ದೇಶವನ್ನು ಯಾರು ನಡೆಸುತ್ತಿದ್ದಾರೆ ನೀವೋ ಅಲ್ಲ ಸುಪ್ರೀಂ ಕೋರ್ಟೊ?: ಪ್ರಧಾನಿಯನ್ನು ಪ್ರಶ್ನಿಸಿದ ರಾಜ್ ಠಾಕ್ರೆ!
![ದೇಶವನ್ನು ಯಾರು ನಡೆಸುತ್ತಿದ್ದಾರೆ ನೀವೋ ಅಲ್ಲ ಸುಪ್ರೀಂ ಕೋರ್ಟೊ?: ಪ್ರಧಾನಿಯನ್ನು ಪ್ರಶ್ನಿಸಿದ ರಾಜ್ ಠಾಕ್ರೆ! ದೇಶವನ್ನು ಯಾರು ನಡೆಸುತ್ತಿದ್ದಾರೆ ನೀವೋ ಅಲ್ಲ ಸುಪ್ರೀಂ ಕೋರ್ಟೊ?: ಪ್ರಧಾನಿಯನ್ನು ಪ್ರಶ್ನಿಸಿದ ರಾಜ್ ಠಾಕ್ರೆ!](https://www.varthabharati.in/sites/default/files/images/articles/2016/05/17/2016_5image_15_01_060666000rajthackeray-ll.jpg)
ಹೊಸದಿಲ್ಲಿ, ಮೇ 17: ರಾಜ್ ಠಾಕ್ರೆ ನೀಟ್ ಪರೀಕ್ಷೆಯ ವಿಚಾರದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದು ಈ ವಿಷಯವನ್ನು ಪ್ರಧಾನಿಯವರಲ್ಲೂ ’ದೇಶವನ್ನು ಯಾರು ನಡೆಸುತ್ತಿದ್ದಾರೆ? ಸುಪ್ರೀಂ ಕೋರ್ಟ್ ಅಥವಾ ಕೇಂದ್ರ ಸರಕಾರ ’ ಎಂದು ತಾನು ಪ್ರಶ್ನಿಸಿದ್ದೇನೆಂದು ಹೇಳಿರುವುದಾಗಿ ವರದಿಯಾಗಿದೆ.
ಇತೀಚೆಗೆ ಕೇಂದ್ರಸರಕಾರ ಕರೆದ ಸಭೆಯಲ್ಲಿ ರಾಜ್ಯಗಳು ಮೆಡಿಕಲ್ ಭರ್ತಿಗಾಗಿ ಗಡಿಬಿಡಿಯಲ್ಲಿ ನೀಟ್ ಪರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದವು. ಈ ವಿಷಯವನ್ನು ಇನ್ನಷ್ಟೇ ಸುಪ್ರೀಂ ಕೋರ್ಟ್ಗೆ ಕೇಂದ್ರ ಸರಕಾರ ತಿಳಿಸಬೇಕಾಗಿದೆ. ನೀಟ್ ಅಥವಾ ನ್ಯಾಶನಲ್ ಎಂಟ್ರೆನ್ಸ್ ಎಗ್ಝಾಮಿನೇಶನ್ ಕುರಿತು ಕೇಂದ್ರದ ಆರೋಗ್ಯ ಸಚಿವ ಜೆಪಿ ನಡ್ಡಾ ರಾಜ್ಯಗಳ ಆರೋಗ್ಯ ಸಚಿವರ ಸಭೆ ನಡೆಸಿ ನೀಟ್ ಬೇಗನೆ ಮಾಡಿಮುಗಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸಲಾಗಿತ್ತು. ಸರಕಾರ ಈ ವಿಚಾರವನ್ನು ನ್ಯಾಯಾಲಯದ ಮುಂದೆ ಇರಿಸಲಿದೆ.
ನೀಟ್ ಜಾರಿಗೆ ಇನ್ನಷ್ಟು ಸಮಯವನ್ನು ಕೋರ್ಟ್ನಿಂದ ಯಾಚಿಸಲಾಗುವುದು. ಇದರಲ್ಲಿ ಕೋರ್ಸ್, ಭಾಷೆ ಮುಂತಾದೆಲ್ಲ ವಿಷಯಗಳು ಅಡಕವಾಗಿರಲಿದೆ. ಸರಕಾರಕ್ಕೆ ನೀಟ್ ಕುರಿತುಯಾವುದೇ ಆದ್ಯಾದೇಶ ತರುವ ಯೋಚನೆಯಿಲ್ಲ. ಸುಪ್ರೀಂಕೋರ್ಟ್ ದೇಶದಲ್ಲಿ ಮೆಡಿಕಲ್ ಎಂಟ್ರೆನ್ಸ್ ಪರೀಕ್ಷೆಯನ್ನು ಜುಲೈಇಪ್ಪತ್ತನಾಲ್ಕರಂದು ನಡೆಸಬೇಕೆಂದು ಆದೇಶಿಸಿತ್ತು.