಯ ಬದುಕು ನಡೆಸಲು ಸಾಧ್ಯವಾಗುತ್ತದೆ ಎಂದು ರಾಜ್ಯದ ಆರೋಗ್ಯ ಸಚಿವ ಯು.ಟಿ.ಖಾದರ್ ಅಭಿಪ್ರಾಯಿಸಿದ್ದಾರೆ. ಅವರು ಇಂದು ಾದರ್ ಮುಲ್ಲರ್ ಆಸ್ಪತ್ರೆ ಸಭಾಂಗಣದಲ್ಲಿ ಾದರ್ ಮುಲ್ಲರ್ ಆಸ್ಪತ್ರೆ ಮತ್ತು ಕ್ರೆಡೈ ಆಶ್ರಯದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಉಚಿತ ವೈದ್ಯಕೀಯ ಶಿಬಿರ ಉದ್ಘಾಟಿಸಿ ಮಾತನಾಡಿದರು. ಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ಕೊಡಿಸುವುದು ಅರ್ಥಪೂರ್ಣ ಕಾರ್ಯ ಎಂದು ಅವರು ಶ್ಲಾಘಿಸಿದರು.
ಕಾರ್ಮಿಕರಿಗೆ ಆರ್ಎಬಿಐ ಕಾರ್ಡ್ ನ್ನು ಕಾರ್ಮಿಕ ಇಲಾಖೆ ನೀಡಿದರೆ ಆರೋಗ್ಯ ಕಾಪಾಡುವ ಕೆಲಸವನ್ನು ಆರೋಗ್ಯ ಇಲಾಖೆ ಮಾಡುತ್ತಿದೆ. ಈ ಕಾರ್ಡ್ ಮೂಲಕ 1,516 ಬಗೆಯ ಕಾಯಿಲೆಗಳಿಗೆ ನಗದು ರಹಿತ ಚಿಕಿತ್ಸೆ ಲಭ್ಯವಿದೆ. ಬಿಪಿಎಲ್ ಅಲ್ಲದ ಕಾರ್ಮಿಕರಿಗೂ ಕಾರ್ಡ್ ಮಾಡಿಸಬಹುದು. ಹಿರಿಯ ನಾಗರಿಕ ಕಾರ್ಮಿಕರಿಗೆ 60 ಸಾವಿರ ರೂ. ಮೊತ್ತದವರೆಗೆ ಚಿಕಿತ್ಸೆ ನೀಡಬಹುದು ಎಂದವರು ಹೇಳಿದರು. ಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ಾದರ್ ರಿಚ್ಚರ್ಡ್ ಕುವೆಲ್ಲೊ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಮಕೃಷ್ಣ ರಾವ್, ಕ್ರೆಡೈ ಅಧ್ಯಕ್ಷ ಡಿ.ಬಿ.ಮೆಹ್ತಾ, ಗೌರವ ಕಾರ್ಯದರ್ಶಿ ನವೀನ್ ಕಾರ್ಡೋಜ ಉಪಸ್ಥಿತರಿದ್ದರು. ಆಸ್ಪತ್ರೆಯ ಡೀನ್ ಜೆ.ಪಿ.ಆಳ್ವ ಸ್ವಾಗತಿಸಿದರು.
ಸಾಂಕ್ರಾಮಿಕ ರೋಗ ಎದುರಿಸಲು ಇಲಾಖೆ ಸಜ್ಜು
ಮಳೆಗಾಲದಲ್ಲಿ ಹರಡುವ ಮಲೇ ರಿಯಾ, ಡೆಂಗ್ ಮೊದಲಾದ ಸಾಂಕ್ರಾ ಮಿಕ ರೋಗಗಳನ್ನು ಎದುರಿಸಲು ಆರೋಗ್ಯ ಇಲಾಖೆ ಸಜ್ಜಾಗಿದೆ. ಸ್ಥಳೀಯ ಸಂಸ್ಥೆಗಳು ನೀರು ನಿಲ್ಲದಂತೆ, ಕೆರೆಗಳ ಶುಚಿತ್ವ, ಘನ ತ್ಯಾಜ್ಯ ವಿಲೇ ವಾರಿ, ಸೊಳ್ಳೆ ಉತ್ಪತ್ತಿ ತಡೆಗೆ ಆದ್ಯತೆ ನೀಡಬೇಕು. ರಾಜ್ಯದಲ್ಲಿ ಬೇಸಿಗೆ ಕಾಲ ದಲ್ಲಿ ಪೂರೈಕೆ ಮಾಡುವ ಕುಡಿಯುವ ನೀರಿನ 3.5 ಲಕ್ಷದಷ್ಟು ಮಾದರಿ ಸಂಗ್ರಹಿಸಿದ್ದು, ಈ ಪೈಕಿ 48 ಸಾವಿರ ಮಾದರಿ ಕುಡಿಯಲು ಆಯೋಗ್ಯವಾಗಿದೆ. ಶುದ್ಧ ಕುಡಿಯುವ ನೀರು ಪೂರೈಕೆಗಾಗಿ ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.
-ಯು.ಟಿ.ಖಾದರ್, ಆರೋಗ್ಯ ಸಚಿವರು