ನಾಪತ್ತೆಯಾಗಿದ್ದ ಎಂಎಲ್ಸಿ ಮನೋರಮಾ ದೇವಿ ನ್ಯಾಯಾಲಯಕ್ಕೆ ಶರಣು; 14 ದಿನಗಳ ನ್ಯಾಯಾಂಗ ಬಂಧನ
![ನಾಪತ್ತೆಯಾಗಿದ್ದ ಎಂಎಲ್ಸಿ ಮನೋರಮಾ ದೇವಿ ನ್ಯಾಯಾಲಯಕ್ಕೆ ಶರಣು; 14 ದಿನಗಳ ನ್ಯಾಯಾಂಗ ಬಂಧನ ನಾಪತ್ತೆಯಾಗಿದ್ದ ಎಂಎಲ್ಸಿ ಮನೋರಮಾ ದೇವಿ ನ್ಯಾಯಾಲಯಕ್ಕೆ ಶರಣು; 14 ದಿನಗಳ ನ್ಯಾಯಾಂಗ ಬಂಧನ](https://www.varthabharati.in/sites/default/files/images/articles/2016/05/17/manorama-devi1.jpg)
ಪಾಟ್ನಾ, ಮೇ 17: ಮನೆಯಲ್ಲಿ ಮದ್ಯದ ಬಾಟ್ಲಿ ಪತ್ತೆಯಾದ ಬಳಿಕ ತಲೆಮರೆಸಿಕೊಂಡಿದ್ದ ಬಿಹಾರ ಜೆಡಿಯು ಎಂಎಲ್ಸಿ ಮನೋರಮಾ ದೇವಿ ಇಂದು ಗಯಾ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಅವರಿಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮಗ ರಾಕಿ ಯಾದವ್ ಉದ್ಯಮಿಯ ಮಗನೊಬ್ಬನನ್ನು ಕಾರನ್ನು ಓವರ್ಟೇಕ್ ಮಾಡಿದ ಆರೋಪದಲ್ಲಿ ಗುಂಡು ಹಾರಿಸಿ ಕೊಲೆ ಮಾಡಿದ್ದನು. ಆರೋಪಿ ರಾಕಿ ಯಾದವ್ಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾಗ ಮನೋರಮಾ ಮನೆಯಲ್ಲಿ ಮದ್ಯದ ಬಾಟ್ಲಿಗಳು ಪತ್ತೆಯಾಗಿತ್ತು. ಬಳಿಕ ಮನೋರಮಾ ದೇವಿ ನಾಪತ್ತೆಯಾಗಿದ್ದರು.
ಬಂಧನದ ಭೀತಿ ಎದುರಿಸುತ್ತಿದ್ದ ಮನೋರಮ ದೇವಿ ಮನೆಗೆ ಪೊಲೀಸರು ಬೀಗ ಜಡಿದಿದ್ದರು.
ಈ ಪ್ರಕರಣ ನಡೆದ ಬೆನ್ನಲ್ಲೆ ಮುಖ್ಯ ಮಂತ್ರಿ ನಿತೀಶ್ ಕುಮಾರ್ ಅವರು ಮನೋರಮಾ ದೇವಿ ಅವರನ್ನು ಅಮಾನತುಗೊಳಿಸಿದ್ದರು.
ಈ ನಡುವೆ ಆರೋಪಿ ರಾಕಿ ಯಾದವ್ ಮತ್ತು ಆತನ ತಂದೆ ಹಾಗೂ ಮನೋರಮಾ ದೇವಿ ಪತಿ ಬಿಂದಿ ಯಾದವ್ನನ್ನು ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದರು.
ಮಂಗಳವಾರ ದಿಢೀರನೆ ಕಾಣಿಸಿಕೊಂಡಿರುವ ಮನೋರಮಾ ದೇವಿ ನ್ಯಾಯಾಲಯಕ್ಕೆ ಶರಣಾದರು.