Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಪ್ಲೇ-ಆಫ್ ಸ್ಥಾನಕ್ಕೆ ಅಗ್ರ ಆರು ತಂಡಗಳ...

ಪ್ಲೇ-ಆಫ್ ಸ್ಥಾನಕ್ಕೆ ಅಗ್ರ ಆರು ತಂಡಗಳ ಸ್ಪರ್ಧೆ

ವಾರ್ತಾಭಾರತಿವಾರ್ತಾಭಾರತಿ17 May 2016 11:42 PM IST
share
ಪ್ಲೇ-ಆಫ್ ಸ್ಥಾನಕ್ಕೆ ಅಗ್ರ ಆರು ತಂಡಗಳ ಸ್ಪರ್ಧೆ

ಹೊಸದಿಲ್ಲಿ, ಮೇ 17: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ರವಿವಾರ ನಡೆದಿದ್ದ ಐಪಿಎಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ವಿರುದ್ದ ಸೋಲುವುದರೊಂದಿಗೆ ಪುಣೆ ಸೂಪರ್‌ಜಯಂಟ್ಸ್ ಬಳಿಕ ಪ್ಲೇ-ಆಫ್ ಸ್ಪರ್ಧೆಯಿಂದ ಹೊರಬಿದ್ದ ಎರಡನೆ ತಂಡವಾಗಿದೆ.

ಈ ವರೆಗೆ ಯಾವ ತಂಡವೂ ಪ್ಲೇ-ಆಫ್ ಸ್ಥಾನವನ್ನು ದೃಢಪಡಿಸಿಲ್ಲ. ಅಗ್ರ ಆರು ತಂಡಗಳು ಪ್ಲೇ-ಆಫ್ ಸ್ಪರ್ಧೆಯಲ್ಲಿವೆ. 8 ಪಂದ್ಯಗಳಲ್ಲಿ ಜಯ ಸಾಧಿಸಿರುವ ಸನ್‌ರೈಸರ್ಸ್ ತಂಡ ಪ್ಲೇ-ಆಫ್ ಹೊಸ್ತಿಲಲ್ಲಿದ್ದು, ನೆಟ್‌ರನ್‌ರೇಟ್ +0.400 ಇದೆ. ಇನ್ನು ಎರಡು ಪಂದ್ಯ ಆಡಲು ಬಾಕಿಯಿದೆ.

ಈ ಹಿಂದಿನ ಆವೃತ್ತಿಯಂತೆ ಈ ವರ್ಷ 8 ಪಂದ್ಯಗಳನ್ನು ಜಯಿಸಿದ್ದ ತಂಡ ಪ್ಲೇ-ಆಫ್ ಸ್ಥಾನವನ್ನು ಖಚಿತಪಡಿಸಲು ಸಾಧ್ಯವಾಗಿಲ್ಲ. 2016ರ ಆವೃತ್ತಿಯ ಐಪಿಎಲ್‌ನಲ್ಲಿ ಆರು ತಂಡಗಳು ಪ್ಲೇ-ಆಫ್ ಸ್ಥಾನದ ಸ್ಪರ್ಧೆಯಲ್ಲಿದ್ದು, ಒಂದು ವೇಳೆ 6 ತಂಡಗಳು ತಲಾ 16 ಅಂಕಗಳನ್ನು ಪಡೆದರೆ, ನೆಟ್ ರನ್‌ರೇಟ್ ನಿರ್ಣಾಯಕ ಪಾತ್ರವಹಿಸಲಿದೆ.

ಪ್ಲೇ-ಆಫ್ ಹಂತಕ್ಕೆ ಅರ್ಹತೆ ಸ್ಪರ್ಧೆಯಲ್ಲಿರುವ ಆರು ತಂಡಗಳು..

ಸನ್‌ರೈಸರ್ಸ್ ಹೈದರಾಬಾದ್: ಈ ತಂಡಕ್ಕೆ ಪ್ಲೇ- ಆಫ್ ಹಂತಕ್ಕೆ ತೇರ್ಗಡೆಯಾಗಲು ಉಳಿದ 2 ಪಂದ್ಯಗಳಲ್ಲಿ ಒಂದನ್ನು ಜಯಿಸಲೇಬೇಕಾಗಿದೆ. ಉಳಿದೆರಡು ಪಂದ್ಯಗಳನ್ನು ಕಡಿಮೆ ಅಂತರದಿಂದ ಸೋತರೆ, ಉತ್ತಮ ರನ್‌ರೇಟ್ ತಂಡಕ್ಕೆ ನೆರವಾಗಲಿದೆ.

ತಂಡ ಆಡಲಿರುವ ಪಂದ್ಯ: ಡೆಲ್ಲಿ ಡೇರ್ ಡೆವಿಲ್ಸ್, ಕೋಲ್ಕತಾ ನೈಟ್ ರೈಡರ್ಸ್.

ಕೋಲ್ಕತಾ ನೈಟ್ ರೈಡರ್ಸ್: ಈ ತಂಡ ಪ್ಲೇ-ಆಫ್‌ಗೆ ತೇರ್ಗಡೆಯಾಗಲು 2 ಪಂದ್ಯಗಳಲ್ಲಿ ಎರಡನ್ನೂ ಗೆಲ್ಲಬೇಕು. ಉಳಿದೆರಡು ಪಂದ್ಯಗಳನ್ನು ಸೋತರೆ, 14 ಅಂಕ ಹಾಗೂ ಉತ್ತಮ ನೆಟ್ ರನ್‌ರೇಟ್ ಮೂಲಕ ಮುಂದಿನ ಸುತ್ತಿಗೇರಬಹುದು. ಆದರೆ, ತಂಡದ ಅದೃಷ್ಟ ಉಳಿದ ಫಲಿತಾಂಶವನ್ನು ಅವಲಂಬಿಸಿರುತ್ತದೆ.

ತಂಡ ಆಡಲಿರುವ ಪಂದ್ಯ: ಗುಜರಾತ್, ಹೈದರಾಬಾದ್

ಮುಂಬೈ ಇಂಡಿಯನ್ಸ್: ಹೈದರಾಬಾದ್ ಹಾಗೂ ಕೋಲ್ಕತಾ ತಂಡಗಳಂತೆ ಮುಂಬೈನ ನೆಟ್‌ರನ್‌ರೇಟ್ ಉತ್ತಮವಾಗಿಲ್ಲ. 14 ಅಂಕ ಗಳಿಸಿರುವ ಮುಂಬೈನ ರನ್‌ರೇಟ್ -0.082. ಮುಂಬೈ ತಂಡ ಗುಜರಾತ್ ಲಯನ್ಸ್ ವಿರುದ್ಧದ ಕೊನೆಯ ಪಂದ್ಯವನ್ನು ದೊಡ್ಡ ಅಂತರದಿಂದ ಜಯಿಸಿ ನೆಟ್‌ರೇಟ್ ಹೆಚ್ಚಿಸಿಕೊಳ್ಳಬೇಕು.

ತಂಡ ಆಡಲಿರುವ ಪಂದ್ಯ:ಗುಜರಾತ್ ಲಯನ್ಸ್

ಗುಜರಾತ್ ಲಯನ್ಸ್: ಲಯನ್ಸ್ ತಂಡ ಉಳಿದಿರುವ ಎರಡೂ ಪಂದ್ಯಗಳನ್ನು ಜಯಿಸಿದರೆ ಅಂತಿಮ ನಾಲ್ಕರ ಘಟ್ಟ ತಲುಪಬಹುದು. ಒಂದು ಗೆಲುವು ತಂಡಕ್ಕೆ ನೆರವಾಗಬಹುದು. ಆದರ, ಇತರ ಫಲಿತಾಂಶ ತಂಡದ ಪರವಾಗಿರಬೇಕು. ಆರ್‌ಸಿಬಿ ವಿರುದ್ಧ 144 ರನ್ ಅಂತರದಿಂದ ಸೋತ ಬಳಿಕ ಲಯನ್ಸ್ ರನ್‌ರೇಟ್ -0.747ಕ್ಕೆ ಕುಸಿದಿದೆ. ಅಂಕಗಳು ಟೈ ಆದಾಗ ಕನಿಷ್ಠ ರನ್‌ರೇಟ್ ಮುಳುವಾಗಬಹುದು.

ತಂಡ ಆಡಲಿರುವ ಪಂದ್ಯ: ಕೋಲ್ಕತಾ ಹಾಗೂ ಮುಂಬೈ.

ಡೆಲ್ಲಿ ಡೇರ್ ಡೆವಿಲ್ಸ್: ಡೆಲ್ಲಿ ತಂಡಕ್ಕೆ ಮುಂದಿನ ಸುತ್ತಿಗೆ ತೇರ್ಗಡೆಯಾಗಲು ಉಳಿದ 3 ಪಂದ್ಯಗಳನ್ನು ಜಯಿಸಬೇಕಾಗಿದೆ. ಮುಂದಿನ ಸುತ್ತಿಗೇರಲು ಕನಿಷ್ಠ 14 ಅಂಕದ ಅಗತ್ಯವಿದೆ. ಇತರ ತಂಡಗಳಂತೆ ಡೆಲ್ಲಿ 16 ಇಲ್ಲವೇ 14 ಅಂಕ ಗಳಿಸಿ ಅರ್ಹತೆ ಗಳಿಸಬಹುದು. ನೆಟ್‌ರನ್‌ರೇಟ್-0.038 ಇರುವುದರಿಂದ ದೊಡ್ಡ ಅಂತರದ ಗೆಲುವು ಅಗತ್ಯವಿದೆ.

ತಂಡ ಆಡಲಿರುವ ಪಂದ್ಯ: ಪುಣೆ, ಹೈದರಾಬಾದ್, ಬೆಂಗಳೂರು.

ರಾಯಲ್ ಚಾಲೆಂಜರ್ಸ್‌ ಬೆಂಗಳೂರು:

 ರಾಯಲ್ ಚಾಲೆಂಜರ್ಸ್‌ಗೆ ಉಳಿದ ಎರಡು ಪಂದ್ಯಗಳನ್ನು ಜಯಿಸಿದರೆ, 16 ಅಂಕ ಸಂಪಾದಿಸಿ ಮುಂದಿನ ಸುತ್ತಿಗೇರುವ ಉತ್ತಮ ಅವಕಾಶವಿದೆ. ಒಂದುವೇಳೆ ಬೆಂಗಳೂರು 2 ಪಂದ್ಯ ಜಯಿಸಿದರೆ ಪ್ಲೇ-ಆಫ್ ಸ್ಪರ್ಧೆಯಲ್ಲಿರುವ ಸನ್‌ರೈಸರ್ಸ್, ಕೋಲ್ಕತಾ ಹಾಗೂ ಲಯನ್ಸ್ ತಂಡಗಳ ಪೈಕಿ ಕೇವಲ ಎರಡು ತಂಡಗಳು ಅಂಕಪಟ್ಟಿಯಲ್ಲಿ ಬೆಂಗಳೂರಿಗಿಂತ ಮೇಲಿನ ಸ್ಥಾನ ತಲುಪಬಹುದು. ಉಳಿದೆರಡು ತಂಡಗಳಿಗೆ ಬೆಂಗಳೂರಿಗಿಂತ ಹೆಚ್ಚು ನೆಟ್‌ರೇಟ್ ಗಳಿಸಲು ಸಾಧ್ಯವಿಲ್ಲ. ಬೆಂಗಳೂರು ಪ್ರಸ್ತುತ +0.640 ರನ್‌ರೇಟ್ ಹೊಂದಿದೆ. ಇತರ ಫಲಿತಾಂಶ ಬೆಂಗಳೂರು ಪರವಾಗಿದ್ದರೆ, 14 ಅಂಕ ಗಳಿಸಿದರೂ ಮುಂದಿನ ಸುತ್ತಿಗೇರಬಹುದು.

ತಂಡ ಆಡಲಿರುವ ಪಂದ್ಯ: ಪಂಜಾಬ್, ಡೆಲ್ಲಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X