ಮಂಜೇಶ್ವರ: ಮರು ಮತ ಎಣಿಕೆಗೆ ಬಿಜೆಪಿ ಮನವಿ
ಮಂಜೇಶ್ವರ, ಮೇ 19: ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್ನ ಅಭ್ಯರ್ಥಿ ಪಿ.ಬಿ. ಅಬ್ದುರ್ರಝಾಕ್ 89 ಮತಗಳ ಅಂತರದಿಂದ ಜಯಗಳಿಸಿರುವ ಹಿನ್ನೆಲೆಯಲ್ಲಿ ಮರು ಮತ ಎಣಿಕೆ ನಡೆಸುವಂತೆ ಬಿಜೆಪಿಯು ಚುನಾವಣಾ ಆಯೋಗಕ್ಕೆ ಮನವಿ ನೀಡಿದೆ.
ತೀವ್ರ ಹಣಾಹಣಿ ನಡೆದಿದ್ದ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿ ಹಾಲಿ ಶಾಸಕ ಅಬ್ದುಲ್ ರಝಾಕ್ ಅವರು 56,870 ಮತ ಪಡೆದಿದ್ದರು. ಬಿಜೆಪಿಯ ಕೆ. ಸುರೇಂದ್ರನ್ 56781 ಮತಗಳನ್ನು ಪೆದಿದ್ದರು. ಈ ಹಿನ್ನೆಲೆಯಲ್ಲಿ ಮರು ಮತ ಎಣಿಕೆ ನಡೆಸಬೇಕೆಂದು ಬಿಜೆಪಿ ಮನವಿ ಸಲ್ಲಿಸಿದೆ.
Next Story





