ಬಿಹಾರದ ಮೈತ್ರಿ ಸರಕಾರದಲ್ಲಿ ಹುಳಿ?: ನಿತೀಶ್ರನ್ನು ಟೀಕಿಸಿದ ರಘುವಂಶ್ ಸಿಂಗ್
![ಬಿಹಾರದ ಮೈತ್ರಿ ಸರಕಾರದಲ್ಲಿ ಹುಳಿ?: ನಿತೀಶ್ರನ್ನು ಟೀಕಿಸಿದ ರಘುವಂಶ್ ಸಿಂಗ್ ಬಿಹಾರದ ಮೈತ್ರಿ ಸರಕಾರದಲ್ಲಿ ಹುಳಿ?: ನಿತೀಶ್ರನ್ನು ಟೀಕಿಸಿದ ರಘುವಂಶ್ ಸಿಂಗ್](https://www.varthabharati.in/sites/default/files/images/articles/2016/05/16/bihar.gif)
ಪಾಟ್ನ, ಮೇ 16: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ರನ್ನು ಟೀಕಿಸಿ ಆರ್ಜೆಡಿ ರಂಗಪ್ರವೇಶಿಸಿದ್ದು ಬಿಹಾರದ ಸಖ್ಯ ಸರಕಾರದಲ್ಲಿ ಬಿರುಕು ಬೀಳುತ್ತಿದೆಯೇ ಎಂಬ ಪ್ರಶ್ನೆ ಸೃಷ್ಟಿಯಾಗಿದೆ ಎಂದು ವರದಿಯಾಗಿದೆ. ಆರ್ಜೆಡಿ ನಾಯಕ ರಘುವಂಶ್ ಪ್ರಸಾದ್ ಸಿಂಗ್ ನಿತೀಶ್ ಕುಮಾರ್ ವಿರುದ್ಧ ಮಾತಾಡಿ ಬಿಜೆಪಿ ವಿರೋಧಿ ಸಖ್ಯಕ್ಕೆ ಸ್ವಯಂಘೋಷಿತ ನಾಯಕನಾಗುವುದು ನಿತೀಶ್ರ ಪ್ರಯತ್ನ ಸ್ವಾರ್ಥಿಯಾಗಿದೆ ಎಂದು ರಘುವಂಶ್ ಪ್ರಸಾದ್ ಆರೋಪಿಸಿದ್ದಾರೆ.
ವಿವಿಧ ರಾಜ್ಯಗಳಲ್ಲಿ ನಿತೀಶ್ ಕುಮಾರ್ ಪರ್ಯಟನೆ ನಡೆಸುತ್ತಿರುವುದು ಆರ್ಜೆಡಿ ಸಹಿತ ಮಿತ್ರ ಪಕ್ಷಗಳೊಂದಿಗೆ ಅವರು ಸಮಾಲೋಚಿಸಿಲ್ಲ. ಮೂಲೆಮೂಲೆಯಲ್ಲಿ ಮದ್ಯದಂಗಡಿಗೆ ಅನುಮತಿ ನೀಡಿದ್ದ ಅದೇ ನಿತೀಶ್ ಈಗ ಅದನ್ನೆಲ್ಲ ಮುಚ್ಚಲು ಮದ್ಯ ನಿರೋಧಕ್ಕೆ ಅತ್ಯುತ್ಸಾಹ ತೋರಿಸುತ್ತಿದ್ದಾರೆ. ರಘವಂಶ್ ಸಿಂಗ್ರ ಹೇಳಿಕೆ ಮತ್ತು ವಾದವನ್ನು ಜೆಡಿಯು ನಾಯಕರು ತಳ್ಳಿಹಾಕಿದ್ದರೂ ನಿತೀಶ್ ಕುಮಾರ್ ಈವರೆಗೂಪ್ರತಿಕ್ರಿಯಿಸಿಲ್ಲ ಎಂದು ವರದಿಯಾಗಿದೆ.
Next Story