ಬಿಜೆಪಿ ಜೊತೆ ಕೈಜೋಡಿಸಿದ ಆದಿವಾಸಿ ನಾಯಕಿ
ಸಿ. ಕೆ. ಜಾನುಗೆ ಹೀನಾಯ ಸೋಲು
ತಿರುವನಂತಪುರಮ್, ಮೇ 19 : ಕೇರಳದ ಖ್ಯಾತ ಆದಿವಾಸಿ ನಾಯಕಿ, ಎನ್ ಡಿ ಎ ಬೆಂಬಲಿತ ಅಭ್ಯರ್ಥಿ ಸಿ. ಕೆ. ಜಾನು ವಯನಾಡ್ ನ ಸುಲ್ತಾನ್ ಬತ್ತೇರಿ ಕ್ಷೇತ್ರದಲ್ಲಿ ಹೀನಾಯವಾಗಿ ಸೋತಿದ್ದಾರೆ. ಇಲ್ಲಿ ಯುಡಿಎಫ್ ಅಭ್ಯರ್ಥಿ ಸಿ. ಬಾಲಕೃಷ್ಣನ್ ಅವರು 75747 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಎಡರಂಗದ ರುಕ್ಮಿಣಿ ಸುಬ್ರಮಣ್ಯನ್ ಅವರು 64549 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದರೆ ಜಾನು ಕೇವಲ 27920 ಮತಗಳನ್ನು ಗಳಿಸಿ ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ .
ಕಳೆದೆರಡು ದಶಕಗಳಿಂದ ಆದಿವಾಸಿಗಳ ಪರ ಹೋರಾಟ ನಡೆಸುತ್ತಿದ್ದ ಜಾನು ಕೇರಳದಲ್ಲಿ ಖ್ಯಾತ ಹೆಸರು. ಆದರೆ ಅವರು ಚುನಾವಣಾ ರಾಜಕೀಯದಲ್ಲಿ ತಮ್ಮ ಖ್ಯಾತಿಯನ್ನು ಮತಗಳಾಗಿ ಪರಿವರ್ತಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
Next Story