ದೇವರಿಗೇ ದೋಖಾ!
ವಕ್ಫ್ ಭೂಮಿ ನುಂಗಿದ ಬಗ್ಗೆ ಕರ್ನಾಟಕ ಸರಕಾರದ ನಿಗೂಢ ಮೌನ

ವಕ್ಫ್ ಮಂಡಳಿ ಭೂ ಅವ್ಯವಹಾರ ಬಗೆಗೆ 2012ರಲ್ಲಿ ನೀಡಿದ ವರದಿಯನ್ನು ವಿಧಾನಮಂಡಲದಲ್ಲಿ ಮಂಡಿಸಲು ಸಿದ್ದರಾಮಯ್ಯ ಸರಕಾರ ನಿರಾಕರಿಸುವುದರೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಬಿಜೆಪಿ ಮುಖಂಡ ಹಾಗೂ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಂದಿನ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿಯವರು ಅಂದಿನ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಈ ವರದಿ ಸಲ್ಲಿಸಿದ್ದರು.
ಈ ವರದಿಯನ್ನು ಸದನದಲ್ಲಿ ಮಂಡಿಸಲು ಸರಕಾರ ಹಿಂಜರಿಯಲು ಮುಖ್ಯ ಕಾರಣವೆಂದರೆ, ಸರಕಾರದಲ್ಲಿ ಇದೀಗ ಸಚಿವರಾಗಿರುವವರು ಸೇರಿದಂತೆ ಹಲವು ಮಂದಿ ಹಿರಿಯ ಕಾಂಗ್ರೆಸ್ ನಾಯಕರು ಈ ಭೂಕಬಳಿಕೆಯಲ್ಲಿ ಶಾಮೀಲಾಗಿರುವ ಬಗ್ಗೆ ಉಲ್ಲೇಖವಿದೆ ಎನ್ನುವುದು ವಿರೋಧ ಪಕ್ಷಗಳ ಆರೋಪ. ಭ್ರಷ್ಟಾಚಾರ ವಿರೋ ಕಾವಲುಗಾರ ಎನಿಸಿದ ಲೋಕಾಯುಕ್ತವನ್ನು ದುರ್ಬಲಗೊಳಿಸುವ ಸಲುವಾಗಿ ಭ್ರಷ್ಟಾಚಾರ ವಿರೋ ಬ್ಯೂರೊ (ಎಸಿಬಿ) ರಚನೆ ನಿರ್ಧಾರವನ್ನು ರಾಜ್ಯ ಸರಕಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ಸರಕಾರದ ಮೇಲೆ ಟೀಕಾಪ್ರಹಾರ ನಡೆಯುತ್ತಿರುವಾಗಲೇ ಮತ್ತೊಂದು ಬರಸಿಡಿಲು ಸರಕಾರಕ್ಕೆ ಎದುರಾಗಿದೆ.
ಕರ್ನಾಟಕದಲ್ಲಿ ವಿಧಾನಸಭೆ ಹಾಗೂ ವಿಧಾನ ಪರಿಷತ್ ಹೀಗೆ ಎರಡು ಹಂತದ ಶಾಸಕಾಂಗ ವ್ಯವಸ್ಥೆ ಇದೆ. ವಿಧಾನ ಪರಿಷತ್ನಲ್ಲಿ ಬಿಜೆಪಿ ಹಾಗೂ ಜಾತ್ಯತೀತ ಜನತಾದಳ ಸೇರಿ ಬಹುಮತ ಹೊಂದಿವೆ. ಮಾಣಿಪ್ಪಾಡಿ ವರದಿ ಕುರಿತು ಕೈಗೊಂಡ ಕ್ರಮದ ಬಗೆಗಿನ ವರದಿಯನ್ನು ಮಾರ್ಚ್ 5ರಂದು ಸರಕಾರ ವಿಧಾನ ಪರಿಷತ್ನಲ್ಲಿ ಮಂಡಿಸಿತು. ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಪದೇ ಪದೇ, ಮಾಣಿಪ್ಪಾಡಿ ವರದಿಯನ್ನು ಸಮಗ್ರವಾಗಿ ಮಂಡಿಸುವಂತೆ ಆಗ್ರಹಿಸಿದರು. ಈ ವಿಷಯದ ಬಗ್ಗೆ ಶಂಕರಮೂರ್ತಿಯವರು ರಾಜ್ಯಪಾಲ ವಜುಭಾಯ್ವಾಲಾ ಅವರ ಅಭಿಪ್ರಾಯ ಕೇಳಲು ಮುಂದಾದರು. ವರದಿಯನ್ನು ಸದನದಲ್ಲಿ ಮಂಡಿಸದೇ ಇರುವ ಸರಕಾರದ ಕ್ರಮದ ಬಗ್ಗೆ ರಾಜ್ಯಪಾಲರು ಕೂಡಾ ಅಸಮಾಧಾನ ವ್ಯಕ್ತಪಡಿಸಿದರು.
‘‘ಅಲ್ಪಸಂಖ್ಯಾತರ ಪರ ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷ ವಕ್ಫ್ ಮಂಡಳಿಯ ಭೂಮಿ ಕಬಳಿಸಿದ ಭೂಗಳ್ಳರನ್ನು ರಕ್ಷಿಸಲು ಯತ್ನಿಸುತ್ತಿದೆ’’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆಪಾದಿಸುತ್ತಾರೆ.
ಈ ವರದಿ ಕಾನೂನುಬದ್ಧವಲ್ಲ ಎಂಬ ತಗಾದೆ ತೆಗೆದು ಕಾಂಗ್ರೆಸ್ ಪಕ್ಷ ಗದ್ದಲ ಎಬ್ಬಿಸಿ ಈ ವರದಿಯನ್ನು ಸದನದಲ್ಲಿ ಮಂಡಿಸದಂತೆ ಅಂದಿನ ಸದಾನಂದ ಗೌಡ ಸರಕಾರವನ್ನು ತಡೆದಿತ್ತು. ಈ ವಿವಾದವನ್ನು ಕಾನೂನು ತಜ್ಞರ ತಂಡದ ಪರಾಮರ್ಶೆಗೆ ಒಳಪಡಿಸಲಾಯಿತು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿತು. ಕಳೆದ ವರ್ಷ ವಕ್ಫ್ ಸಚಿವ ಖಮರುಲ್ ಇಸ್ಲಾಂರವರು ವಿಧಾನ ಪರಿಷತ್ತಿನಲ್ಲಿ ಹೇಳಿಕೆ ನೀಡಿ, ‘‘ಈ ವರದಿ ಅನಕೃತ; ಆದ್ದರಿಂದ ಇದಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ಈ ವರದಿಗೆ ಆಯೋಗದ ಯಾವ ಸದಸ್ಯರೂ ಒಪ್ಪಿಗೆ ನೀಡಿರಲಿಲ್ಲ’’ ಎಂದು ಸ್ಪಷ್ಟಪಡಿಸಿದ್ದರು.
2014ರ ಅಕ್ಟೋಬರ್ನಲ್ಲಿ, ಕೋಲಾರ ಮೂಲದ ಸಾಮಾಜಿಕ ಕಾರ್ಯಕರ್ತ ತರ್ಬೆಜ್ ಪಾಷಾ ಅವರು ಗುಲ್ಬರ್ಗದಲ್ಲಿ ವಕ್ಫ್ ಭೂಮಿಯನ್ನು ಅನಕೃತವಾಗಿ ಸ್ವಾೀನಪಡಿಸಿಕೊಂಡು ಮಾರಾಟ ಮಾಡಿದ ಆರೋಪದಲ್ಲಿ ಖಮರುಲ್ ಇಸ್ಲಾಂ ವಿರುದ್ಧ ದೂರು ದಾಖಲಿಸಿದರು. ಇತ್ತೀಚೆಗೆ ಮಾಜಿ ಸಚಿವ ಎಸ್.ಕೆ.ಕಾಂತಾ ಅವರು ಕರ್ನಾಟಕ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ಬಳಿಕ ಸರಕಾರ ವರದಿ ಕುರಿತು ಕೈಗೊಂಡ ಕ್ರಮಗಳ ಬಗೆಗೆ ವಿವರವನ್ನು ವಿಧಾನ ಪರಿಷತ್ತಿನಲ್ಲಿ ಮಂಡಿಸಿತು. ಈ ವರದಿಯನ್ನು ಸದನದಲ್ಲಿ ಮಂಡಿಸುವುದಾಗಿ ಹೈಕೋರ್ಟ್ಗೆ ಸರಕಾರ ತಿಳಿಸಿತ್ತು.
ಭ್ರಷ್ಟಾಚಾರ ವಿರೋ ಬ್ಯೂರೊ ರಚನೆ, ಸರಕಾರದ ವಿರೋಗಳನ್ನು ಮತ್ತಷ್ಟು ಕೆರಳಿಸಿತು. ಮುಖ್ಯಮಂತ್ರಿ, ಸಚಿವರು, ಶಾಸಕರು ಹಾಗೂ ಸರಕಾರಿ ಉದ್ಯೋಗಿಗಳ ವಿಚಾರಣೆಗೆ ಅವಕಾಶ ಮಾಡಿಕೊಡುವ 1984ರ ಲೋಕಾಯುಕ್ತ ಕಾಯ್ದೆಗಿಂತ ಎಸಿಬಿ ಹೇಗೆ ಹೆಚ್ಚು ಪರಿಣಾಮಕಾರಿ ಎನ್ನುವುದನ್ನು ಸರಕಾರ ಸಮರ್ಥಿಸಿಕೊಳ್ಳಲು ಸಾಧ್ಯವೇ? ಎಂದು ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ್ ಪ್ರಶ್ನಿಸುತ್ತಾರೆ.
ಕಾಂಗ್ರೆಸ್ ಮುಖಂಡ ಬಿ.ಎಲ್.ಶಂಕರ್ ಪ್ರಕಾರ, ಮಾಣಿಪ್ಪಾಡಿ ವರದಿ ವಾಸ್ತವವಾಗಿ ಒಂದು ವರದಿಯೇ ಅಲ್ಲ. ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿ ಮಾಣಿಪ್ಪಾಡಿಯವರು ಸ್ವಯಂಪ್ರೇರಿತವಾಗಿ ದಾಳಿ ನಡೆಸಿದ್ದರು. ಆದರೆ ಅದಕ್ಕೆ ಪೂರಕವಾದ ಪುರಾವೆಗಳನ್ನು ಸಲ್ಲಿಸಿರಲಿಲ್ಲ.ವಕ್ಫ್ ಹಗರಣ ಸುಮಾರು 15 ಲಕ್ಷ ಕೋಟಿ ರೂಪಾಯಿಯ ಬೃಹತ್ ಹಗರಣ ಎಂದು ಅತಿರಂಜಿತ ವರದಿ ನೀಡಲಾಗಿದೆ. ಹಿಂದಿನ ಕಬಳಿಕೆ ತಡೆ ಸಮಿತಿಗಳಂತೆ ಮಾಣಿಪ್ಪಾಡಿ ಸಮಿತಿಯ ವರದಿ ತನಿಖಾ ವರದಿಯಲ್ಲ. ಆದ್ದರಿಂದ ಸರಕಾರ, ಈ ವರದಿಯ ಶಿಪಾರಸುಗಳನ್ನು ಸಂಕ್ಷಿಪ್ತವಾಗಿ ಸದನದಲ್ಲಿ ಮಂಡಿಸಿದೆ
ಆದರೆ ಮಾಣಿಪ್ಪಾಡಿ ಈ ವಾದವನ್ನು ಅಲ್ಲಗಳೆಯುತ್ತಾರೆ. ‘‘ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಕಾಯ್ದೆ-1994ರ ಸೆಕ್ಷನ್ 10 (1-2)ರ ಅನ್ವಯ ಆಯೋಗದ ಅಧ್ಯಕ್ಷರಿಗೆ ಕಾಲದಿಂದ ಕಾಲಕ್ಕೆ ಸರಕಾರಕ್ಕೆ ಶಿಪಾರಸುಗಳನ್ನು ಮಾಡಲು ಅಕಾರವಿದ್ದು, ಸರಕಾರ ಇದನ್ನು ಶಾಸನಸಭೆಯ ಉಭಯ ಸದನಗಳಲ್ಲಿ ಮಂಡಿಸಬೇಕಾಗುತ್ತದೆ. ಆದರೆ ಕಾಂಗ್ರೆಸ್ ಸರಕಾರದ ಮೇಲೆ ಈ ವರದಿ ಮಂಡಿಸದಂತೆ ಒತ್ತಡ ಇದ್ದು, ವರದಿಯನ್ನು ಮಂಡಿಸದಿರುವುದೇ ಕಾಂಗ್ರೆಸ್ನ ತಪ್ಪಿತಸ್ಥ ಮನೋಭಾವವನ್ನು ಸೂಚಿಸುತ್ತದೆ’’ ಎಂದು ಮಾಣಿಪ್ಪಾಡಿ ಹೇಳುತ್ತಾರೆ.
‘‘ಮೊದಲು ಬೀದರ್ ಜಿಲ್ಲೆಯಲ್ಲಿ ಖಬರಸ್ಥಾನವನ್ನು ಕಬಳಿಕೆ ಮಾಡಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ಈ ದಾಳಿ ಬಳಿಕ ವಿವಿಧ ಜಿಲ್ಲೆಗಳಿಂದ ಇಂಥ ದೂರುಗಳ ಮಹಾಪೂರವೇ ಹರಿದುಬರಲು ಆರಂಭವಾಯಿತು. ಇದರಿಂದ ಆಯೋಗದ ವತಿಯಿಂದ ನಿಯತವಾಗಿ ದಾಳಿ ನಡೆಸಿದೆವು. ಇದಕ್ಕೆ ಸಂಬಂಸಿದ ದಾಖಲೆಗಳು ಹಾಗೂ ಪುರಾವೆಗಳ ನಾಲ್ಕು ಸಂಪುಟಗಳು ನನ್ನ ಬಳಿ ಇವೆ. ಇವೆಲ್ಲವೂ ಹಿರಿಯ ಕಾಂಗ್ರೆಸ್ ನಾಯಕರನ್ನು ಬೆಟ್ಟು ಮಾಡುತ್ತವೆ’’ ಎಂದು ಅವರು ಸ್ಪಷ್ಟಪಡಿಸುತ್ತಾರೆ.
ವಕ್ಫ್ ಆಸ್ತಿಗಳ ಮುತವಲ್ಲಿಗಳು ಹಾಗೂ ರಾಜಕಾರಣಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ರಾಜ್ಯದಲ್ಲಿ ಸುಮಾರು 54 ಸಾವಿರ ಎಕರೆ ನೋಂದಾಯಿತ ವಕ್ಫ್ ಭೂಮಿ ಇದೆ. ಅಂತೆಯೇ 23 ಸಾವಿರ ಎಕರೆ ನೋಂದಾವಣೆಯಾಗದ ಭೂಮಿ ಇದೆ. ಆದರೆ ಪ್ರತಿ ಸಮೀಕ್ಷೆ ನಡೆಸಿದಾಗಲೂ ವಕ್ಫ್ ಭೂಮಿ ಸಂಕುಚಿತಗೊಳ್ಳುತ್ತಲೇ ಇದೆ. ಸರಕಾರದ ಮಾರ್ಗಸೂಚಿ ದರದ ಹಿನ್ನೆಲೆಯಲ್ಲಿ ಲೆಕ್ಕಾಚಾರ ಮಾಡಿದರೆ ಹಾಲಿ ಹಗರಣ ಸುಮಾರು ಎರಡು ಲಕ್ಷ ಕೋಟಿ ರೂಪಾಯಿಗಳ ದೊಡ್ಡ ಹಗರಣವಾಗುತ್ತದೆ. ಆದರೆ ಕಬಳಿಕೆಯಾದ ಆಸ್ತಿಯ ಮಾರುಕಟ್ಟೆ ವೌಲ್ಯ ಸುಮಾರು 15 ಲಕ್ಷ ಕೋಟಿ ರೂಪಾಯಿಯನ್ನು ಮೀರುತ್ತದೆ’’ ಎಂದು ಹಗರಣದ ವ್ಯಾಪಕತೆಯನ್ನು ಅವರು ವಿವರಿಸುತ್ತಾರೆ.
‘‘ಮುತವಲ್ಲಿ ವಕ್ಫ್ ಮಂಡಳಿಯ ಜತೆ ಒಡಂಬಡಿಕೆ ಮಾಡಿಕೊಂಡು, ಭೂಮಿ ಮಾರಾಟಕ್ಕೆ ನಿರಾಕ್ಷೇಪಣಾ ಪತ್ರ ಪಡೆಯುತ್ತಾರೆ. ಈ ಭೂಮಿಯನ್ನು ಬೇನಾಮಿ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ. ಆದರೆ ವಾಸ್ತವವಾಗಿ ಬೇರೆಯವರು ಅದನ್ನು ಅನುಭವಿಸುತ್ತಿರುತ್ತಾರೆ. ಕೆಲವೊಂದು ಪ್ರಕರಣಗಳಲ್ಲಿ ಮೂರನೇ ವ್ಯಕ್ತಿಗೆ ಮಾರಾಟ ಮಾಡಿರುವ ನಿದರ್ಶನಗಳೂ ಇದ್ದು, ಬಂದ ಲಾಭವನ್ನು ಎಲ್ಲರೂ ಹಂಚಿಕೊಂಡಿದ್ದಾರೆ. ಮತ್ತೆ ಕೆಲ ಪ್ರಕರಣಗಳಲ್ಲಿ, ವಕ್ಫ್ ಮಂಡಳಿ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಖಾತೆ ಸಚಿವರು ಭೂಮಿಯನ್ನು ಡಿನೋಟಿಪೈ ಮಾಡಿ ಭೂಮಿಯನ್ನು ಮಾರಾಟ ಮಾಡಿದ್ದಾರೆ. ಅಂಥ ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಂಡಾಗ ಮತ್ತೆ ಖರೀದಿದಾರರಿಂದ ಭೂಮಿಯನ್ನು ವಾಪಸ್ ಪಡೆದಿದ್ದಾರೆ. ದೊಡ್ಡ ಪ್ರಮಾಣದಲ್ಲಿ ತೀರಾ ಕಡಿಮೆ ಬೆಲೆಗೆ ಭೂಮಿಯನ್ನು ಭೋಗ್ಯಕ್ಕೆ ನೀಡಲಾಗಿದೆ’’
ವಿಧಾನ ಪರಿಷತ್ ಹಕ್ಕುಬಾಧ್ಯತಾ ಸಮಿತಿಯ ಮಾಜಿ ಅಧ್ಯಕ್ಷ ಜಿ.ಮಧುಸೂಧನ್ ಅವರು ಹೇಳುವಂತೆ, ‘‘ಅಲ್ಪಸಂಖ್ಯಾತ ಸಮುದಾಯದ ಮುಖಂಡರ ಕೂಟವೊಂದು ವಕ್ಫ್ ಸಚಿವ, ವಕ್ ಮಂಡಳಿ ಅಧ್ಯಕ್ಷ ಹಾಗೂ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಹೀಗೆ ಮೂರು ಮುಖ್ಯ ಹುದ್ದೆಗಳನ್ನು ಹಿಡಿತದಲ್ಲಿಟ್ಟುಕೊಂಡಿದೆ. ಇದರಿಂದಾಗಿ ಪ್ರತಿ ಗಜೆಟ್ ಅಸೂಚನೆ ವೇಳೆಯೂ ವಕ್ಫ್ ಭೂಮಿ ಸಂಕುಚಿತಗೊಳ್ಳುತ್ತಿದ್ದರೂ, ಅದರ ಹಿಂದಿನ ಮಾರಾಟ ಹಗರಣ ಬೆಳಕಿಗೆ ಬರುತ್ತಿಲ್ಲ. ಕಾಂಗ್ರೆಸ್ ಸರಕಾರ ಈ ಬಗ್ಗೆ ಸುಳ್ಳು ಹೇಳುತ್ತಿದೆ’’
‘‘ಶಂಕರ್ ಅವರ ಊಹೆಯಂತೆ ಈ ವರದಿಯಲ್ಲಿ, ಸರಕಾರಿ ಜಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಕೊಂಡ ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಹೆಸರುಗಳೂ ಇವೆ. ಆದರೆ ಅಂಥ ಕಬಳಿಕೆ ಪ್ರಕರಣಗಳನ್ನು ವಿಶೇಷ ನ್ಯಾಯಾಲಯಗಳಲ್ಲೇ ವಿಚಾರಣೆಗೆ ಗುರಿಪಡಿಸಬೇಕು. ಸರಕಾರಿ ಭೂಮಿ, ವಕ್ ಭೂಮಿ, ಗೋಮಾಳ, ಮುಜರಾಯಿ ಭೂಮಿಯ ಒತ್ತುವರಿ ಪ್ರಕರಣಗಳ ವಿಚಾರಣೆಗೇ ವಿಶೇಷ ನ್ಯಾಯಾಲಯ ರಚಿಸಬೇಕು’’ ಎಂದು ಅವರು ಆಗ್ರಹಿಸುತ್ತಾರೆ. ಭಾರತದಲ್ಲಿ ರೈಲ್ವೆ ಹಾಗೂ ರಕ್ಷಣಾ ಪಡೆಗಳನ್ನು ಹೊರತುಪಡಿಸಿದರೆ, ವಕ್ಫ್ ಅತಿಹೆಚ್ಚು ಭೂ ಹಿಡುವಳಿ ಹೊಂದಿರುವ ಸಂಸ್ಥೆಯಾಗಿದೆ. ಆದರೆ ಈ ಭೂಮಿಯ ಪೈಕಿ ಶೇಕಡ ಎರಡರಷ್ಟು ಕೂಡಾ ಸಮುದಾಯದ ಅಭಿವೃದ್ಧಿಗೆ ಬಳಕೆಯಾಗುತ್ತಿಲ್ಲ.
ಕಾಂಗ್ರೆಸ್ ಪಕ್ಷದ ಮುಸ್ಲಿಂ ಮುಖಂಡರೊಬ್ಬರು ಹೇಳುವಂತೆ, ‘‘ಭೂಮಿ ಒತ್ತುವರಿಯಲ್ಲಿ ರಾಜಕಾರಣಿಗಳು, ಪ್ರಭಾವಿ ವ್ಯಕ್ತಿಗಳಿಂದ ಹಿಡಿದು ಜನಸಾಮಾನ್ಯರವರೆಗೆ ಎಲ್ಲರೂ ಶಾಮೀಲಾಗಿದ್ದಾರೆ. ವಕ್ ಕಾಯ್ದೆಗೆ ತಿದ್ದುಪಡಿ ತಾರದಿದ್ದರೆ ಅಥವಾ ವಕ್ ಅಭಿವೃದ್ಧಿ ಮಂಡಳಿಗೆ ರಾಜಕೀಯೇತರ ವ್ಯಕ್ತಿಗಳನ್ನು ನೇಮಕ ಮಾಡದಿದ್ದರೆ, ಇಲ್ಲವೇ ವಕ್ ಆಸ್ತಿಗಳ ಬಾಡಿಗೆಯನ್ನು ನಿಯತವಾಗಿ ಪರಿಷ್ಕರಿಸದಿದ್ದರೆ, ಇಡೀ ಸಮುದಾಯ ಇನ್ನೂ ಸರಕಾರದ ಮರ್ಜಿಯಲ್ಲೇ ಉಳಿಯಬೇಕಾಗುತ್ತದೆ’’
ಕುತೂಹಲಕಾರಿ ಅಂಶವೆಂದರೆ, ವಕ್ ಭೂಮಿಯ ಕಬಳಿಕೆ ಬಗ್ಗೆೆ ತನಿಖೆಗೆ ಹಿಂದೆ ನೇಮಿಸಿದ್ದ ಸಮಿತಿ ಶಿಪಾರಸುಗಳು ಇನ್ನೂ ಧೂಳು ತಿನ್ನುತ್ತಾ ಬಿದ್ದಿವೆ.
ಉದಾಹರಣೆಗೆ ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ ರಚಿಸಿದ್ದ ಜಂಟಿ ಸದನ ಸಮಿತಿ ವರದಿ, ವಿ.ಬಾಲಸುಬ್ರಹ್ಮಣ್ಯನ್ ನೇತೃತ್ವದ ವಿಶೇಷ ಕಾರ್ಯ ಪಡೆ ವರದಿ, ಉಪಲೋಕಾಯುಕ್ತ ನ್ಯಾಯಮೂರ್ತಿ ಎನ್.ಆನಂದ್ ಅವರ ವರದಿ, ನಿವೃತ್ತ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾೀಶ ಸೈಯದ್ ನಿಸಾರ್ ಅಹ್ಮದ್ ವರದಿಗಳನ್ನು ಹೆಸರಿಸಬಹುದು. ‘‘ಸರಕಾರದ ಉದ್ದೇಶ ಸಮಿತಿಗಳನ್ನು ರಚಿಸುವುದೇ ವಿನಃ ಅದರ ವರದಿಗಳನ್ನು ಅನುಷ್ಠಾನಗೊಳಿಸುವುದಲ್ಲ’’ ಎಂದು ವಕ್ ಭೂಮಿ ಕಬಳಿಕೆಗಳ ಬಗೆಗಿನ ತನಿಖಾ ಆಯೋಗದ ಆಯುಕ್ತರಾಗಿದ್ದ ನಿಸಾರ್ ಅಹ್ಮದ್ ಅಭಿಪ್ರಾಯಪಡುತ್ತಾರೆ.
‘‘ಇತ್ತೀಚಿನ ವರ್ಷಗಳಲ್ಲಿ ಸಮಗ್ರ ಸಮೀಕ್ಷೆ ನಡೆಸದಿರುವುದು, ಜಿಐಎಸ್ ಮ್ಯಾಪಿಂಗ್ ಹಾಗೂ ವಕ್ಫ್ ಆಸ್ತಿಗಳ ದಾಖಲೀಕರಣದ ಕೊರತೆಯಿಂದಾಗಿ ಒತ್ತುವರಿ ಸುಲಭವಾಗಿದೆ. ನಾವಿನ್ನೂ ಬ್ರಿಟಿಷ್ ನಕ್ಷೆಗಳನ್ನು ಅನುಸರಿಸುತ್ತಿದ್ದೇವೆ. 1930ರ ಬಳಿಕ ಯಾವ ಸರಕಾರಿ ಭೂಮಿಯ ಸಮೀಕ್ಷೆಯೂ ನಡೆದಿಲ್ಲ’’ ಎಂದು ಶಂಕರ್ ವ್ಯವಸ್ಥೆಯ ಲೋಪವನ್ನು ವಿವರಿಸುತ್ತಾರೆ.
‘‘ವಕ್ಫ್ ಭೂಮಿಯ ಮರು ಸಮೀಕ್ಷೆ ನಡೆಯಬೇಕು’’ ಎನ್ನುವುದು ಮಾಣಿಪ್ಪಾಡಿಯವರ ವಾದ. ಸಹಜವಾಗಿಯೇ ಅವರಿಗೆ ಇನ್ನೊಂದು ಹೆದರಿಕೆ ಇದೆ. ಅವರಿಗೆ ನೀಡಿದ್ದ ಪೊಲೀಸ್ ಭದ್ರತೆಯನ್ನು ಕಾಂಗ್ರೆಸ್ ಸರಕಾರ ಅಕಾರಕ್ಕೆ ಬಂದ ಬಳಿಕ ವಾಪಸ್ ಪಡೆಯಲಾಗಿದೆ.
ಯಾರ್ಯಾರ ಮೇಲೆ ಆರೋಪ
ಸಿ. ಕೆ. ಜಾಫರ್ ಶರೀಫ್
ಮಾಜಿ ಕೇಂದ್ರ ಸಚಿವ

ಕಬ್ಬನ್ಪೇಟೆಯ ಬೆಳ್ಳಹಳ್ಳಿ ಗ್ರಾಮದ ಹಝ್ರತ್ ಮಾಣಿಕ್ ಷಾ ದರ್ಗಾದ 602.29ಎಕರೆ ಜಮೀನು ವಹಿವಾಟು ನಡೆಸಿದ್ದಾರೆ. 112.20 ಎಕರೆ ಜಮೀನನ್ನು 50 ಮಂದಿಗೆ ನೀಡಿದ್ದಾರೆ. ಇತರ ಜಮೀನನ್ನು ಕಾನೂನುಬಾಹಿರವಾಗಿ ವಿಲೇವಾರಿ ಮಾಡಲಾಗಿದೆ.
ಇಕ್ಬಾಲ್ ಅನ್ಸಾರಿ
ಗಂಗಾವತಿ ಶಾಸಕ

ಮಸ್ಜಿದೆ ಬೆರೋನಿ ಅಬಾದಿಗೆ ಸೇರಿದ 2.09ಎಕರೆ ಜಮೀನಿನ ವಹಿವಾಟು ಮಾಡಿರುವುದು ಹಾಗೂ ಗಂಗಾವತಿಯಲ್ಲಿ ಇಸ್ಲಾಂಪುರದಲ್ಲಿ ಜಾಮಿಯಾ ಮಸೀದಿಗೆ ಸೇರಿದ ಎರಡು ಎಕರೆಯ ಅಕ್ರಮ ವ್ಯವಹಾರ.
ಖಮರುಲ್ ಇಸ್ಲಾಂ
ರಾಜ್ಯ ವಕ್ ಸಚಿವ

ಗುಲ್ಬರ್ಗದ ಖ್ವಾಜಾ ಬಂದೇ ನವಾಝ್ ದರ್ಗಾಕ್ಕೆ ಸಂಬಂಸಿದ 8.34ಎಕರೆ ಜಮೀನು ಅವ್ಯವಹಾರದಲ್ಲಿ ಶಾಮೀಲಾಗಿರುವ ಆರೋಪ.
ಎ. ಎಂ. ಹಿಂಡಸಗೇರಿ
ಮಾಜಿ ಕೇಂದ್ರ ಸಚಿವ

ದರ್ಗಾ ಹಝ್ರತ್ಅತಾವುಲ್ಲಾ ಶಾ ಸಂಸ್ಥೆಗೆ ಸೇರಿದ 2.3 ಎಕರೆ ಭೂಮಿಯನ್ನು ಬೆಂಗಳೂರಿನ ಅಣ್ಣೇಪುರದಲ್ಲಿ ಹಾಪ್ಕಾಮ್ಸ್ ಗೆ ವರ್ಗಾವಣೆ ಮಾಡಿರುವುದು.
ಆರ್. ರೋಶನ್ ಬೇಗ್
ಮಾಹಿತಿ ಖಾತೆ ಸಚಿವ

ಬೆಂಗಳೂರಿನ ಪುಲಿಯಾರ್ ಕೋಲಿ ರಸ್ತೆಯಲ್ಲಿ ಕುಲ್ಸೂಮ್ಬಿ ಟ್ರಸ್ಟ್ಗೆ ಸೇರಿದ 7,327ಚದರ ಅಡಿ ಮತ್ತು
ಆರ್ಮ್ಸ್ಟ್ರಾಂಗ್ ರಸ್ತೆಯ ಖಬರಸ್ಥಾನಕ್ಕೆ ಸೇರಿದ 100್ಡ200ಅಡಿಯ ನಿವೇಶನವನ್ನು ಕಾನೂನುಬಾಹಿರವಾಗಿ ವಿಲೇವಾರಿ ಮಾಡಿದ್ದಾರೆ.
ಸಿ. ಎಂ. ಇಬ್ರಾಹೀಂ
ಮಾಜಿ ಕೇಂದ್ರ ಸಚಿವ

ಬೆಂಗಳೂರಿನ ಸಾದರ್ ಪತ್ರಪ್ಪರಸ್ತೆಯಲ್ಲಿ ದರ್ಗಾ ಹಝ್ರತ್ ನವಾಬ್ ಇಬ್ರಾಹೀಂ ಅಲಿ ಶಾ ಸುತ್ತಾರಿ, ಕುಂಬಾರಪೇಟೆ, ಬೆಂಗಳೂರು ಇದಕ್ಕೆ ಸೇರಿದ ನಿವೇಶನ ಸಂಖ್ಯೆ 10ನ್ನು ವ್ಯವಹರಿಸಿರುವುದು.
ಎನ್. ಎ. ಹಾರಿಸ್
ಶಾಂತಿನಗರ ಶಾಸಕ

ಯಲಹಂಕದ ಸುನ್ನಿ ಮುಸಾಫಿರ್ಖಾನಾದ 239.38ಎಕರೆಯ ವಹಿವಾಟು ಕುದುರಿಸಿದ್ದಾರೆ.
ನರಸಿಂಗ ರಾವ್ ಸೂರ್ಯವಂಶಿ
ಮಾಜಿ ಸಂಸದ

ಬೀದರ್ನ ಖಾದಿರ್ ಪೀರ್ ದರ್ಗಾಕ್ಕೆೆ ಸೇರಿದ 8.36
ಎಕರೆ ಭೂಮಿಯ ವ್ಯವಹಾರ
ಮಾಡಿರುವುದು.
ಕೆ. ರೆಹಮಾನ್ ಖಾನ್
ಮಾಜಿ ಕೇಂದ್ರ ಸಚಿವ

ಬೆಂಗಳೂರಿನ ಸ್ಯಾಂಕಿ ರಸ್ತೆಯ ನಾಲ್ಕು ಎಕರೆ ಜಮೀನನ್ನು ವಿಂಡ್ಸರ್ ಮ್ಯಾನರ್ ಹೋಟೆಲ್ಗೆ ಕಾನೂನು ಬಾಹಿರವಾಗಿ 90ವರ್ಷ ಅವಗೆ ಭೋಗ್ಯಕ್ಕೆ ನೀಡಿದ್ದಾರೆ.
ಗುಲ್ಬರ್ಗ ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ, ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ,
ಸಿ.ಎಂ.ಇಬ್ರಾಹೀಂ ಹಾಗೂ ಮಾಜಿ ಮುಖ್ಯಮಂತ್ರಿ ಎನ್.ಧರಂಸಿಂಗ್ ಅವರು
ಹಝ್ರತ್ ಖ್ವಾಜಾ ಬಂದೇ ನವಾಝ್ ಗೆಸು ದರಾಝ್ನ ಭೂಮಿ ದುರ್ಬಳಕೆ ಮತ್ತು ಅಸಮರ್ಪಕ ಅಂದಾಜು.







