ರಿಷಿಕಪೂರ್ಗೆ ಗಾಂಧಿ ಕುಟುಂಬದ ವಿರುದ್ಧ ಇಷ್ಟೇಕೆ ಕೋಪ?
ಹೊಸದಿಲ್ಲಿ, ಮೇ 18: ರಿಶಿಕಪೂರ್ ಬಾಲಿಹುಡ್ನ ಹೆಸರಾಂತ ಕಲಾವಿದ. ಅವರು ಇತ್ತೀಚೆಗೆ ನೀಡುತ್ತಿರುವ ಹೇಳಿಕೆಗಳು ವಿವಾದಾಸ್ಪದವಾಗಿದೆ. ಈಸಲ ಅವರು ಗಾಂಧಿ ಕುಟುಂಬದ ವಿರುದ್ಧ ತನ್ನ ಆಕ್ರೋಶವನ್ನು ಹೊರಬಿಟ್ಟಿದ್ದಾರೆ. ದೇಶದ ಹೆಸರಾಂತ ಸ್ಥಳಗಳು ಮತ್ತು ದೇಶ ಆಸ್ತಿಗಳ ಮೇಲೆ ಗಾಂಧಿ ನೆಹರೂ ಕುಟುಂಬದ ಹೆಸರನ್ನು ಯಾಕೆ ಇಡಲಾಗುತ್ತಿದೆ ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.
ದೇಶದ ಆಸ್ತಿಗಳಿಗೆ ಗಾಂಧಿಯ ಹೆಸರಿರುವುದಕ್ಕಾಗಿ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಟ್ವೀಟ್ನಲ್ಲಿ ದೇಶದ ಮಹತ್ವಪೂರ್ಣ ಸ್ಥಳಗಳಿಗೆ ದೇಶಕ್ಕಾಗಿ ಕೊಡುಗೆ ನೀಡಿದವರ ಹೆಸರಿರಬೇಕು. ಆದರೆ ಹೆಚ್ಚಿನ ದೇಶದ ಆಸ್ತಿಗಳಲ್ಲಿ ಗಾಂಧಿ ಕುಟುಂಬದ ಹೆಸರಿಸಿರುವುದು ಯಾಕೆ? ಇಂದಿರಾಗಾಂಧಿ ಏರ್ಪೋರ್ಟ್ ಎಂದು ಹೆಸರಿದೆ ಆದರೆ ಮಹಾತ್ಮಗಾಂಧಿ ಹೆಸರಿಟ್ಟಿಲ್ಲ ಎಂಬುದು ಅವರ ಕೋಪಕ್ಕೆ ಕಾರಣವಾಗಿದೆ. ಭಗತ್ ಸಿಂಗ್, ಅಂಬೇಡ್ಕರ್ ಹೆಸರನ್ನೂ ಇರಿಸಬಹುದಾಗಿತ್ತು ಎಂದು ಹೇಳಿದ್ದಾರೆ. "ಇದೆಷ್ಟು ಹಗುರ ವಿಚಾರ ನೀವೇ ಯೋಚಿಸಿ" ಎನ್ನುವ ರಿಷಿ ಕಪೂರ್ ಮುಂಬೈ ಫಿಲಂ ಸಿಟಿಗೆ ದಿಲೀಪ್ ಕುಮಾರ್, ದೇವ್ ಆನಂದ್, ಅಶೋಕ್ ಕುಮಾರ್ ಅಥವಾ ಅಮಿತಾಭ್ ಬಚ್ಚನ್ರ ಹೆಸರಿಸಬಹುದಾಗಿದೆ. ದೇಶ ಮತ್ತುಸಮಾಜಕ್ಕೆ ಕೊಡುಗೆ ನೀಡಿದ ವ್ಯಕ್ತಿಗಳ ಹೆಸರನ್ನು ನಮ್ಮ ಮಹತ್ವಪೂರ್ಣ ಸ್ಥಳ ಮತ್ತು ಆಸ್ತಿಗಳಿಗೆ ಇರಿಸಬೇಕೆಂದು ತಮ್ಮ ಅಭಿಪ್ರಾಯ ಪ್ರಕಟಿಸಿದ್ದಾರೆ.
ಪ್ರತಿಯೊಂದಕ್ಕೂ ಗಾಂಧಿ ಕುಟುಂಬದ ಹೆಸರನ್ನಿಡುವುದರ ವಿರುದ್ಧ ತನ್ನ ಅಭಿಪ್ರಾಯವಿದೆ. ಬಾಂದ್ರಾ ಮತ್ತು ವರ್ಲಿ ಲಿಂಕ್ ರೋಡ್ಗೆ ಲತಾಮಂಗೇಶ್ಕರ್ ಅಥವಾಆರ್ಜೆಡಿ ಟಾಟಾ ಹೆಸರನ್ನು ಇಡಬಹುದಾಗಿದೆ ಎಂದು ರಿಷಿಕಪೂರ್ ಸಲಹೆ ನೀಡಿದ್ದಾರೆ, ದಿಲ್ಲಿಯ ರಸ್ತೆಗಳನ್ನು ಬದಲಿಸಬಹುದಾದರೆ ಕಾಂಗ್ರೆಸ್ನ ಸಂಪತ್ತು ಅಥವಾ ಪ್ರಾಪರ್ಟಿಯ ಹೆಸರನ್ನು ಯಾಕೆ ಬದಲಿಸಲು ಸಾಧ್ಯವಿಲ್ಲ ಎಂಬ ಪ್ರಶ್ನೆ ಅವರಲ್ಲಿದೆ. ಹೀಗೆ ರಿಷಿ ಕಪೂರ್ ಟ್ವೀಟ್ ಮಾಡಿ ಕಾಂಗ್ರೆಸ್ ವಿರುದ್ಧ ತನ್ನ ಕೋಪವನ್ನು ಪ್ರಕಟಿಸಿದ್ದಾರೆಂದು ವರದಿಯಾಗಿದೆ.