ಬಂಟ್ವಾಳ: ಭಾರೀ ಬಿರುಗಾಳಿ
400ಕ್ಕೂ ಅಧಿಕ ಅಡಿಕೆ ಮರಗಳು ಧರೆಶಾಯಿ
ಬಂಟ್ವಾಳ: ಮಂಗಳವಾರ ಸಂಜೆಯ ಬಳಿಕ ಬೀಸಿದ ಭಾರೀ ಬಿರುಗಾಳಿಗೆ ತಾಲೂಕಿನ ನಾವೂರು ನಿವಾಸಿ ಅಬ್ದುಲ್ ಮುತ್ತಲಿಫ್ ಎಂಬವರ ತೋಟದಲ್ಲಿ 400ಕ್ಕೂ ಅಧಿಕ ಅಡಿಕೆ ಮರಗಳು ಧರೆಶಾಯಿಯಾಗಿದ್ದು, ಭಾರೀ ಪ್ರಮಾಣದ ನಷ್ಟ ಉಂಟಾಗಿದೆ. ಸ್ಥಳಕ್ಕೆ ಮಂಗಳೂರು ಸಹಯಕ ಕಮೀಶನರ್ ಡಾ. ಡಿ.ಅಶೋಕ್, ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಕರ್ ಜೈನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್ ಬುಧವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಊರಿನ ಪ್ರಮುಖರು ಉಪಸ್ಥಿತರಿದ್ದರು.
Next Story