ಕೇರಳ: ಕಣ್ಣೂರಿನಲ್ಲಿ ನಿಷೇಧಾಜ್ಞೆ
![ಕೇರಳ: ಕಣ್ಣೂರಿನಲ್ಲಿ ನಿಷೇಧಾಜ್ಞೆ ಕೇರಳ: ಕಣ್ಣೂರಿನಲ್ಲಿ ನಿಷೇಧಾಜ್ಞೆ](https://www.varthabharati.in/sites/default/files/images/articles/2016/05/20/02-KANNUR1.png)
ಕಣ್ಣೂರು,ಮೇ 20:ಚುನಾವಣೆ ಫಲಿತಾಂಶ ಘೋಷಣೆಯಾದ ಬಳಿಕ ನಡೆದ ಘರ್ಷಣೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಪಿ.ಬಾಲಕೃಷ್ಣನ್ ನಿಷೇಧಾಜ್ಞೆ ಘೋಷಿಸಿದ್ದಾರೆ. ಸಿ.ಆರ್.ಪಿ.ಸಿ. 144 ಪ್ರಕಾರ ಗುಂಪುಗೂಡುವುದು, ಆಯುಧಗಳನ್ನು ಕೈವಶ ಇರಿಸಿಕೊಳ್ಳುವುದು ಮಾಡುವಂತಿಲ್ಲ. ಪಿಣರಾಯಿಯಲ್ಲಿ ಸಿಪಿಎಂ ಕಾರ್ಯಕರ್ತನ ಕೊಲೆಯಾಗಿದ್ದು ವಿವಿಧ ಪ್ರದೇಶಗಳಲ್ಲಿ ಘರ್ಷಣೆಯುಂಟಾಗಿರುವುದರಿಂದ ಗುರುವಾರ ರಾತ್ರೆಯಿಂದ ನಿಷೇಧಾಜ್ಞೆ ಜಾರಿಗೆ ತರಲಾಗಿದೆ. ಸಂಘರ್ಷವಾತಾವರಣದಲ್ಲಿ ಸುಧಾರಣೆಯಾದರೆ ಶುಕ್ರವಾರವೇ ನಿಷೇಧಾಜ್ಞೆ ತೆರವುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
Next Story