ಕೆಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು, ಮೇ 16: ರಾಜ್ಯ ಸರಕಾರವು 15 ಮಂದಿ ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸೋಮವಾರ ಆದೇಶ ಹೊರಡಿಸಿದೆ.
ಡಾ.ಅರುಂಧತಿ ಚಂದ್ರಶೇಖರ್-ಕೆಯುಐಡಿಎಫ್ಸಿ ಪ್ರಧಾನ ವ್ಯವಸ್ಥಾಪಕಿ, ಶಿವಾನಂದ ಕಾಪಸಿ-ಕೆಯುಐಡಿಎಫ್ಸಿ ಕಾರ್ಯನಿರ್ವಾಹಕ ನಿರ್ದೇಶಕ, ಗಂಗೂಬಾಯಿ ಆರ್.ಮಾನಕರ್-ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಜಂಟಿ ಕಾರ್ಯದರ್ಶಿ.
ಸತ್ಯಭಾಮ ಸಿ-ಕರ್ನಾಟಕ ಗೆಜೆಟಿಯರ್ ಇಲಾಖೆಯ ಮುಖ್ಯ ಗೆಜೆಟಿಯರ್, ಎನ್.ಎಂ.ನಾಗರಾಜ-ಕೃಷ್ಣ ಭಾಗ್ಯ ಜಲನಿಗಮದ ಪ್ರಧಾನ ವ್ಯವಸ್ಥಾಪಕ, ಸಯೀದಾ ಆಯಿಷಾ-ಹುಬ್ಬಳ್ಳಿ ಧಾರವಾಡ ಜಿಲ್ಲೆಯ ಹೆಸ್ಕಾಂನ ಪ್ರಧಾನ ವ್ಯವಸ್ಥಾಪಕಿ, ಡಾ.ಬೂದೆಪ್ಪ ಎಚ್.ಬಿ.-ಹರಿಹರ ನಗರಸಭೆ ಆಯುಕ್ತ.
ಜಿ.ಅನುರಾಧಾ-ಶಿವಮೊಗ್ಗ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ, ಬಿ.ಶೋಭಾ-ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ನಿರ್ದೇಶನಾಲಯದ ಆಡಳಿತಾಧಿಕಾರಿ, ರಮೇಶ್ ಕಳಸದ್-ಉತ್ತರ ಕನ್ನಡ ಜಿಲ್ಲೆಯ ಕುಮಟಾ ಉಪ ವಿಭಾಗಾಧಿಕಾರಿ, ಪಿ.ಶಿವರಾಜು-ಹಾಸನ ಜಿಲ್ಲೆಯ ಸಕಲೇಶಪುರ ಉಪವಿಭಾಗಾಧಿಕಾರಿ.
ನರಸಿಂಹಪ್ಪ-ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ವಿಶೇಷ ಭೂಸ್ವಾಧೀನಾಧಿಕಾರಿ, ಡಾ.ಎಸ್.ಎಸ್.ಮಧುಕೇಶ್ವರ್-ಧಾರವಾಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳ ವಿಶೇಷ ಭೂಸ್ವಾಧೀನಾಧಿಕಾರಿ, ಟಿ.ಎನ್.ಕೃಷ್ಣಮೂರ್ತಿ- ಬೆಂಗಳೂರು ಮೆಟ್ರೊ ರೈಲು ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ ಹಾಗೂ ಕೆ.ಮಥಾಯಿಯವರನ್ನು ಬಾಗಲಕೋಟೆ ಜಿಲ್ಲೆಯ ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿಯನ್ನಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.







