Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಏನು, ಚೀನಾ ನರಮಾಂಸವನ್ನು ಆಫ್ರಿಕಾಗೆ...

ಏನು, ಚೀನಾ ನರಮಾಂಸವನ್ನು ಆಫ್ರಿಕಾಗೆ ರಫ್ತು ಮಾಡುತ್ತಿದೆಯೇ?

ವಾರ್ತಾಭಾರತಿವಾರ್ತಾಭಾರತಿ20 May 2016 4:48 PM IST
share
ಏನು, ಚೀನಾ ನರಮಾಂಸವನ್ನು ಆಫ್ರಿಕಾಗೆ ರಫ್ತು ಮಾಡುತ್ತಿದೆಯೇ?

ಬೀಜಿಂಗ್, ಮೇ 20: ಝಾಂಬಿಯಕ್ಕೆ ಚೀನಾದ ರಾಯಭಾರಿ ಈ ವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡುವ ಅನಿವಾರ್ಯತೆಗೆ ಒಳಗಾದರು. ‘‘ಆಫ್ರಿಕದಲ್ಲಿ ಚೀನಾದ ಪ್ರತಿಷ್ಠೆಗೆ ಮಸಿ ಬಳಿಯುತ್ತಿರುವ’’ ಈ ಅಪಪ್ರಚಾರವನ್ನು ಎದುರಿಸುವ ಉದ್ದೇಶದಿಂದ ಅವರು ಹೇಳಿಕೆಯನ್ನು ಬಿಡುಗಡೆ ಮಾಡಬೇಕಾಯಿತು. ‘‘ಈ ಸುದ್ದಿ ಅತ್ಯಂತ ದುರುದ್ದೇಶಪೂರಿತ, ಆಧಾರರಹಿತ ಹಾಗೂ ಬಲಿಪಶು ಮಾಡುವ ಉದ್ದೇಶದಿಂದ ಕೂಡಿದೆ ಹಾಗೂ ಇದು ನಮಗೆ ಯಾವ ಕಾರಣಕ್ಕೂ ಸ್ವೀಕಾರಾರ್ಹವಲ್ಲ’’ ಎಂದು ರಾಯಭಾರಿ ಯಾಂಗ್ ಯೂಮಿಂಗ್ ತನ್ನ ಹೇಳಿಕೆಯಲ್ಲಿ ಹೇಳಿದರು. ಅವರ ಹೇಳಿಕೆ ಚೀನಾದ ಸರಕಾರಿ ಮಾಧ್ಯಮದಲ್ಲಿ ವ್ಯಾಪಕವಾಗಿ ವರದಿಯಾಯಿತು.

ಹಾಗಾದರೆ, ಆ ಅಪಪ್ರಚಾರವಾದರೂ ಏನು? ಚೀನಾ ಮೃತದೇಹಗಳನ್ನು ಸಂಗ್ರಹಿಸಿ ಅದಕ್ಕೆ ಉಪ್ಪು, ಹುಳಿ, ಖಾರ, ಮಸಾಲೆ ಹಚ್ಚಿ ಕ್ಯಾನ್‌ಗಳಲ್ಲಿ ತುಂಬಿಸಿ ಆಫ್ರಿಕದ ಸೂಪರ್‌ಮಾರ್ಕೆಟ್‌ಗಳಲ್ಲಿ ಮಾರಾಟ ಮಾಡುತ್ತದೆ.

ಝಾಂಬಿಯದ ಟ್ಯಾಬ್ಲಾಯ್ಡಾ ಪತ್ರಿಕೆಗಳು ಈ ಅಪಪ್ರಚಾರವನ್ನು ಹರಡುತ್ತಿವೆ ಎಂದು ಚೀನಾದ ಮಾಧ್ಯಮ ಆರೋಪಿಸಿದೆ. ‘‘ಬೇರೆಯದೇ ಆದ ಉದ್ದೇಶ ಹೊಂದಿರುವ ಜನರು ಝಾಂಬಿಯ ಮತ್ತು ಚೀನಾಗಳ ನಡುವಿನ ಸುದೀರ್ಘ ಬಾಂಧವ್ಯಕ್ಕೆ ಹುಳಿ ಹಿಂಡಲು ಯತ್ನಿಸುತ್ತಿದ್ದಾರೆ’’ ಎಂದು ಅವು ಆರೋಪಿಸಿವೆ.

ಚೀನಾದಲ್ಲಿ ಸತ್ತವರನ್ನು ಹೂಳಲು ಜಾಗದ ಕೊರತೆ ಕಾಡುತ್ತಿದೆ, ಹಾಗಾಗಿ ಮಾನವ ಮಾಂಸ ಉತ್ಪಾದನೆ ಪ್ರವೃತ್ತಿ ಚೀನಾದಲ್ಲಿ ಆರಂಭಗೊಂಡಿದೆ ಎಂಬುದಾಗಿ ಚೀನಾದ ಮಾಂಸದ ಕಾರ್ಖಾನೆಗಳಲ್ಲಿ ಕೆಲಸ ಮಾಡಿದ್ದರೆನ್ನಲಾದ ಜನರನ್ನು ಉಲ್ಲೇಖಿಸಿ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಬೀಜಿಂಗ್ ತನ್ನ ಉತ್ತಮ ಹಾಗೂ ಮಾನವೇತರ ಮಾಂಸವನ್ನು ಹೆಚ್ಚು ಶಕ್ತಿಶಾಲಿ ದೇಶಗಳಿಗೆ ಮೀಸಲಿಡುತ್ತದೆ ಎಂದು ಇನ್ನೊಂದು ವರದಿ ಹೇಳುತ್ತದೆ.

 ಆದರೆ, ವಾಸ್ತವಿಕವಾಗಿ ಇವೆಲ್ಲ ಗಾಳಿ ಸುದ್ದಿಗಳಲ್ಲದೆ ಬೇರೇನೂ ಅಲ್ಲ. ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ‘ಮಾನವ ಮಾಂಸ’ದ್ದೆಂಬಂತೆ ಕಂಡುಬರುವ ಚಿತ್ರಗಳು, 2012ರ ವೀಡಿಯೊ ಗೇಮ್ ‘ರೆಸಿಡೆಂಟ್ ಈವಲ್ 6’ರ ಮಾರ್ಕೆಟಿಂಗ್ ಸ್ಟಂಟ್‌ನ ಚಿತ್ರಗಳಾಗಿವೆ ಎಂಬುದನ್ನು ಗಾಳಿಸುದ್ದಿಗಳ ಸತ್ಯಾಸತ್ಯತೆಯನ್ನು ಪತ್ತೆಹಚ್ಚುವ ವೆಬ್‌ಸೈಟ್ ‘ಸ್ನೋಪ್ಸ್.ಕಾಮ್’ ಕಂಡುಕೊಂಡಿದೆ.

ಆದಾಗ್ಯೂ, ಈ ಗಾಳಿ ಸುದ್ದಿ ಚೀನಾದಲ್ಲಿ ಭಾರೀ ತಲ್ಲಣವನ್ನು ಉಂಟು ಮಾಡಿದೆ ಎನ್ನುವುದನ್ನು ಆ ದೇಶದ ಸರಕಾರಿ ಮಾಧ್ಯಮದಲ್ಲಿ ಅದಕ್ಕೆ ನೀಡಲಾದ ವ್ಯಾಪಕ ಪ್ರಚಾರವೇ ಸಾಕ್ಷಿಯಾಗಿದೆ.

ಈ ಗಾಳಿಸುದ್ದಿಗಳ ಬಗ್ಗೆ ಝಾಂಬಿಯ ತನಿಖೆ ನಡೆಸಬೇಕೆಂಬುದಾಗಿಯೂ ಯಾಂಗ್ ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಝಾಂಬಿಯದ ಉಪ ರಕ್ಷಣಾ ಸಚಿವ ಕ್ರಿಸ್ಟೋಫರ್ ಮುಲೆಂಗ ಚೀನಾದ ಕ್ಷಮೆಯನ್ನೂ ಕೋರಿದರು. ‘‘ಝಾಂಬಿಯ ಮತ್ತು ಚೀನಾಗಳ ನಡುವೆ ಆತ್ಮೀಯ ಬಾಂಧವ್ಯ ನೆಲೆಸಿದ್ದು, ಈ ಊಹಾಪೋಹಗಳ ಬಗ್ಗೆ ಝಾಂಬಿಯ ವಿಷಾದ ವ್ಯಕ್ತಪಡಿಸುತ್ತದೆ’’ ಎಂದರು.

ಚೀನಾ ತುಂಬ ಹಿಂದಿನಿಂದಲೂ ಝಾಂಬಿಯದ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿದೆ. ಝಾಂಬಿಯದ ಹಲವಾರು ಮಹತ್ವದ ಯೋಜನೆಗಳಿಗೆ ಅದು ನಿಧಿಯನ್ನೂ ಪೂರೈಸಿದೆ.

ಆದಾಗ್ಯೂ, ಝಾಂಬಿಯದ ಮೇಲೆ ಚೀನಾದ ಹೆಚ್ಚುತ್ತಿರುವ ಪ್ರಭಾವ ಸ್ಥಳೀಯರಲ್ಲಿ ಅಸಹನೆಗೆ ಕಾರಣವಾಗಿದೆ. ಝಾಂಬಿಯದಲ್ಲಿನ ತನ್ನ ಯೋಜನೆಗಳಲ್ಲಿ ಚೀನಾ ಕಡಿಮೆ ಸಂಬಳ ಮತ್ತು ಅಪಾಯಕಾರಿ ಕೆಲಸದ ವಾತಾವರಣವನ್ನು ಒದಗಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X