ಶ್ರೇಯಸ್ ಹತ್ಯೆ ಯತ್ನ ಪ್ರಕರಣ:ಏಳು ಮಂದಿ ಬಂಧನ
ಮಂಗಳೂರು, ಮೇ16: ನಗರದ ಬಜಾಲ್ ಬಳಿ ಹೋಂ ಸ್ಟೇ ದಾಳಿ ಪ್ರಕರಣದ ಆರೋಪಿ ಶ್ರೇಯಸ್ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಏಳು ಮಂದಿ ಆರೋಪಿಗಳನ್ನು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಭಾಗಿಯಾದ ಕೌಶಿಕ್, ಮಿಥುನ್, ವಿನೋದ್ ಮಡಿವಾಳ, ವಿನೇಶ್ ಕುಮಾರ್, ಪ್ರತಾಪ್, ರಾಕೇಶ್ ಮತ್ತು ನಿಶಿತ್ ಪೂಜಾರಿ ಎಂಬವರನ್ನು ಬಂಧಿಸಲಾಗಿದೆ.
ಆರೋಪಿಗಳು ಮೇ 13 ರಂದು ಮಧ್ಯಾಹ್ನ ವೇಳೆ ಶ್ರೇಯಸ್ ಮೇಲೆ ತಲವಾರಿನಿಂದ ದಾಳಿ ನಡೆಸಿದ್ದರು.
Next Story





