ಪಶ್ಚಿಮ ಬಂಗಾಳ: ಆಡನ್ನು ಕದ್ದರೆಂದು ಆರೋಪಿಸಿ ಒಬ್ಬನನ್ನು ಹೊಡೆದು ಕೊಂದ ಊರಿನ ಗುಂಪು!
![ಪಶ್ಚಿಮ ಬಂಗಾಳ: ಆಡನ್ನು ಕದ್ದರೆಂದು ಆರೋಪಿಸಿ ಒಬ್ಬನನ್ನು ಹೊಡೆದು ಕೊಂದ ಊರಿನ ಗುಂಪು! ಪಶ್ಚಿಮ ಬಂಗಾಳ: ಆಡನ್ನು ಕದ್ದರೆಂದು ಆರೋಪಿಸಿ ಒಬ್ಬನನ್ನು ಹೊಡೆದು ಕೊಂದ ಊರಿನ ಗುಂಪು!](https://www.varthabharati.in/sites/default/files/images/articles/2016/05/16/bangal.jpg)
ಜೈಪಾಲ್ಗುಡಿ, ಮೇ 16: ಚಹಾ ತೋಟದಿಂದ ಆಡನ್ನು ಕದ್ದಿಯಲು ಶ್ರಮಿಸಿದ್ದಾನೆಂದು ಆರೋಪಿಸಿ ಇಲ್ಲಿ ಜನರಗುಂಪೊಂದು ಯುವಕನೊಬ್ಬನನ್ನು ಹೊಡೆದು ಕೊಂದು ಹಾಕಿದ ದಾರುಣ ಘಟನೆ ವರದಿಯಾಗಿದೆ.ಉತ್ತರ ಬಂಗಾಳದ ಜೈಪಾಲ್ಗುಡಿ ಜಿಲ್ಲೆಯಲ್ಲಿ ಆದಿತ್ಯವಾರ ಘಟನೆ ನಡೆದಿತ್ತು.
ಪೆಟ್ಟು ತಿಂದ ಇನ್ನೊಬ್ಬ ಸ್ಥಿತಿ ಭಾರೀ ಗಂಭೀರವಾಗಿದೆ. ಎಮ್ಮೆಯನ್ನು ಕದಿಯಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಿ ದಕ್ಷಿಣಬಂಗಾಳದಲ್ಲಿ ಐಟಿಐ ವಿದ್ಯಾರ್ಥಿಯನ್ನು ಜನರಗುಂಪೊಂದು ಹೊಡೆದು ಕೊಂದು ಹಾಕಿತ್ತು. ಇದಾಗಿ ಒಂದು ವಾರ ಕಳೆಯುವಾಗಲೇ ಆಡನ್ನು ಕದ್ದನೆಂದು ಆರೋಪಿಸಿ ಯುವಕನಿಗೆ ಗತಿತೋರಿಸಲಾಗಿದೆ. ಚಹಾ ತೋಟದಿಂದ ಆಡನ್ನು ನಾಲ್ಕು ಮಂದಿ ಆಡನ್ನು ಕಾರಿಗೆ ಹತ್ತಿಸಿ ಕೊಂಡು ಹೋಗಲು ಶ್ರಮಿಸುತ್ತಿರುವುದನ್ನು ನಾವು ನೋಡಿದೆವು ಎಂದು ಊರಿನವರು ಹೇಳುತ್ತಿದ್ದಾರೆ.ಇವರಲ್ಲಿಇಬ್ಬರು ಓಡಿ ಪಾರಾದರು. ಉಳಿದಿಬ್ಬರು ಇವರ ಕೈಗೆ ಸಿಕ್ಕಿ ಮಾರಣಾಂತಿಕವಾಗಿ ಪೆಟ್ಟು ತಿಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪೆಟ್ಟು ತಿಂದವರು ಬಂದದ್ದೆನ್ನಲಾದ ಕಾರನ್ನು ಊರಿನ ಮಂದಿ ಬೆಂಕಿಯಿಟ್ಟು ಉರಿಸಿ ಹಾಕಿದ್ದಾರೆ ಎಂದೂ ವರದಿಯಾಗಿದೆ.