ಅಸ್ಸಾಮ್ನಲ್ಲಿ ಬಿಜೆಪಿ ಸರಕಾರ ರಚಿಸಿದರೆ ನವಜೋತ್ ಸಿದ್ದುಗೆ ಅದೃಷ್ಟ ಒಲಿಯಲಿದೆ!
ಹೊಸದಿಲ್ಲಿ,ಮೇ 19: ಅಸ್ಸಾಮ್ನಲ್ಲಿ ಸರಕಾರ ರಚಿಸುವತ್ತ ಬಿಜೆಪಿ ದಾಪುಗಾಲಿಡುತ್ತಿದ್ದು ನವಜೋತ್ ಸಿಂಗ್ರ ಅದೃಷ್ಟ ಖುಲಾಯಿಸಲಿದೆ ಎಂಬ ಲೆಕ್ಕಾಚಾರ ಆರಂಭವಾಗಿದೆ. ಇಂದು ನಡೆಯುತ್ತಿರುವ ಮತ ಎಣಿಕೆಯಲ್ಲಿ ಅಸ್ಸಾಮ್ ರಾಜ್ಯದಲ್ಲಿ ಕಾಂಗ್ರೆಸ್ನ್ನು ಹಿಂದಿಕ್ಕಿ ಮುನ್ನುಗ್ಗುತ್ತಿರುವ ಬಿಜೆಪಿ ಸರಕಾರ ರಚಿಸಲು ಸಮರ್ಥವಾದರೆ ಕೇಂದ್ರ ಕ್ರೀಡಾ ಸಚಿವ ಸರ್ವಾನಂದ ಸೊನೋವಾಲ್ ಮುಖ್ಯಮಂತ್ರಿಯಾಗುವುದು ಖಜತವಾಗಿದೆ. ಅವರಿಂದ ತೆರವಾಗುವ ಸ್ಥಾನಕ್ಕೆ ನವಜೋತ್ ಸಿಂಗ್ ಆಯ್ಕೆಯಾಗಲಿದ್ದಾರೆ ಎಂದು ವರದಿಯಾಗಿದೆ.
ತಮಿಳ್ನಾಡು ಚುನಾವಣೆಯಲ್ಲಿ ಬಹುತೇಕ ಮುಖ್ಯಮಂತ್ರಿ ಜಯಲಲಿತಾರ ಪಕ್ಷ ಮರಳಿ ಅಧಿಕಾರದ ಗದ್ದುಗೆ ಏರುವ ಸಾಧ್ಯತೆ ನಿಚ್ಚಳಗೊಳ್ಳುತ್ತಿದೆ. ಕೇರಳದಲ್ಲಿ ಕಮ್ಯುನಿಸ್ಟರು ತಮ್ಮ ಪ್ರಭಾವನ್ನು ಹೆಚ್ಚಿಸಿಕೊಂಡಿದ್ದಾರೆ. ಪುದುಚೇರಿ ಫಲಿತಾಂಶ ಅನಿಶ್ಚಿತವಾಗಿದ್ದು ಪ.ಬಂಗಾಳದಲ್ಲಿ ದೀದಿಯನ್ನು ಯಾರಿಗೂ ಅಲುಗಾಡಿಸಲು ಸಾಧ್ಯವಾಗಿಲ್ಲ ಎಂದು ಈವರೆಗಿನ ಚುನಾವಣಾ ಫಲಿತಾಂಶಗಳು ಸ್ಪಷ್ಟ ಪಡಿಸಿವೆ.
ಬಿಜೆಪಿಗೆ ಬಹುದೊಡ್ಡ ನಿರೀಕ್ಷೆಯಿದ್ದಂತೆ ಅಸ್ಸಾಂ ಕಾಂಗ್ರೆಸ್ ತೆಕ್ಕೆಯಿಂದ ಕೈಜಾರಿ ಬಿಜೆಪಿ ಕಾಲಬುಡಕ್ಕೆ ಬೀಳುವ ದೃಶ್ಯಗಳೇ ಗೋಚರವಾಗುತ್ತಿದ್ದು. ಅಸ್ಸಾಂಗೆ ಮುಖ್ಯಮಂತ್ರಿಯಾಗಿ ಸೋನೋವಾಲ್ ಪಾದಾರ್ಪಣೆ ಮಾಡಿದರೆ ತೆರವಾದ ಕೇಂದ್ರ ಸರಕಾರದ ಕ್ರೀಡಾ ಸಚಿವನ ಸ್ಥಾನಕ್ಕೆ ನವಜೋತ್ ಸಿಂಗ್ ಸಿದ್ದು ಅತ್ಯುತ್ತಮ ಆಯ್ಕೆ ಎಂದು ಬಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ ಎಂದು ವರದಿಯಾಗಿದೆ.